ಕನ್ನಡಿಗರ ತೆರಿಗೆ ಹಣಕ್ಕಾಗಿ ಹೋರಾಡುವ ಸಿಎಂ ಸಿದ್ದರಾಮಯ್ಯಗೆ ಸವಾಲೆಸೆದ ವಕೀಲ ದೇವರಾಜೇಗೌಡ
ಕಾವೇರಿ ನೀರಾವರಿ ನಿಗಮದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರಂಥ ಧೀಮಂತ ಇಂಜಿನೀಯರ್ ಗಳು ದೀಪಹಚ್ಚಿ ಹುಡುಕಿದರೂ ಸಿಗುವುದಿಲ್ಲ, ಹಿಂದಿನ ಹಗರಣಗಳನ್ನು ಓಪನ್ ಮಾಡಿಸುತ್ತೇನೆನ್ನುವ ಸಿದ್ದರಾಮಯ್ಯ ಕಾವೇರಿ ನಿಗಮದ ಹಗರಣವನ್ನೂ ತನಿಖೆಗೆ ಒಪ್ಪಿಸಲಿ ಎಂದು ದೇವರಾಜೇಗೌಡ ಹೇಳಿದರು.
ಹಾಸನ: ವಕೀಲ ಮತ್ತು ರಾಜಕಾರಣಿ ಡಿ ದೇವರಾಜೇಗೌಡ ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತಾಡುವಾಗ ನಮ್ಮ ತೆರಿಗೆ ನಮ್ಮ ಹಕ್ಕು ಅಂತ ಪ್ರತಿಭಟನೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಒಂದು ನೇರ ಸವಾಲು ಎಸೆದರು. ಕಾವೇರಿ ನೀರಾವರಿ ಎಡದಂಡೆ ಮತ್ತು ಬಲದಂಡೆ ಎರಡೂ ಯೋಜನೆಗಳ ಒಟ್ಟು ಮೊತ್ತ 2013 ರಲ್ಲಿ ₹750 ಕೋಟಿ ಇದ್ದಿದ್ದು 2024ರಲ್ಲಿ ₹2300 ಕೋಟಿಯಾಗಿದೆ. ಕಳೆದ 10 ವರ್ಷಗಳ ಅವಧಿಯಲ್ಲಿ ಇದನ್ನು ಯಾಕೆ 3 ಪಟ್ಟು ಹೆಚ್ಚಿಸಲಾಗಿದೆ? ಇದು ಕನ್ನಡಿಗರ ತೆರಿಗೆ ಹಣವಲ್ಲವೇ? ಎಂದು ದೇವರಾಜೇಗೌಡ ಸಿದ್ದರಾಮಯ್ಯರನ್ನು ಪ್ರಶ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ತೆರಿಗೆ ಅನ್ಯಾಯ: ಮಾಧ್ಯಮ ಪ್ರಕಟಣೆ ಮೂಲಕ ಹೋರಾಟಕ್ಕೆ ಕರೆಕೊಟ್ಟ ಸಿಎಂ ಸಿದ್ದರಾಮಯ್ಯ
Follow Us
Latest Videos
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
