AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆಡಿಎಸ್​ನಿಂದ ಕಾಂಗ್ರೆಸ್ ಸೇರಿ ಮಂತ್ರಿಗಳಾದವರಿಗೆ ನಿಖಿಲ್ ಕುಮಾರಸ್ವಾಮಿ ಬಗ್ಗೆ ವಿಶೇಷ ಮಮತೆ!

ಜೆಡಿಎಸ್​ನಿಂದ ಕಾಂಗ್ರೆಸ್ ಸೇರಿ ಮಂತ್ರಿಗಳಾದವರಿಗೆ ನಿಖಿಲ್ ಕುಮಾರಸ್ವಾಮಿ ಬಗ್ಗೆ ವಿಶೇಷ ಮಮತೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 01, 2024 | 8:07 PM

ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮತ್ತು ದೇವೇಗೌಡರನ್ನು ಪ್ರಧಾನ ಮಂತ್ರಿ ಮಾಡಿದ್ದು ಕಾಂಗ್ರೆಸ್, ಇದನ್ನೇ ಷಡ್ಯಂತ್ರ ಅಂತ ನಿಖಿಲ್ ಕುಮಾರಸ್ವಾಮಿ ಹೇಳುತ್ತಿರಬಹುದು, ರಾಜಕಾರಣಿಗೆ ಸೋಲು ಯಾವತ್ತೂ ಮಾನದಂಡವಲ್ಲ, ಯೋಗೇಶ್ವರ್ ಸಹ ಚನ್ನಪಟ್ಟಣದ ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದರೂ ಎರಡು ಸಲ ಸೋತಿದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದರು.

ಮಂಡ್ಯ: ನಿಖಿಲ್ ಕುಮಾರಸ್ವಾಮಿಯ ಬಗ್ಗೆ ಕಾಂಗ್ರೆಸ್ ನಾಯಕರು ಅದರಲ್ಲೂ ವಿಶೇಷವಾಗಿ ಜೆಡಿಎಸ್​ನಿಂದ ಕಾಂಗ್ರೆಸ್ ಗೆ ಬಂದಿರೋರು ಅನುಕಂಪ, ಪ್ರೀತಿ ಹೊಂದಿದ್ದಾರೆಯೇ? ಹೌದೆನಿಸುತ್ತದೆ ಮಾರಾಯ್ರೇ. ಮಧ್ಯಾಹ್ನ ಬಳ್ಳಾರಿಯಲ್ಲಿ ಜಮೀರ್ ಅಹ್ಮದ್ ಖಾನ್, ನಿಖಿಲ್ ಮತ್ತು ನನ್ನ ಮಗ ಬೇರೆಯಲ್ಲ, ಇಬ್ಬರೂ ನಂಗೆ ಸಮಾನರು ಎಂದಿದ್ದರು. ಸಾಯಂಕಾಲ ಮಂಡ್ಯದಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಮಾತಾಡಿದ ಸಚಿವ ಎನ್ ಚಲುವರಾಯಸ್ವಾಮಿ, ನಿಖಿಲ್ ತನಗೆ ಮಗನಿದ್ದಂತೆ, ಅವನ ಬಗ್ಗ್ಗೆ ಪ್ರೀತಿಯಿದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಅಮಾಯಕರನ್ನು ಬಂಧಿಸಿರುವುದು‌ ನಿಜ, ಚಾರ್ಜ್​ಶೀಟ್​​ನಲ್ಲಿ ‌ಅವರ ಹೆಸರು ಕೈಬಿಡಲು ಸೂಚನೆ: ಚಲುವರಾಯಸ್ವಾಮಿ