LIVE: ದಾವಣಗೆರೆಯಲ್ಲಿ ವೀರಶೈವ ಪೀಠಾಚಾರ್ಯರ ಶೃಂಗ ಸಭೆ, ನೇರಪ್ರಸಾರ

Edited By:

Updated on: Jul 21, 2025 | 12:04 PM

ದಾವಣಗೆರೆಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ವೀರಶೈವ ಪಂಚ ಪೀಠಾಧಿಪತಿಗಳ ಶೃಂಗಸಭೆ ಒಂದು ಐತಿಹಾಸಿಕ ಸಮಾವೇಶವಾಗಿದೆ. ರಂಭಾಪುರಿ, ಉಜ್ಜೈನಿ, ಕೇದಾರ, ಕಾಶಿ ಮತ್ತು ಶ್ರೀಶೈಲ ಪೀಠಗಳು ಒಂದಾಗುತ್ತಿವೆ. ಸಂಸ್ಕೃತಿ ಸಂವರ್ಧನೆ ಮತ್ತು ಧಾರ್ಮಿಕ ಏಕತೆಯ ಸಂದೇಶವನ್ನು ಈ ಸಭೆ ವ್ಯಕ್ತಪಡಿಸಲಿದೆ. 500 ಕ್ಕೂ ಹೆಚ್ಚು ಮಠಾಧೀಶರು ಮತ್ತು 25,000 ಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.

ದಾವಣಗೆರೆ, ಜುಲೈ 21: ನಗರದಲ್ಲಿ ಇಂದಿನಿಂದ 2 ದಿನ ವೀರಶೈವ ಪೀಠಾಚಾರ್ಯರ ಶೃಂಗ ಸಭೆ (Veerashiva Summit) ಆಯೋಜನೆ ಮಾಡಲಾಗಿದೆ. ಆ ಮೂಲಕ ಪಂಚ ಪೀಠಾಧಿಪತಿಗಳ ಸಮಾಗಮವಾಗಲಿದೆ. ಶೃಂಗಸಭೆಯಲ್ಲಿ ವಿವಿಧ ರಾಜ್ಯಗಳಿಂದ 500ಕ್ಕೂ ಅಧಿಕ ಮಠಾಧೀಶರು ಭಾಗಿ ಆಗಲಿದ್ದಾರೆ. ಸಂಸ್ಕೃತಿ ಸಂವರ್ಧನೆಗಾಗಿ ಪಂಚ ಪೀಠಾಚಾರ್ಯರ ಪಾದಯಾತ್ರೆ ಮಾಡಲಿದ್ದಾರೆ. ಪಂಚ ಪೀಠಾಧಿಪತಿಗಳ ಸಮಾಗಮ ನೇರಪ್ರಸಾರ ಇಲ್ಲಿ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Jul 21, 2025 12:03 PM
Follow Us
Basavaraj Doddamani

ಬಸವರಾಜ ದೊಡ್ಡಮನಿ ಟಿವಿ9 ಕನ್ನಡ ವರದಿಗಾರರಾಗಿದ್ದು, ವಿಶೇಷವಾಗಿ ದಾವಣಗೆರೆ ಜಿಲ್ಲಾ ಪ್ರಾದೇಶಿಕ ಸುದ್ದಿಗಳ ಮೇಲೆ ಕೇಂದ್ರೀಕರಿಸುತ್ತಾರೆ.

Read More