AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Polls: ಮತಯಾಚನೆಗೆ ಮೊದಲು  ಅಯ್ಯಪ್ಪಸ್ವಾಮಿ ಮಾಲೆ ಧರಿಸಿ ಮಗನೊಂದಿಗೆ ಶಬರಿಮಲೆಗೆ ಹೊರಟ ಕೆಎಂ ಶಿವಲಿಂಗೇಗೌಡ

Karnataka Assembly Polls: ಮತಯಾಚನೆಗೆ ಮೊದಲು  ಅಯ್ಯಪ್ಪಸ್ವಾಮಿ ಮಾಲೆ ಧರಿಸಿ ಮಗನೊಂದಿಗೆ ಶಬರಿಮಲೆಗೆ ಹೊರಟ ಕೆಎಂ ಶಿವಲಿಂಗೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 11, 2023 | 12:56 PM

ಅರಸೀಕೆರೆ ಜನ ಹೇಳುವ ಪ್ರಕಾರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದರೂ ಶಿವಲಿಂಗೇಗೌಡರು ಗೆಲುವು ಸಾಧಿಸುತ್ತಾರೆ.

ಹಾಸನ: ಜೆಡಿಎಸ್ ಪಕ್ಷಕ್ಕೆ ಇತ್ತೀಚಿಗೆ ಕೊಕ್ ನೀಡಿ ಕಾಂಗ್ರೆಸ್ ಪಕ್ಷ ಸೇರಿರುವ ಶಾಸಕ ಕೆಎಂ ಶಿವಲಿಂಗೇಗೌಡರು (KM Shivalinge Gowda) ತಮ್ಮ ಗೆಲುವಿಗಾಗಿ ಕ್ಷೇತ್ರದಲ್ಲಿ ಕಸರತ್ತು ನಡೆಸಿರುವಂತೆಯೇ ದೇವರ ಮೊರೆ ಕೂಡ ಹೋಗಿದ್ದಾರೆ. ತಮ್ಮ ಪುತ್ರ ಆದರ್ಶ ಗೌಡ ಜೊತೆ ಅವರು ಮಾಲೆ ಧರಿಸಿ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಶಬರಿಮಲೆಗೆ (Shabarimale) ತೆರಳಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಶಿವಲಿಂಗೇಗೌಡರು ಅರಸೀಕೆರೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ (Ayyappa Swamy temple) ಮಾಲೆ ಧರಿಸಿದರು. ಹಾಗೆ ನೋಡಿದರೆ, ಅರಸೀಕೆರೆಯಲ್ಲಿ ಶಿವಲಿಂಗೇಗೌಡರು ಜನಪ್ರಿಯ ನಾಯಕರು ಅನ್ನೋದು ನಿರ್ವಿವಾದಿತ. ಜನಗಳು ಹೇಳುವ ಪ್ರಕಾರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದರೂ ಗೌಡರು ಗೆಲುವು ಸಾಧಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ