Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆದಾಯಕ್ಕೆ ಮೀರಿದ ಆಸ್ತಿ ಹೊಂದಿರುವ ಬೀದರ್ ಮತ್ತು ಕಾರವಾರದ ಇಬ್ಬರು ಸರ್ಕಾರೀ ನೌಕರರ ಮನೆಗಳ ಮೇಲೆ ಲೋಕಾಯುಕ್ತ ದಾಳಿ

ಆದಾಯಕ್ಕೆ ಮೀರಿದ ಆಸ್ತಿ ಹೊಂದಿರುವ ಬೀದರ್ ಮತ್ತು ಕಾರವಾರದ ಇಬ್ಬರು ಸರ್ಕಾರೀ ನೌಕರರ ಮನೆಗಳ ಮೇಲೆ ಲೋಕಾಯುಕ್ತ ದಾಳಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 27, 2024 | 11:18 AM

ಶಿವಾನಂದ ಸ್ವಾಮಿಯ ಮನೆಗಳನ್ನು ನೋಡಿ ಮಾರಾಯ್ರೇ. ಸ್ವಾಮೀಜಿಗೆ 2-3 ಮನೆಗಳಿದ್ದಂತಿವೆ. ಇದು ಕೇವಲ ನಮ್ಮ ಕಣ್ಣಿಗೆ ಕಾಣುತ್ತಿರುವ ಆಸ್ತಿ ಮಾತ್ರ. ಬ್ಯಾಂಕ್ ಬ್ಯಾಲೆನ್ಸ್ , ಜಮೀನು, ಸೈಟು, ಒಡವೆ, ವಾಹನಗಳು ಇವೆಲ್ಲವುಗಳ ತಪಾಸಣೆ ನಡೆದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಸರ್ಕಾರಿ ನೌಕರರನ್ನು ಸರ್ಕಾರದ ಮಕ್ಕಳೆಂದು ಹೇಳುವುದು ಸಹ ಇದೇ ಕಾರಣಕ್ಕಿರಬಹುದು!

ಬೆಂಗಳೂರು: ಮಗಳಿಗೆ ಯೋಗ್ಯ ವರನ ತಲಾಶ್ ನಲ್ಲಿರುವ ತಂದೆತಾಯಿಗಳು ಹುಡುಗ ಸರ್ಕಾರಿ ನೌಕರಿಯಲ್ಲಿದ್ದರೆ (government servant) ಚಂದ ಅಂತ ಯೋಚಿಸುವುದಕ್ಕೆ ಪ್ರಾಯಶಃ ಕಾರಣ ಇದೇ ಇರಬಹುದು. ಲೋಕಾಯುಕ್ತ ಸರ್ಕಾರಿ ನೌಕರರ ಮನೆಗಳ ಮೇಲೆ ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ದಾಳಿ ಮಾಡಿದಾಗೆಲ್ಲ ಸರ್ಕಾರಿ ನೌಕರರ ಶ್ರೀಮಂತಿಕೆ (wealth) ನಮ್ಮ ಕಣ್ಣುಗಳಿಗೆ ರಾಚುತ್ತದೆ. ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಬೀದರ್ ಜಿಲ್ಲೆ ಭಾಲ್ಕಿಯ ಕಾರಂಜಾ ಯೋಜನೆ ವಿಭಾಗದಲ್ಲಿ ಕಾರ್ಯನಿರ್ವಾಹಕ ಎಂಜನೀಯರ್ ಆಗಿ ಕೆಲಸ ಮಾಡುವ ಶಿವಾನಂದ ಸ್ವಾಮಿ (Shivanand Swamy) ಮತ್ತು ಕಾರವಾರದ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನೀಯರ್ ಅಗಿ ಕೆಲಸ ಮಾಡುವ ಪ್ರಕಾಶ್ ಆರ್ ರೇವಣ್ಕರ್ (Prakash R Revankar) ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಇವರಿಬ್ಬರೂ ತಮ್ಮ ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಕೆ ಮಾಡಿರುವುದನ್ನು ಕಂಡುಕೊಂಡಿದ್ದಾರೆ.

ಶಿವಾನಂದ ಸ್ವಾಮಿಯ ಮನೆಗಳನ್ನು ನೋಡಿ ಮಾರಾಯ್ರೇ. ಸ್ವಾಮೀಜಿಗೆ 2-3 ಮನೆಗಳಿದ್ದಂತಿವೆ. ಇದು ಕೇವಲ ನಮ್ಮ ಕಣ್ಣಿಗೆ ಕಾಣುತ್ತಿರುವ ಆಸ್ತಿ ಮಾತ್ರ. ಬ್ಯಾಂಕ್ ಬ್ಯಾಲೆನ್ಸ್ , ಜಮೀನು, ಸೈಟು, ಒಡವೆ, ವಾಹನಗಳು ಇವೆಲ್ಲವುಗಳ ತಪಾಸಣೆ ನಡೆದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಸರ್ಕಾರಿ ನೌಕರರನ್ನು ಸರ್ಕಾರದ ಮಕ್ಕಳೆಂದು ಹೇಳುವುದು ಸಹ ಇದೇ ಕಾರಣಕ್ಕಿರಬಹುದು!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಒಂಬತ್ತು ತಾಲೂಕು ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಹಲವು ದಾಖಲೆಗಳು ಪತ್ತೆ