ಮಂಡ್ಯ: ಇಂದು ಬೆಳಗ್ಗೆ 7.40 ಕ್ಕೆ ಕೊಡಗು ಜಿಲ್ಲೆ ಭಾಗಮಂಡಲದ ಹತ್ತಿರವಿರುವ ತಲಕಾವೇರಿಯಲ್ಲಿ ಅರ್ಚಕರ ಸಮ್ಮುಖ ಮತ್ತು ಸಾವಿರಾರು ಭಕ್ತರ ಜಯಘೋಷಗಳ ರೋಮಾಂಚನದೊಂದಿಗೆ ತೀರ್ಥೋದ್ಭವ ಸಂಭವಿಸಿದೆ. ಅದು ಸರಿ, ಇಲ್ನೋಡಿ ಮಂಡ್ಯ ಜಿಲ್ಲೆ ಮತ್ತು ಸುತ್ತಮುತ್ತ ಭಾಗಗಳ ಜೀವನಾಡಿ ಕೆಅರ್ಎಸ್ ಡ್ಯಾಂ ಸಹ ತುಂಬಿ ತುಳುಕುತ್ತಿದೆ. ನಿಮಗೆ ಗೊತ್ತಿರುವ ಹಾಗೆ ಜಲಾಶಯ ಗರಿಷ್ಠ ಮಟ್ಟ 124.80 ಅಡಿಯಾಗಿದ್ದು ನೀರು ಈ ಮಟ್ಟವನ್ನು ತಲುಪಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಾವೇರಿ ತೀರ್ಥೋದ್ಭವ: ಆ ದಿವ್ಯ ಕ್ಷಣ ಹೇಗಿತ್ತು ನೋಡಿ