ಮದ್ಯದಂಗಡಿ ವಿರುದ್ಧ ದೂರು ದಾಖಲಿಸದಿರಲು ರೂ. 1 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಅಬ್ಕಾರಿ ನಿರೀಕ್ಷಕ ಲೋಕಾಯುಕ್ತ ಬಲೆಗೆ

Arun Kumar Belly

|

Updated on:Feb 02, 2023 | 6:21 PM

ಕಳೆದ ರಾತ್ರಿ ಬಸವರಾಜ ಮುಂಗಡ ರೂಪದಲ್ಲಿ ರೂ. 1 ಲಕ್ಷ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.

ರಾಯಚೂರು: ನಗರದ ಲೋಕಾಯುಕ್ತ ಅಧಿಕಾರಿಗಳು (Lokayukta sleuths) ಒಬ್ಬ ಲಂಚಕೋರ ಅಬ್ಕಾರಿ ನಿರೀಕ್ಷಕನನ್ನು ಬಲೆಗೆ ಕೆಡವಿದ್ದಾರೆ. ಘಟನೆ ನಡೆದಿರೋದು ಜಿಲ್ಲೆಯ ಸಿರವಾರ ತಾಲ್ಲೂಕಿನ ಮಲ್ಲಟ (Mallata) ಗ್ರಾಮ ಪಂಚಾಯಿತಿಯಲ್ಲಿ. ಈ ಭಾಗದಲ್ಲಿ ಹನುಮಂತ ಹೆಸರಿನ ವ್ಯಕ್ತಿ ನಡೆಸುತ್ತಿದ್ದ ಮದ್ಯದ ಅಂಗಡಿಯೊಂದರ ವಿರುದ್ಧ ಅದ್ಯಾವುದೋ ಕಾರಣಕ್ಕೆ ದೂರು ದಾಖಲಿಸದಿರಲು ಬಸವರಾಜ ಹೆಸರಿನ ಅಬ್ಕಾರಿ ನಿರೀಕ್ಷಕ (excise inspector) ರೂ. 2 ಲಕ್ಷ ಗಳಿಗೆ ಬೇಡಿಕೆಯಿಟ್ಟಿದ್ದನಂತೆ. ಕಳೆದ ರಾತ್ರಿ ಬಸವರಾಜ ಮುಂಗಡ ರೂಪದಲ್ಲಿ ರೂ. 1 ಲಕ್ಷ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಅರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada