ತುಂಗಭದ್ರಾ ಡ್ಯಾಂ ಗೇಟ್​ ಅಳವಡಿಕೆ: ಕಾರ್ಮಿಕರ ಸಾಹಸಮಯ ಕೆಲಸದ ವಿಡಿಯೋ ವೈರಲ್

ತುಂಡಾಗಿ ನೀರು ಪಾಲಾಗಿದ್ದ ತುಂಗಭದ್ರಾ ಜಲಾಶಯದ ಕ್ರಸ್ಟ್​ಗೇಟ್ 19ಕ್ಕೆ ಸ್ಟಾಪ್​ ಲಾಗ್​​ ಗೇಟ್​ ಅಳವಡಿಸುವ ಸಾಹಸ ಕಾರ್ಯ ಯಶಸ್ವಿಯಾಗಿದೆ. ಈ ಸ್ಟಾಪ್​ ಲಾಗ್​ ಗೇಟ್​ ಅಳವಡಿಕೆಗೆ ಶ್ರಮಿಸಿದ ಕಾರ್ಮಿಕರ ಸಾಹಸ ಕೆಲಸದ ವಿಡಯೋ ವೈರಲ್​​ ಆಗಿದೆ. ಕಾರ್ಮಿಕರ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ತುಂಗಭದ್ರಾ ಡ್ಯಾಂ ಗೇಟ್​ ಅಳವಡಿಕೆ: ಕಾರ್ಮಿಕರ ಸಾಹಸಮಯ ಕೆಲಸದ ವಿಡಿಯೋ ವೈರಲ್
| Updated By: ವಿವೇಕ ಬಿರಾದಾರ

Updated on:Aug 18, 2024 | 10:54 AM

ಕೊಪ್ಪಳ, ಆಗಸ್ಟ್​ 18: ತುಂಗಭದ್ರಾ ಜಲಾಶಯದ (Tungabhadra Dam) 19ನೇ ಕ್ರಸ್ಟ್​ಗೇಟ್ ತುಂಡಾಗಿ ನೀರುಪಾಲಾಗಿತ್ತು. ಕೂಡಲೇ ಎಚ್ಚೆತ್ತ ಸರ್ಕಾರ, ಹೊಸ ಸ್ಟಾಪ್​ ಲಾಗ್​​ ಗೇಟ್ (Stop Log Gate)​ ಅಳವಡಿಸಲು ಸೂಚಿಸಿತ್ತು. ಅದರಂತೆ ಡ್ಯಾಂ​​​ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ನೂರಾರು ಸಿಬ್ಬಂದಿ ಪ್ರಾಣವನ್ನೇ ಪಣಕ್ಕಿಟ್ಟು ಶ್ರಮಿಸಿ ಗೇಟ್​ ಅವಳಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಹರಿಯುವ ನೀರನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಮಿಕ ಜೀವ ಪಣಕ್ಕಿಟ್ಟು ಜೋತಾಡುತ್ತ ಜಲಾಶಯದ ಗೇಟ್​ ಅಳವಡಿಸುವ ದೃಶ್ಯ ಮೈ ಜುಮ್ಮೇನಿಸುತ್ತದೆ. ಹಗ್ಗದ ಮೂಲಕ ಹರಿಯುವ ನೀರಲ್ಲಿ ಇಳಿದು ತಜ್ಞರ ಸಲಹೆ ಅಂತೆ ಕಾರ್ಮಿಕರು ಗೇಟ್ ಅಳವಡಿಸಿದ್ದಾರೆ.

ಕನ್ನಯ್ಯನಾಯ್ಡುಗೆ ಧನ್ಯವಾದ ಹೇಳಿದ ಡಿ.ಕೆ.ಶಿವಕುಮಾರ್

ಹರಿಯುವ ನೀರನ್ನು ನಿಲ್ಲಿಸುವಲ್ಲಿ ಸಿಬ್ಬಂದಿಗಳು ಸಫಲರಾಗಿದ್ದು, ಈ ಹಿನ್ನೆಲೆಯಲ್ಲಿ ಕ್ರಸ್ಟಗೇಟ್ ತಜ್ಞ ಕನ್ನಯ್ಯನಾಯ್ಡು ಜೊತೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ‘ ಧನ್ಯವಾದ ಹೇಳಿದ್ದಾರೆ. ಈ ಗೇಟ್ ದುರಸ್ತಿ ಕೆಲಸ ನಿರ್ವಹಿಸುವಲ್ಲಿ ಕನ್ನಯ್ಯ ನಾಯ್ಡು ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಕೈ ಮುಖಂಡ ಶ್ರೀನಿವಾಸ ರೆಡ್ಡಿ ಮೊಬೈಲ್​ಗೆ ಕರೆ ಮಾಡಿ ಮಾತನಾಡಿದರು.

ಇದನ್ನೂ ಓದಿ: ಕಳೆದ ಹತ್ತು ವರ್ಷದಲ್ಲಿ ಕನಿಷ್ಟ ಮಟ್ಟಕ್ಕಿಳಿದ‌ ತುಂಗಭದ್ರಾ ಜಲಾಶಯ ನೀರಿನ ಪ್ರಮಾಣ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published On - 10:10 am, Sun, 18 August 24

Follow us