Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯ: ವಿದ್ಯುತ್ ದೀಪಾಲಂಕಾರದಲ್ಲಿ ಜಗಮಗಿಸುತ್ತಿದೆ ಕೃಷ್ಣರಾಜಸಾಗರ; ಇಲ್ಲಿದೆ ವಿಡಿಯೋ

ಮಂಡ್ಯ: ವಿದ್ಯುತ್ ದೀಪಾಲಂಕಾರದಲ್ಲಿ ಜಗಮಗಿಸುತ್ತಿದೆ ಕೃಷ್ಣರಾಜಸಾಗರ; ಇಲ್ಲಿದೆ ವಿಡಿಯೋ

ಪ್ರಶಾಂತ್​ ಬಿ.
| Updated By: ಕಿರಣ್ ಹನುಮಂತ್​ ಮಾದಾರ್

Updated on:Oct 15, 2023 | 10:19 PM

ಮಂಡ್ಯ(Mandya)ದ ಕೆಆರ್​ಎಸ್​ ಡ್ಯಾಂ(KRS Dam) ಹಾಗೂ ಬೃಂದಾವನಕ್ಕೆ ವಿಶೇಷವಾಗಿ ಬಣ್ಣದ ವಿದ್ಯುತ್ ದೀಪಗಳಿಂದ ದೀಪಾಂಲಕಾರ ಮಾಡಲಾಗಿದ್ದು, ಪ್ರವಾಸಿಗರ ಕಣ್ಮನ‌ ಸೂರೆಗೊಳ್ಳುತ್ತಿದೆ. ಹೌದು, ನಾಳೆಯಿಂದ 3 ದಿನ ನಡೆಯುವ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ನಾಳೆ ಮಧ್ಯಾಹ್ನ 2.30ಕ್ಕೆ ಶುಭ ಮಕರ ಲಗ್ನದಲ್ಲಿ ದಸರಾಗೆ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಲಿದ್ದಾರೆ.

ಮಂಡ್ಯ, ಅ.15: ವಿಶ್ವವಿಖ್ಯಾತ ಮೈಸೂರು ದಸರಾ(Mysore Dasara)ಮಹೋತ್ಸವ ಹಿನ್ನಲೆ ಮಂಡ್ಯದಲ್ಲಿ ದಸರಾ ಹಬ್ಬದ ಸಡಗರ ಕಳೆಗಟ್ಟಿದೆ. ದಸರಾ ಪ್ರಯುಕ್ತ ಮಂಡ್ಯ(Mandya)ದ ಕೆಆರ್​ಎಸ್​ ಡ್ಯಾಂ(KRS Dam) ಹಾಗೂ ಬೃಂದಾವನಕ್ಕೆ ವಿಶೇಷವಾಗಿ ಬಣ್ಣದ ವಿದ್ಯುತ್ ದೀಪಗಳಿಂದ ದೀಪಾಂಲಕಾರ ಮಾಡಲಾಗಿದ್ದು, ಪ್ರವಾಸಿಗರ ಕಣ್ಮನ‌ ಸೂರೆಗೊಳ್ಳುತ್ತಿದೆ. ಹೌದು, ನಾಳೆಯಿಂದ 3 ದಿನ ನಡೆಯುವ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ನಾಳೆ ಮಧ್ಯಾಹ್ನ 2.30ಕ್ಕೆ ಶುಭ ಮಕರ ಲಗ್ನದಲ್ಲಿ ದಸರಾಗೆ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಲಿದ್ದಾರೆ. ಬನ್ನಿ ಮಂಟಪದಿಂದ ಪಟ್ಟಣದ ರಂಗನಾಥ ದೇಗುಲದವರೆಗೂ ಮೆರವಣಿಗೆ‌‌‌ ನಡೆಯಲಿದೆ. ಇನ್ನು ದಸರಾ ಉದ್ಘಾಟನೆಯಲ್ಲಿ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಸಂಸದೆ ಸುಮಲತಾ ಅಂಬರೀಶ್, ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಸೇರಿ ಇನ್ನಿತರ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published on: Oct 15, 2023 10:18 PM