‘ಕೊನೆಯ ಮುತ್ತು’; ಕಣ್ಣೀರಿಡುತ್ತಾ ಕೆಎಸ್ಆರ್ಟಿಸಿ ಬಸ್ಗೆ ಬೀಳ್ಕೊಡುಗೆ ನೀಡಿದ ಕೇರಳದ ಚಾಲಕ
ಹಲವು ವರ್ಷಗಳ ಕಾಲ ಬಸ್ ಚಲಾಯಿಸಿ ಜೀವನ ಸಾಗಿಸಿದ ನಂತರ, ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್ಟಿಸಿ) ಚಾಲಕರೊಬ್ಬರು ತಮ್ಮ ನಿವೃತ್ತಿಯ ದಿನವನ್ನು ಅತ್ಯಂತ ಭಾವನಾತ್ಮಕವಾಗಿ ಕಳೆದಿದ್ದಾರೆ. ಇಡುಕ್ಕಿ ಜಿಲ್ಲೆಯ ಕಟ್ಟಪ್ಪಣ ಮೂಲದ ಪೌಲ್ ಕುರಿಯನ್ ಎಂಬ ಚಾಲಕ, ಹಲವು ವರ್ಷಗಳಿಂದ ತಮ್ಮ ವೃತ್ತಿಜೀವನದ ಭಾಗವಾಗಿದ್ದ ಬಸ್ಗೆ ಅತ್ಯಂತ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದ್ದಾರೆ. ಬಸ್ ಚಕ್ರಗಳನ್ನು ಮುಟ್ಟಿ ನಮಸ್ಕರಿಸಿದ ಅವರು ಬಸ್ನ ಮುಂಭಾಗಕ್ಕೆ ಮುತ್ತನ್ನಿಟ್ಟು ಕಣ್ಣೀರು ಹಾಕಿದ್ದಾರೆ.
ತಿರುವನಂತಪುರಂ, ಸೆಪ್ಟೆಂಬರ್ 4: ಹಲವು ವರ್ಷಗಳ ಕಾಲ ಬಸ್ ಚಲಾಯಿಸಿ ಜೀವನ ಸಾಗಿಸಿದ ನಂತರ, ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್ಟಿಸಿ) ಚಾಲಕರೊಬ್ಬರು ತಮ್ಮ ನಿವೃತ್ತಿಯ ದಿನವನ್ನು ಅತ್ಯಂತ ಭಾವನಾತ್ಮಕವಾಗಿ ಕಳೆದಿದ್ದಾರೆ. ಇಡುಕ್ಕಿ ಜಿಲ್ಲೆಯ ಕಟ್ಟಪ್ಪಣ ಮೂಲದ ಪೌಲ್ ಕುರಿಯನ್ ಎಂಬ ಚಾಲಕ, ಹಲವು ವರ್ಷಗಳಿಂದ ತಮ್ಮ ವೃತ್ತಿಜೀವನದ ಭಾಗವಾಗಿದ್ದ ಬಸ್ಗೆ ಅತ್ಯಂತ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದ್ದಾರೆ. ಬಸ್ ಚಕ್ರಗಳನ್ನು ಮುಟ್ಟಿ ನಮಸ್ಕರಿಸಿದ ಅವರು ಬಸ್ನ ಮುಂಭಾಗಕ್ಕೆ ಮುತ್ತನ್ನಿಟ್ಟು ಕಣ್ಣೀರು ಹಾಕಿದ್ದಾರೆ.
ಪೌಲ್ ಕುರಿಯನ್ ಅವರು ತಮ್ಮ ಬಸ್ಸ್ಗೆ ಕೃತಜ್ಞತೆ ಸಲ್ಲಿಸಿದ ಈ ಭಾವುಕ ಕ್ಷಣವನ್ನು ಅಲ್ಲಿದ್ದವರು ವೀಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ನೆಟ್ಟಿಗರು ಚಾಲಕನ ಕರ್ತವ್ಯ ಪ್ರಜ್ಞೆ ಮತ್ತು ವಾಹನದೊಂದಿಗಿನ ಅವರ ಭಾವನಾತ್ಮಕ ಬಾಂಧವ್ಯವನ್ನು ಶ್ಲಾಘಿಸುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us