AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದ ಒಂದೆಡೆ ವರುಣಾರ್ಭಟ; ಇನ್ನೊಂದೆಡೆ ಮುಂಗಾರಿನ ಮುನಿಸು!

ರಾಜ್ಯದ ಒಂದೆಡೆ ವರುಣಾರ್ಭಟ; ಇನ್ನೊಂದೆಡೆ ಮುಂಗಾರಿನ ಮುನಿಸು!

ಭಾವನಾ ಹೆಗಡೆ
|

Updated on: Jun 29, 2026 | 11:53 AM

Share

ರಾಜ್ಯದಲ್ಲಿ ಒಂದೆಡೆ ವರುಣನ ಆರ್ಭವಿದ್ದರೆ, ಇನ್ನೊಂದೆಡೆ ಬರಗಾಲದ ಆತಂಕ ಎದುರಾಗಿದೆ. ಕಾರವಾರ, ಬಾಗಲಕೋಟೆ, ಕಲಬುರಗಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಗೋಕರ್ಣದಲ್ಲಂತೂ ನಿರಂತರ 36 ಗಂಟೆಗಳ ಮಳೆಗೆ ಗೋಕರ್ಣದ ಮಹಾಬಲೇಶ್ವರ ದೇಗುಲದ ಗರ್ಭಗುಡಿಗೆ ನೀರು ನುಗ್ಗಿ, ಆತ್ಮಲಿಂಗವೂ ಜಲಾವೃತವಾಗಿದೆ. ಗೋಕರ್ಣದ ಬೀದಿಗಳು ಹಾಗೂ ಅಂಗಡಿಗಳು ನೀರಿನಿಂದ ಆವೃತವಾಗಿ ಭಕ್ತರು, ವ್ಯಾಪಾರಿಗಳು ಪರದಾಡಿದರು. ಕುಮಟಾ-ಸಿದ್ದಾಪುರ ರಾಜ್ಯ ಹೆದ್ದಾರಿಯೂ ಹೊಳೆಯಂತಾಗಿತ್ತು.

ಬೆಂಗಳೂರು, ಜೂನ್ 29: ರಾಜ್ಯದಲ್ಲಿ ಒಂದೆಡೆ ವರುಣನ ಆರ್ಭವಿದ್ದರೆ, ಇನ್ನೊಂದೆಡೆ ಬರಗಾಲದ ಆತಂಕ ಎದುರಾಗಿದೆ. ಕಾರವಾರ, ಬಾಗಲಕೋಟೆ, ಕಲಬುರಗಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಗೋಕರ್ಣದಲ್ಲಂತೂ ನಿರಂತರ 36 ಗಂಟೆಗಳ ಮಳೆಗೆ ಗೋಕರ್ಣದ ಮಹಾಬಲೇಶ್ವರ ದೇಗುಲದ ಗರ್ಭಗುಡಿಗೆ ನೀರು ನುಗ್ಗಿ, ಆತ್ಮಲಿಂಗವೂ ಜಲಾವೃತವಾಗಿದೆ. ಗೋಕರ್ಣದ ಬೀದಿಗಳು ಹಾಗೂ ಅಂಗಡಿಗಳು ನೀರಿನಿಂದ ಆವೃತವಾಗಿ ಭಕ್ತರು, ವ್ಯಾಪಾರಿಗಳು ಪರದಾಡಿದರು. ಕುಮಟಾ-ಸಿದ್ದಾಪುರ ರಾಜ್ಯ ಹೆದ್ದಾರಿಯೂ ಹೊಳೆಯಂತಾಗಿತ್ತು.

ಆದರೆ ಉತ್ತರ ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟು ಬರಗಾಲದ ಆತಂಕ ಶುರುವಾಗಿದೆ. ಕೊಪ್ಪಳ, ಬೀದರ್ ಸೇರಿ ಹಲವು ಜಿಲ್ಲೆಗಳಲ್ಲಿ ಇನ್ನೂ ಮಳೆಗಾಗಿ ರೈತರು ಆಕಾಶ ನೋಡುತ್ತಾ, ಒಣ ಭೂಮಿಯಲ್ಲೇ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಮಳೆಯಿಲ್ಲದಿದ್ದರೆ ಬೆಳೆಯಿಲ್ಲ, ಬೆಳೆಯಿಲ್ಲದಿದ್ದರೆ ಹೊಟ್ಟೆಗೆ ಕೂಳಿಲ್ಲದಂತಹ ಪರಿಸ್ಥಿತಿ ಎದುರಾಗಬಹುದೆಂಬ ಭಯ ರೈತರನ್ನು ಕಾಡುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us