AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಎಸ್​ಟಿ ದರ ಕ್ರಮಬದ್ಧಗೊಳಿಸುವಿಕೆ: ದೆಹಲಿಯಲ್ಲಿ ಬಿಜೆಪಿಯೇತರ ರಾಜ್ಯಸರ್ಕಾರಗಳ ವಿಚಾರ ವಿಮರ್ಶೆ, ಕರ್ನಾಟಕದ ನೇತೃತ್ವ

ಜಿಎಸ್​ಟಿ ದರ ಕ್ರಮಬದ್ಧಗೊಳಿಸುವಿಕೆ: ದೆಹಲಿಯಲ್ಲಿ ಬಿಜೆಪಿಯೇತರ ರಾಜ್ಯಸರ್ಕಾರಗಳ ವಿಚಾರ ವಿಮರ್ಶೆ, ಕರ್ನಾಟಕದ ನೇತೃತ್ವ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 29, 2025 | 1:47 PM

Share

ಇದು ಹಣಕಾಸು ಸಚಿವರ ಸಭೆಯಾಗಿರುವುದರಿಂದ ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವ ವಹಿಸಬೇಕಿತ್ತು. ಅದರೆ ಅವರು ಈ ಜವಾಬ್ದಾರಿಯನನ್ನು ಕೃಷ್ಣ ಭೈರೇಗೌಡರ ಹೆಗಲಿಗೆ ಹಾಕಿರುವುದು ಯುವಮಂತ್ರಿಯ ಕ್ಷಮತೆ ಮತ್ತು ಸಾಮರ್ಥ್ಯಗಳ ಮೇಲೆ ಅವರಿಗಿರುವ ವಿಶ್ವಾಸವನ್ನು ತೋರಿಸುತ್ತದೆ. ಕಂದಾಯ ಸಚಿವರಾಗಿ ಕೃಷ್ಣ ಭೈರೇಗೌಡ ಹಲವಾರು ಸುಧಾರಣೆಗಳನ್ನು ತಂದಿರುವುದು ಕನ್ನಡಿಗರಿಗೆ ಗೊತ್ತಿದೆ.

ದೆಹಲಿ, ಅಗಸ್ಟ್ 29: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 79ನೇ ಸ್ವಾತಂತ್ರ್ಯೋವ್ಸದ ಅಂಗವಾಗಿ ಕೆಂಪುಕೋಟೆಯಿಂದ ಮಾತಾಡುವಾದ ಜಿಎಸ್​ಟಿಯಲ್ಲಿ ಹೊಸ ತಲೆಮಾರು ಸುಧಾರಣೆಗಳನ್ನು ಜಾರಿಗೆ ತಂದು ಅಗತ್ಯ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿ ಭಾರತೀಯರಿಗೆ ದೀಪಾವಳಿಯ ಉಡುಗೊರೆ ನೀಡೋದಾಗಿ ಹೇಳಿದ್ದರು. ಇದೇ ಹಿನ್ನೆಲೆಯಲ್ಲಿ ದೆಹಲಿಯ ಕರ್ನಾಟಕ ಭವನದಲ್ಲಿಂದು ಕರ್ನಾಟಕ ಸರ್ಕಾರದ ಆತಿಥ್ಯದಲ್ಲಿ ಬಿಜೆಪಿಯೇತರ ಆಡಳಿತವಿರುವ 8 ರಾಜ್ಯಗಳ ಹಣಕಾಸ ಸಚಿವರು (finance ministers) ಜಿಎಸ್​ಟಿ ದರವನ್ನು ಕ್ರಮಬದ್ಧಗೊಳಿಸುವುದಕ್ಕೆ ಸಂಬಂಧಿಸಿದಂತೆ ವಿಚಾರ ವಿಮರ್ಶೆ ನಡೆಸಲು ಸಭೆ ಸೇರಿದ್ದಾರೆ. ರಾಜ್ಯದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ ನೇತೃತ್ವದಲ್ಲಿ ಸಭೆಯನ್ನು ಆಯೋಜಿಸಲಾಗಿದೆ. ಕೃಷ್ಣ ಭೈರೇಗೌಡ ಲವಲವಿಕೆಯಿಂದ ಓಡಾಡುತ್ತಾ ಬೇರೆ ರಾಜ್ಯಗಳ ಗಣ್ಯರನ್ನು ಸ್ವಾಗತಿಸುತ್ತಿರುವುದನ್ನು ನೋಡಬಹುದು.

ಇದನ್ನೂ ಓದಿ:   ಭೂ ಸುಧಾರಣಾ ಯೋಜನೆ ಬಗ್ಗೆ ವಿವರವಾದ ಮಾಹಿತಿ ಒದಗಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ