Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಆಹಾರ ಅರಸಿ ಜಾನುವಾರುಗಳಿದ್ದ ಕೊಟ್ಟಿಗೆ ಸೇರಿದ ಚಿರತೆ: 2 ಹಸು ರಕ್ಷಣೆ ಮಾಡಿದ ಅರಣ್ಯ ಅಧಿಕಾರಿಗಳು

Video: ಆಹಾರ ಅರಸಿ ಜಾನುವಾರುಗಳಿದ್ದ ಕೊಟ್ಟಿಗೆ ಸೇರಿದ ಚಿರತೆ: 2 ಹಸು ರಕ್ಷಣೆ ಮಾಡಿದ ಅರಣ್ಯ ಅಧಿಕಾರಿಗಳು

ಮಂಜುನಾಥ ಕೆಬಿ
| Updated By: ಗಂಗಾಧರ​ ಬ. ಸಾಬೋಜಿ

Updated on:Jul 14, 2023 | 4:56 PM

ಮನೆಯ ಜಾನುವಾರು ಕೊಟ್ಟಿಗೆಗೆ ಚಿರತೆ ಸೇರಿಕೊಂಡಿರುವಂತಹ ಘಟನೆ ಹಾಸನ ತಾಲ್ಲೂಕಿನ ಹೊಸಳ್ಳಿ ಗ್ರಾಮದ ಮಹೇಶ್ ಎಂಬುವವರ ಮನೆಯಲ್ಲಿ ಕಂಡುಬಂದಿದೆ. ತಮ್ಮ ಜಮೀನಿನಲ್ಲಿ ಮನೆ ನಿರ್ಮಿಸಿ ಕುಟುಂಬ ವಾಸವಾಗಿದ್ದು, ಮನೆಗೆ ಹೊಂದಿಕೊಂಡಿರುವ ದನದ ಕೊಟ್ಟಿಗೆಯಲ್ಲಿ ಚಿರತೆ ಸಿಲುಕಿದೆ.

ಹಾಸನ: ಮನೆಯ ಜಾನುವಾರು ಕೊಟ್ಟಿಗೆಗೆ ಚಿರತೆ (Leopard) ಸೇರಿಕೊಂಡಿರುವಂತಹ ಘಟನೆ ಹಾಸನ ತಾಲ್ಲೂಕಿನ ಹೊಸಳ್ಳಿ ಗ್ರಾಮದ ಮಹೇಶ್ ಎಂಬುವವರ ಮನೆಯಲ್ಲಿ ಕಂಡುಬಂದಿದೆ. ತಮ್ಮ ಜಮೀನಿನಲ್ಲಿ ಮನೆ ನಿರ್ಮಿಸಿ ಕುಟುಂಬ ವಾಸವಾಗಿದ್ದು, ಮನೆಗೆ ಹೊಂದಿಕೊಂಡಿರುವ ದನದ ಕೊಟ್ಟಿಗೆಯಲ್ಲಿ ಚಿರತೆ ಸಿಲುಕಿದೆ. ಜಾನುವಾರು ಇದ್ದ ಕಾರಣ ಆಹಾರ ಅರಸಿ ನುಗ್ಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದೆ. ಸದ್ಯ ಕೊಟ್ಟಿಗೆಯಲ್ಲಿ ಸಿಲುಕಿದ್ದ 2 ಹಸು ರಕ್ಷಣೆ ಮಾಡಿದ್ದು, ಒಂದು ಹಸು, ಒಂದು ಕರು ಸಿಕ್ಕಿಕೊಂಡಿದೆ. ಚಿರತೆ ಸೆರೆಗೆ ಅರಣ್ಯ ಅಧಿಕಾರಿಗಳು ಬೋನ್ ಅಳವಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Jul 14, 2023 04:54 PM