ಕಾವೇರಿಯಲ್ಲಿ ತೀರ್ಥೋದ್ಭವ ಆಗುತ್ತಿದ್ದಂತೆ ಮತ್ತೊಮ್ಮೆ ಗರಿಷ್ಠ ಮಟ್ಟ ತಲುಪಿದ ಕೆಆರ್​ಎಸ್

|

Updated on: Oct 17, 2024 | 10:30 AM

ಪ್ರಸಕ್ತ ಮಾನ್ಸೂನ್ ಸೀಸನ್​ನಲ್ಲಿ ಉತ್ತಮ ಮಳೆಯ ಕಾರಣ ಸಂತುಷ್ಟಿಯಿಂದ ಬೀಗುತ್ತಿರುವ ರೈತ ಕೆಅರ್​​ಎಸ್ ಜಲಾಶಯ ಈ ವರ್ಷ ಮೂರನೇ ಸಲ ಭರ್ತಿಯಾಗಿರುವುದನ್ನು ಕಂಡು ಮತ್ತಷ್ಟು ಸಂತಸಭರಿತನಾಗಿದ್ದಾನೆ ಮತ್ತು ವರುಣ ದೇವನಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾನೆ.

ಮಂಡ್ಯ: ಇಂದು ಬೆಳಗ್ಗೆ 7.40 ಕ್ಕೆ ಕೊಡಗು ಜಿಲ್ಲೆ ಭಾಗಮಂಡಲದ ಹತ್ತಿರವಿರುವ ತಲಕಾವೇರಿಯಲ್ಲಿ ಅರ್ಚಕರ ಸಮ್ಮುಖ ಮತ್ತು ಸಾವಿರಾರು ಭಕ್ತರ ಜಯಘೋಷಗಳ ರೋಮಾಂಚನದೊಂದಿಗೆ ತೀರ್ಥೋದ್ಭವ ಸಂಭವಿಸಿದೆ. ಅದು ಸರಿ, ಇಲ್ನೋಡಿ ಮಂಡ್ಯ ಜಿಲ್ಲೆ ಮತ್ತು ಸುತ್ತಮುತ್ತ ಭಾಗಗಳ ಜೀವನಾಡಿ ಕೆಅರ್​ಎಸ್ ಡ್ಯಾಂ ಸಹ ತುಂಬಿ ತುಳುಕುತ್ತಿದೆ. ನಿಮಗೆ ಗೊತ್ತಿರುವ ಹಾಗೆ ಜಲಾಶಯ ಗರಿಷ್ಠ ಮಟ್ಟ 124.80 ಅಡಿಯಾಗಿದ್ದು ನೀರು ಈ ಮಟ್ಟವನ್ನು ತಲುಪಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕಾವೇರಿ ತೀರ್ಥೋದ್ಭವ: ಆ ದಿವ್ಯ ಕ್ಷಣ ಹೇಗಿತ್ತು ನೋಡಿ

Follow us on