V Shashi Kumar handovers baton: ಮಂಗಳೂರು ಪೊಲೀಸ್ ಆಯಕ್ತರಾಗಿ ಕುಲದೀಪ್ ಆರ್ ಜೈನ್ ಚಾರ್ಜ್ ವಹಿಸಿಕೊಂಡರು

ದಕ್ಷ ಮತ್ತು ಖಡಕ್ ಅಧಿಕಾರಿಯೆನಿಸಿಕೊಂಡಿದ್ದ ಶಶಿಕುಮಾರ್ ಸದಾ ಕೋಮು ದಳ್ಳುರಿಯಲ್ಲಿ ಉರಿಯುವ ಕರಾವಳಿ ನಗರದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಗೊಂಡಿರಲು ಸಾಕಷ್ಟು ಶ್ರಮಿಸಿದ್ದರು.

V Shashi Kumar handovers baton: ಮಂಗಳೂರು ಪೊಲೀಸ್ ಆಯಕ್ತರಾಗಿ ಕುಲದೀಪ್ ಆರ್ ಜೈನ್ ಚಾರ್ಜ್ ವಹಿಸಿಕೊಂಡರು
|

Updated on: Feb 24, 2023 | 1:19 PM

ಮಂಗಳೂರು: ಗುರುವಾರಂದು ರೇಲ್ವೇ ಡಿಐಜಿ ಆಗಿ ವರ್ಗಾವಣೆಗೊಂಡ ಮಂಗಳೂರು ಪೊಲೀಸ್ ಕಮೀಶನರ್ ಎನ್ ಶಶಿಕುಮಾರ್ (N Shashikumar) ಸ್ಥಾನಕ್ಕೆ 2011 ಬ್ಯಾಚ್ ನ ಐಪಿಎಸ್ ಅಧಿಕಾರಿ (IPS officer) ಮತ್ತು ನಿನ್ನೆಯವರೆಗೆ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿಯಾಗಿದ್ದ ಕುಲದೀಪ್ ಆರ್ ಜೈನ್ (Kuldeep R Jain) ಬಂದಿದ್ದಾರೆ. ದಕ್ಷ ಮತ್ತು ಖಡಕ್ ಅಧಿಕಾರಿಯೆನಿಸಿಕೊಂಡಿದ್ದ ಶಶಿಕುಮಾರ್ ಸದಾ ಕೋಮು ದಳ್ಳುರಿಯಲ್ಲಿ ಉರಿಯುವ ಕರಾವಳಿ ನಗರದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಗೊಂಡಿರಲು ಸಾಕಷ್ಟು ಶ್ರಮಿಸಿದ್ದರು. ಈ ಹಿನ್ನೆಲೆಯಲ್ಲಿ ಮೂಲತಃ ರಾಜಸ್ತಾನದವರಾದರೂ ತಮಿಳುನಾಡು ನಲ್ಲಿ ವಿಧ್ಯಾಭ್ಯಾಸ ಮಾಡಿರುವ ಕುಲದೀಪ್ ಮೇಲೆ ಗುರುತರವಾದ ಜವಾಬ್ದಾರಿ ಇದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us