Loading video

ಹುಬ್ಬಳ್ಳಿಯಿಂದ ಸವದತ್ತಿಗೆ ಹೊರಟಿದ್ದ ಬಸ್ಸು ಉರುಳಿಬಿದ್ದು 15 ಜನರಿಗೆ ಗಾಯ, ಬಸ್ಸಿನ ಆ್ಯಕ್ಸೆಲ್ ಮುರಿದು ದುರ್ಘಟನೆ

|

Updated on: Feb 27, 2025 | 4:02 PM

ಕೆಎಸ್ಸಾರ್ಟಿಸಿ ಒಡೆತನಕ್ಕೆ ಸೇರಿದ ಬಸ್ಸುಗಳು ಪದೇಪದೆ ಅಪಘಾಗತಗಳಿಗೆ ಈಡಾಗುತ್ತಿರುವುದು ಆತಂಕದ ವಿಷಯವಾಗಿದೆ ಅಂತ ಮೊದಲು ಸಹ ನಾವು ವರದಿ ಮಾಡಿದ್ದೇವೆ. ಆ್ಯಕ್ಸೆಲ್ ಮುರಿದು, ಟೈರ್ ಬರ್ಸ್ಟ್ ಆಗುವುದು ಸಾಮಾನ್ಯ ಸಂಗತಿಯಲ್ಲ. ಡಿಪೋಗಳಲ್ಲಿ ಕೆಲಸ ಮಾಡುವ ಮೆಕ್ಯಾನಿಕ್ ಗಳು ಅಸಡ್ಡೆ ತೋರಿರುವ ಸಾಧ್ಯತೆ ಇದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಂಥ ಸಂಗತಿಗಳ ಕಡೆ ಗಮನ ಹರಿಸಬೇಕು.

ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಸವದತ್ತಿಗೆ ಹೊರಟಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (KSRTC) ಸೇರಿದ್ದ ಬಸ್ಸಿನ ಆ್ಯಕ್ಸೆಲ್ ಕಟ್ಟಾಗಿದ್ದರಿಂದ ಬ್ಯಾಹಟ್ಟಿಯಿಂದ ಕೊಂಚ ದೂರದಲ್ಲಿ ಉರುಳಿಬಿದ್ದು 15 ಜನ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದ್ದ್ದು ಚಿಕಿತ್ಸೆ ಪಡೆಯುತ್ತಿರುವ ಕೆಲ ಗಾಯಾಳುಗಳು ಮಾಧ್ಯಮಗಳೊಂದಿಗೆ ಮಾತಾಡಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ಅವರು ಹೇಳುವ ಪ್ರಕಾರ 8-10 ಜನ ಗಂಭೀರವಾಗಿ ಗಾಯಗೊಂಡಿದ್ದು ಬಸ್ಸೇನಾದರೂ ಹತ್ತಿರದಲ್ಲೇ ಇರುವ ಗುಂಡಿಗೆ ಬಿದ್ದಿದ್ದರೆ ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಇತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚಾರ್ಮಾಡಿ ಘಾಟ್ ತಿರುವಿನಲ್ಲೇ ಕೆಎಸ್​ಆರ್​ಟಿಸಿ ಬಸ್ ಸ್ಟೇರಿಂಗ್ ಕಟ್: ಆಮೇಲೇನಾಯ್ತು?