AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಊರಿಗೆ ಚಿರತೆ ಭಯ ಕಾಡುತ್ತಿದ್ರೆ, ಮಹಿಳೆಯನ್ನ ಬಲಿ ಪಡೆದ ಕೂಗಳತೆಯಲ್ಲೇ ಮಲಗಿದ ವ್ಯಕ್ತಿ

ಊರಿಗೆ ಚಿರತೆ ಭಯ ಕಾಡುತ್ತಿದ್ರೆ, ಮಹಿಳೆಯನ್ನ ಬಲಿ ಪಡೆದ ಕೂಗಳತೆಯಲ್ಲೇ ಮಲಗಿದ ವ್ಯಕ್ತಿ

ಬಿ ಮೂರ್ತಿ, ನೆಲಮಂಗಲ
| Updated By: ರಮೇಶ್ ಬಿ. ಜವಳಗೇರಾ|

Updated on: Nov 20, 2024 | 5:45 PM

Share

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಬಳಿಯ ಕಂಬಾಳು ಗೊಲ್ಲರಹಟ್ಟಿ ಗ್ರಾಮದ ಬಳಿ ಚಿರತೆಯಿಂದು ಓರ್ವ ಮಹಿಳೆಯನ್ನು ಬಲಿ ಪಡೆದುಕೊಂಡಿದೆ. ಇದರಿಂದ ಜನ ಭಯದಿಂದ ಓಡಾಡುತ್ತಿದ್ದಾರೆ. ಆದ್ರೆ, ವ್ಯಕ್ತಿಯೋರ್ವ, ಚಿರತೆ ಮಹಿಳೆಯನ್ನು ಬಲಿ ಪಡೆದ ಕೂಗಳತೆ ದೂರದಲ್ಲೇ ಆಯಾಗಿ ನಿದ್ರೆಗೆ ಜಾರಿದ್ದಾನೆ.

ಬೆಂಗಳೂರು, (ನವೆಂಬರ್ 20): ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಬಳಿಯ ಕಂಬಾಳು ಗೊಲ್ಲರಹಟ್ಟಿ ಗ್ರಾಮದ ಬಳಿ ಚಿರತೆಯಿಂದು ಓರ್ವ ಮಹಿಳೆಯನ್ನು ಬಲಿ ಪಡೆದುಕೊಂಡಿದೆ. ಹೀಗಾಗಿ ಗೊಲ್ಲರಹಟ್ಟಿ ಗ್ರಾಮದ ಸುತ್ತಮುತ್ತಲಿನ ಜನರು ಚಿರತೆ ಭಯದಲ್ಲೇ ಓಡಾಡುತ್ತಿದ್ದಾರೆ. ಇನ್ನೊಂದೆಡೆ ಮಹಿಳೆಯ ಮೇಲೆ ದಾಳಿ ನಡೆಸಿದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಬಾರಿ ಸರ್ಕಸ್ ಮಾಡುತ್ತಿದ್ರೆ, ಇಲ್ಲೊಬ್ಬ ಲೋಕದ ಪಾರವೇ ಇಲ್ಲದೆ ಗಾಢ ನಿದ್ರೆಗೆ ಜಾರಿದ್ದಾನೆ. ಹೌದು…ಊರಿನ ಜನ ಚಿರತೆ ಭೀತಿಯಿಂದ ಮನೆಯಿಂದ ಆಚೆ ಬರಲು ಹೆದರಿಕೊಳ್ಳುತ್ತಿದ್ದಾರೆ. ಹೀರುವಾಗ ವ್ಯಕ್ತಿಯೋರ್ವ ಯಾವುದೇ ಭಯವಿಲ್ಲದೇ ಮದ್ಯದ ನಶೆಯಲ್ಲಿ ಮಲಗಿದ್ದಾನೆ. ಅದು ಚಿರತೆ ಮಹಿಳೆಯನ್ನು ಬಲಿ ಪಡೆದ ಕೂಗಳತೆ ದೂರದಲ್ಲೇ ಆಯಾಗಿ ನಿದ್ರೆಗೆ ಜಾರಿದ್ದಾನೆ.