ಉಪಯೋಗ ಇಲ್ಲ ಅಂತ ಗೊತ್ತಾದಾಗ ಕಾರ್ತಿಕ್ಗೆ ಬೆಲೆ ಕೊಡಲಿಲ್ಲ ಸಂಗೀತಾ; ಅಸಲಿ ಮುಖ ಬಹಿರಂಗ
ಕಾರ್ತಿಕ್ ಮಹೇಶ್ ಅವರು ಯಾರಿಗೂ ಬೇಡವಾಗಿದ್ದಾರೆ. ಅವರ ಬೆನ್ನಿಗೆ ಪೆಟ್ಟಾಗಿದೆ. ಹಾಗಾಗಿ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಸ್ವತಃ ಸಂಗೀತಾ ಶೃಂಗೇರಿ ಕೂಡ ಸಿದ್ಧರಿಲ್ಲ. ಅತ್ತ, ತನಿಷಾ ಕುಪ್ಪಂಡ ಕೂಡ ಕಾರ್ತಿಕ್ ಅವರನ್ನು ಆಯ್ಕೆ ಮಾಡಿಕೊಂಡಿಲ್ಲ. ಈ ಪರಿಸ್ಥಿತಿ ಕಂಡು ತುಕಾಲಿ ಸಂತೋಷ್ ಮರುಕ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಕಾರ್ತಿಕ್ ಮಹೇಶ್ (Karthik Mahesh) ಅವರು ಓಡುವ ಕುದುರೆ ಆಗಿದ್ದರು. ಹಾಗಾಗಿ ಅವರಿಗೆ ಒಳ್ಳೆಯ ಬೇಡಿಕೆ ಇತ್ತು. ಎರಡು ತಂಡಗಳಾಗಿ ಟಾಸ್ಕ್ ಆಡುವಾಗ ಪ್ರತಿಯೊಬ್ಬರು ಕೂಡ ತಮ್ಮ ತಂಡದಲ್ಲಿ ಕಾರ್ತಿಕ್ ಇರಬೇಕು ಎಂದು ಬಯಸುತ್ತಿದ್ದರು. ಆದರೆ ಈಗ ಅದೇ ಕಾರ್ತಿಕ್ ಅವರು ಯಾರಿಗೂ ಬೇಡವಾಗಿದ್ದಾರೆ. ಅವರ ಬೆನ್ನಿಗೆ ಪೆಟ್ಟಾಗಿದೆ. ಹಾಗಾಗಿ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಸ್ವತಃ ಸಂಗೀತಾ ಶೃಂಗೇರಿ (Sangeetha Sringeri) ಕೂಡ ಸಿದ್ಧರಿಲ್ಲ. ಅತ್ತ, ತನಿಷಾ ಕುಪ್ಪಂಡ ಕೂಡ ಕಾರ್ತಿಕ್ ಅವರನ್ನು ಆಯ್ಕೆ ಮಾಡಿಕೊಂಡಿಲ್ಲ. ಈಗ ಕಾರ್ತಿಕ್ಗೆ ಎದುರಾಗಿರುವ ಪರಿಸ್ಥಿತಿ ಕಂಡು ತುಕಾಲಿ ಸಂತೋಷ್ ಮರುಕ ವ್ಯಕ್ತಪಡಿಸಿದ್ದಾರೆ. ‘ಇವತ್ತು ಅವನನ್ನು 10 ರೂಪಾಯಿಗೂ ಕೇಳಲಿಲ್ಲ. ಅವನಿಗೆ ಓಡೋಕೆ ಆಗಲ್ಲ ಅಂತ ಗೊತ್ತಾದ ತಕ್ಷಣ ಅವನನ್ನು ಬಿಟ್ಟೇ ಬಿಟ್ಟರು’ ಎಂದು ತುಕಾಲಿ ಹೇಳಿದ್ದಾರೆ. ಡಿ.21ರಂದು ‘ಕಲರ್ಸ್ ಕನ್ನಡ’ದಲ್ಲಿ ಈ ಸಂಚಿಕೆ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಲೈವ್ ನೋಡಬಹುದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

