ಕೆಎಸ್ಆರ್ಟಿಸಿ ಐರಾವತ ಕ್ಲಬ್ ಕ್ಲಾಸ್ 2.0: ಹೊಸ ವೋಲ್ವೋ ಬಸ್ಗಳು ರಸ್ತೆಗಿಳಿಯಲು ಸಿದ್ಧ
KSRTC Airavat Club Class 2.O: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) 20 ಹೊಸ ವೋಲ್ವೋ ಮಲ್ಟಿ-ಆಕ್ಸಲ್ ಐರಾವತ ಕ್ಲಬ್ ಕ್ಲಾಸ್ 2.0 ಸೀಟರ್ ಬಸ್ಗಳಿಗೆ ಚಾಲನೆ ನೀಡಲಿದೆ. ರಸ್ತೆಗಿಳಿಯಲು ಸಿದ್ಧವಾಗಿರುವ ಹೊಸ ಬಸ್ಗಳ ವಿಶೇಷತೆಗಳೇನು? ಇಲ್ಲಿದೆ ಮಾಹಿತಿ.
ಬೆಂಗಳೂರು, ಅಕ್ಟೋಬರ್ 30: ಕೆಎಸ್ಆರ್ಟಿಸಿ ಹೊಸ ಐರಾವತ ಕ್ಲಬ್ ಕ್ಲಾಸ್ 2.0 ಆವೃತ್ತಿಯ 20 ಬಸ್ಗಳನ್ನು ಇಂದು ಲೋಕಾರ್ಪಣೆಗೊಳಿಸುತ್ತಿದೆ. ಹೊಸ ಬಸ್ಗಳು ಜನಪ್ರಿಯ ಐರಾವತ್ ಕ್ಲಬ್ ಕ್ಲಾಸ್ನ ನವೀಕರಿಸಿದ ಆವೃತ್ತಿ (2.0) ಆಗಿದೆ. ಐರಾವತ್ ಕ್ಲಬ್ ಕ್ಲಾಸ್ ಅನ್ನು ಮೊದಲು 2003-04 ರಲ್ಲಿ ಕೆಎಸ್ಆರ್ಟಿಸಿ ರಸ್ತೆಗಿಳಿಸಿತ್ತು.
ಬಸ್ಗಳು ವೋಲ್ವೋದ ‘9600 ಸರಣಿ’ಯ ಭಾಗವಾಗಿದ್ದು, ಕೆಎಸ್ಆರ್ಟಿಸಿಯ ಪ್ರಮುಖ ಅಂಬಾರಿ ಉತ್ಸವದ ಅದೇ ಸರಣಿಯಾಗಿದೆ. ಪ್ರತಿ ಬಸ್ಗೆ 1.78 ಕೋಟಿ ರೂ. ವ್ಯಯಿಸಲಾಗಿದೆ.
ಹೊಸ ಬಸ್ಗಳು ಅಸ್ತಿತ್ವದಲ್ಲಿರುವ ಐರಾವತ್ ಕ್ಲಬ್ ಕ್ಲಾಸ್ ಲೋಗೋವನ್ನೇ ಹೊಂದಿರಲಿದ್ದು, ಅದೇ ಬ್ರ್ಯಾಂಡಿಂಗ್ನಡಿ ಇರಲಿದೆ. ಆದರೆ ಫೈರ್ ಅಲಾರ್ಮ್ ಮತ್ತು ಪ್ರೊಟೆಕ್ಷನ್ ಸಿಸ್ಟಮ್ (ಎಫ್ಎಪಿಎಸ್) ಸೇರಿದಂತೆ ಕೆಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿವೆ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೇರೆಯವರ ನೆರವಿಲ್ಲದೆ ಮೆಟ್ಟಿಲು ಹತ್ತಿ ಮೊದಲ ಮಹಡಿಗೆ ಹೋದ ಯಡಿಯೂರಪ್ಪ

ಇಂದು ಅಧಿಕಾರ ವಹಿಸಿಕೊಂಡ ದೆಹಲಿ ಸಿಎಂ, ಸಚಿವರಿಂದ ಯಮುನಾ ಘಾಟ್ನಲ್ಲಿ ಆರತಿ

ಗಂಡ ಸತ್ತ ದಿನವೇ ಸಂಚು ಮಾಡಿದ್ರು: ಗುರುಪ್ರಸಾದ್ ಪತ್ನಿ ಸುಮಿತ್ರಾ ನೇರ ಮಾತು

ಪ್ರಧಾನಿ ಮೋದಿಯೊಂದಿಗೆ ಮಾತಾಡುವಾಗ ಆಂಧ್ರ ಡಿಸಿಎಂ ಸಂಕೋಚದ ಮುದ್ದೆಯಾಗಿದ್ದರು
