ಸಣ್ಣ ಕ್ರಿಮಿಯನ್ನು ಕೊಲ್ಲಬಾರದೆಂದು ಕುರಾನ್ನಲ್ಲಿದೆ, ಆದ್ರೆ…ಕೋಡಿಮಠಶ್ರೀ ಸ್ಫೋಟಕ ಮಾತು
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ (Pahalgam Terror Attack) 27 ಜನರು ಸಾವನ್ನಪ್ಪಿದ್ದು, ಈ ಸಂಬಂಧ ಉಗ್ರರನ್ನು ಸದೆಬಡಿಯಲು ಭಾರತ ಸನ್ನದ್ಧವಾಗಿದೆ. ಹೀಗಾಗಿ ಉಗ್ರರ ನೆರವಿಗ ನಿಂತಿರುವ ಪಾಕಿಸ್ತಾನಕ್ಕೆ ಕೆಲ ನಿರ್ಬಂಧಗಳನ್ನು ಹೇರಿ ಬಿಸಿಮುಟ್ಟಿಸಲು ಮುಂದಾಗಿದೆ. ಇನ್ನು ಪಹಲ್ಗಾಮ್ ದಾಳಿ ಬಗ್ಗೆ ಹಾಸನ ಜಿಲ್ಲೆಯ ಅರಸಿಕೇರೆಯ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅವರು ಬಾಗಲಕೋಟೆಯಲ್ಲಿಂದು ಸ್ಫೋಟಕ ಭವಿಷ್ಯ ನುಡಿದ್ದಾರೆ.
ಬಾಗಲಕೋಟೆ, (ಮೇ 04): ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ (Pahalgam Terror Attack) 27 ಜನರು ಸಾವನ್ನಪ್ಪಿದ್ದು, ಈ ಸಂಬಂಧ ಉಗ್ರರನ್ನು ಸದೆಬಡಿಯಲು ಭಾರತ ಸನ್ನದ್ಧವಾಗಿದೆ. ಹೀಗಾಗಿ ಉಗ್ರರ ನೆರವಿಗ ನಿಂತಿರುವ ಪಾಕಿಸ್ತಾನಕ್ಕೆ ಕೆಲ ನಿರ್ಬಂಧಗಳನ್ನು ಹೇರಿ ಬಿಸಿಮುಟ್ಟಿಸಲು ಮುಂದಾಗಿದೆ. ಇದರಿಂದ ಪಾಕ್ ಹಾಗೂ ಭಾರತ ನಡುವೆ ಯುದ್ಧದ ಭೀತಿ ಶುರುವಾಗಿದೆ. ಇನ್ನು ಪಹಲ್ಗಾಮ್ ದಾಳಿ ಬಗ್ಗೆ ಹಾಸನ ಜಿಲ್ಲೆಯ ಅರಸಿಕೇರೆಯ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅವರು ಬಾಗಲಕೋಟೆಯಲ್ಲಿಂದು ಸ್ಫೋಟಕ ಭವಿಷ್ಯ ನುಡಿದ್ದಾರೆ.
ಹಿಂದೆ ರಾಜರು ಮಹಾರಾಜರು ಚಕ್ರವರ್ತಿಗಳು ಇದ್ದರು.. ಅವರ ಹತ್ತಿರ ಒಂದು ಸೀಟ್ ಯಾವಾಗಲೂ ಗುರುಗಳಿಗೆ ಅಂತ ಇತ್ತು. ಅವರು ಏನೇ ಮಾಡುತ್ತಿದ್ದರು ಗುರುಗಳನ್ನು ಕೇಳ್ತಿದ್ದರು. ಗುರು ಅಂದರೆ ಧರ್ಮ ಅಂತ , ಧರ್ಮ ಬಿಟ್ಟು ಮಾಡ್ತಿರಲಿಲ್ಲ. ಈಗ ಬರುವಂತವರಿಗೆ ಗುರಿನೂ ಇಲ್ಲ ಗುರುನೂ ಇಲ್ಲ. ಅವರು ಹೇಳಿದ್ದೇ ಧರ್ಮ ಮಾಡಿದ್ದೇ ಆಚಾರ. ಇಂತಹ ಪ್ರಸಂಗ ಇರುವಾಗ ಯಾವುದೇ ಧರ್ಮ ಇರಲಿ ಮಾನವೀಯ ಮೌಲ್ಯ ಒಳಗೊಂಡಿರಬೇಕು ಅದು ಎಂದರು.
ದಯೆ ಇಲ್ಲದ ಧರ್ಮ ಅದಾವುದು. ದಯವೇ ಧರ್ಮದ ಮೂಲ. ದಯೆ ಇಲ್ಲದ ಧರ್ಮ ಧರ್ಮವೇ ಅಲ್ಲ. ಆ ದೃಷ್ಟಿಯಿಂದ ಯಾರೇ ತಪ್ಪು ಮಾಡಿದರೂ ತಪ್ಪೆ. ಕುರಾನ್ ನಲ್ಲಿ ಹೇಳ್ತಾರೆ ಸಣ್ಣ ಕ್ರಿಮಿಯನ್ನು ಕೊಲ್ಲಬಾರದು ಅಂತ. ಕೊಂದರೆ ಸಾವಿರ ಜನರ ಕೊಂದಷ್ಟು ಪಾಪ ಬರುತ್ತೆ ಅಂತ. ಅಂತಹ ಮಾನವೀಯ ಮೌಲ್ಯದ ದಯಾಪೂರ್ಣ ಮಾತು ಕುರಾನ್ನಲ್ಲಿದೆ. ಅಂತಹ ಅನುಯಾಯಿಗಳು ಹೀಗೆ ಮಾಡುತ್ತಾರೆ ಅಂದರೆ ಅವರ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ ಎಂದು ಹೇಳಿದರು.