AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಕ್ಕುಂಡಿಯ ಸಿಕ್ಕ ಚಿನ್ನ ಮನೆಯಲ್ಲಿ ಇಟ್ಕೊಂಡ್ರೆ ಏನಾಗತ್ತೆ ಗೊತ್ತಾ? ಗ್ರಾಮದ ಅಜ್ಜಿಯ ಸ್ಫೋಟಕ ಹೇಳಿಕೆ!

ಲಕ್ಕುಂಡಿಯ ಸಿಕ್ಕ ಚಿನ್ನ ಮನೆಯಲ್ಲಿ ಇಟ್ಕೊಂಡ್ರೆ ಏನಾಗತ್ತೆ ಗೊತ್ತಾ? ಗ್ರಾಮದ ಅಜ್ಜಿಯ ಸ್ಫೋಟಕ ಹೇಳಿಕೆ!

ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Jan 14, 2026 | 11:32 AM

Share

ಇತ್ತೀಚೆಗಷ್ಟೆ ಲಕ್ಕುಂಡಿಯಲ್ಲಿ 8ನೇ ತರಗತಿಯ ಬಾಲಕನಿಗೆ ಸಿಕ್ಕ ಚಿನ್ನ ನಿಧಿಯೋ ಅಲ್ಲವೋ ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಹಲವಾರು ತಜ್ಞರು ಈ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಇದೀಗ ನಿಧಿಯ ಹಿಂದಿರುವ ರಹಸ್ಯವನ್ನು ಮಹಿಳೆಯೊಬ್ಬರು ಬಿಚ್ಚಿಟ್ಟಿದ್ದಾರೆ. ಈ ಹಿಂದೆ ಇಲ್ಲಿನ ಗ್ರಾಮಸ್ಥರಲ್ಲಿ ಮನೆಯೊಳಗೆ ನಿಧಿ ಸಿಕ್ಕರೆ ಇಟ್ಟುಕೊಳ್ಳಬಾರದೆಂಬ ನಂಬಿಕೆಯಿತ್ತು.

ಗದಗ, ಜನವರಿ 14: ಇತ್ತೀಚೆಗಷ್ಟೆ ಲಕ್ಕುಂಡಿಯಲ್ಲಿ 8ನೇ ತರಗತಿಯ ಬಾಲಕನಿಗೆ ಸಿಕ್ಕ ಚಿನ್ನ ನಿಧಿಯೋ ಅಲ್ಲವೋ ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಹಲವಾರು ತಜ್ಞರು ಈ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಇದೀಗ ನಿಧಿಯ ಹಿಂದಿರುವ ರಹಸ್ಯವನ್ನು ಮಹಿಳೆಯೊಬ್ಬರು ಬಿಚ್ಚಿಟ್ಟಿದ್ದಾರೆ. ಈ ಹಿಂದೆ ಇಲ್ಲಿನ ಗ್ರಾಮಸ್ಥರಲ್ಲಿ ಮನೆಯೊಳಗೆ ನಿಧಿ ಸಿಕ್ಕರೆ ಇಟ್ಟುಕೊಳ್ಳಬಾರದೆಂಬ ನಂಬಿಕೆಯಿತ್ತು.

ಲಕ್ಕುಂಡಿಯಲ್ಲಿ ಹುಟ್ಟಿ ಬೆಳೆದ ರತ್ನ ಎಂಬ ಮಹಿಳೆಯೊಬ್ಬರು ಟಿವಿ9ಗೆ ನೀಡಿದ ಸಂದರ್ಶನದಲ್ಲಿ ಈ ನಂಬಿಕೆಯನ್ನು ದೃಢಪಡಿಸಿದ್ದಾರೆ. ಅವರ ಪ್ರಕಾರ, ಹಿಂದೆ ಚಿನ್ನದ ನಿಧಿ ಸಿಕ್ಕ ಕೆಲವು ಕುಟುಂಬಗಳು ಅದನ್ನು ತಮ್ಮ ಮನೆಯೊಳಗೆ ತೆಗೆದುಕೊಂಡ ನಂತರ, ಅವುಗಳ ಸದಸ್ಯರು ಹುಚ್ಚು ಹಿಡಿಯುವುದು, ಆರ್ಥಿಕ ಸಂಕಷ್ಟ ಎದುರಿಸುವುದು ಮತ್ತು ಅಂತಿಮವಾಗಿ ಇಡೀ ಕುಟುಂಬ ನಾಶವಾದಂತಹ ಘಟನೆಗಳು ನಡೆದಿವೆ. ಈಗ ಸಿಕ್ಕಿರುವ ನಿಧಿಯನ್ನು ತಾಯಿ-ಮಗ ಮನೆಯಯಲ್ಲಿಯೇ ಇಟ್ಟುಕೊಂಡರೆ ಅದೇ ಗತಿ ಬರಬಹುದೆಂದು ಮಹಿಳೆ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Sanjeev Pandre
Sanjeev Pandre

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More