ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಪದೇಪದೇ ಪ್ರಜ್ವಲ್ ರೇವಣ್ಣ (Prajwal Revanna) ಪ್ರಕರಣದ ಜೊತೆ ವಿದೇಶವೊಂದರಲ್ಲಿ ಸಾವನ್ನಪ್ಪಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಮಗ ರಾಕೇಶ್ ಸಿದ್ದರಾಮಯ್ಯ (Rakesh Siddaramaiah) ಪ್ರಕರಣವನ್ನು ಥಳುಕು ಹಾಕುತ್ತಿರುವುದು ಕನ್ನಡಿಗರಲ್ಲಿ ಸೋಜಿಗ ಮೂಡಿಸುತ್ತಿದೆ. ರಾಕೇಶ್ ಯಾವುದೇ ಅಪರಾಧವೆಸಗಿ ತಲೆಮರೆಸಿಕೊಳ್ಳಲು ವಿದೇಶಕ್ಕೆ ಹೋಗಿರಲಿಲ್ಲ. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಿದ್ದಾಗ ಅವರ ಸಾವು ಸಂಭವಿಸಿತ್ತು. ಬೆಲ್ಜಿಯಂನಲ್ಲಿ ಅವರೇನಾದರೂ ಕಾನೂನುಬಾಹಿರ ಕೆಲಸ ಮಾಡಿದ್ದರೆ ಅಲ್ಲಿನ ಸರ್ಕಾರ ರಾಕೇಶ್ ದೇಹವನ್ನು ಅಷ್ಟು ಸುಲಭವಾಗಿ ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸುತ್ತಿತ್ತೇ? ಅಸಲಿಗೆ ಅದಕ್ಕೂ ಪ್ರಜ್ವಲ್ಲ ಪ್ರಕರಣಕ್ಕೂ ಎಲ್ಲಿಯ ಸಂಬಂಧ? ಇವತ್ತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕುಮಾರಸ್ವಾಮಿ, ರಾಜ್ಯ ಸರ್ಕಾರಕ್ಕೆ ಪ್ರಜ್ವಲ್ ಪ್ರಕರಣವನ್ನು ಜೀವಂತವಾಗಿಡುವುದಷ್ಟೇ ಬೇಕಾಗಿದೆ ಪೆನ್ ಡ್ರೈವ್ ಹಂಚಿದವರು ಯಾರು ಅಂತ ತನಿಖೆ ಮಾಡಿ ಸತ್ಯಾಂಶ ಹೊರತರುವುದು ಬೇಕಿಲ್ಲ, ಇದುವರೆಗೆ ಪೆನ್ ಡ್ರೈವ್ ಹಂಚಿದವರ ಬಂಧನ ಯಾಕಾಗಿಲ್ಲ ಎಂದು ಕೇಳಿದರು. ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ಸಿದ್ದರಾಮಯ್ಯ ಸರ್ಕಾರ ನಡೆಸಿದೆ ಎಂದು ಕುಮಾರಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಾಟಾಚಾರಕ್ಕೆ ಮತ್ತು ಗೇಲಿ ಮಾಡುತ್ತಾ ಡಿಕೆ ಶಿವಕುಮಾರ್ ಕ್ಷಮೆಯಾಚಿಸಿದ ಹೆಚ್ ಡಿ ಕುಮಾರಸ್ವಾಮಿ!