ಹಾಸನ: ಕಾಡಿನಿಂದ ಗ್ರಾಮದೊಳಗೆ ‘ಬೆಳಗಿನ ವಿಹಾರಕ್ಕೆ’ ಆಗಮಿಸಿದ ಒಂಟಿ ಸಲಗ ಭೀಮ; ದಿಕ್ಕಾಪಾಲಾಗಿ ಓಡಿದ ನಾಯಿ ಮತ್ತು ಹಸುಗಳು

ಅರುಣ್​ ಕುಮಾರ್​ ಬೆಳ್ಳಿ

Updated on: Oct 26, 2023 | 1:14 PM

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ನಿಂತಿರುವುದನ್ನು ಸಹ ಕಾಣಬಹುದು. ಅದು ಪ್ರಾಯಶಃ ನೈಟ್ ಹಾಲ್ಟ್ ಬಸ್ ಆಗಿರುತತ್ತದೆ. ಆದು ಹೌದಾಗಿದ್ದರೆ ಅದರ ಚಾಲಕ ಮತ್ತು ನಿರ್ವಾಹಕ ಅದರಲ್ಲೇ ಮಲಗಿರುತ್ತಾರೆ. ಅದೃಷ್ಟವಶಾತ್ ಸಲಗ ಯಾರಿಗೂ ತೊಂದರೆ ಮಾಡದೆ ತನ್ನ ಪಾಡಿಗೆ ತಾನು ನಡೆದು ಹೋಗುತ್ತದೆ.

ಹಾಸನ: ಅತ್ತ ಮೈಸೂರಲ್ಲಿ ದಸರಾ ಮಹೋತ್ಸವಕ್ಕೆ ಶಿಬಿರಗಳಿಂದ ನಾಡಿಗೆ ಬಂದಿದ್ದ ಆನೆಗಳು ವಾಪಸ್ಸು ಹೊರಟಿದ್ದರೆ, ಇಲ್ಲಿ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಹೆಮ್ಮಿಗೆ ಗ್ರಾಮದಲ್ಲಿ ಬೆಳ್ಳಬೆಳಗ್ಗೆ ಕಾಡಾನೆಯೊಂದು ಪ್ರತ್ಯಕ್ಷವಾಗಿ ಆಗಷ್ಟೇ ಎದ್ದು ಕಣ್ಣೊರಿಸಿಕೊಳ್ಳುತ್ತಾ ಮನೆಯಿಂದ ಹೊರಬಂದಿದ್ದ ಜನರಿಗೆ ಭೀತಿಗೊಳಪಡಿಸಿದೆ. ಅದು ಕಾಣುತ್ತಲೇ ಹಸು ಕರು ಮತ್ತು ನಾಯಿಗಳು ದಿಕ್ಕಾಪಾಲಾಗಿ ಓಡುವುದನ್ನು ಸಿಸಿಟಿವಿಗಳಲ್ಲಿ ಸೆರೆಯಾಗಿರುವ ಫುಟೇಜ್ ನಲ್ಲಿ ನೋಡಬಹುದು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ನಿಂತಿರುವುದನ್ನು ಸಹ ಕಾಣಬಹುದು. ಅದು ಪ್ರಾಯಶಃ ನೈಟ್ ಹಾಲ್ಟ್ ಬಸ್ ಆಗಿರುತತ್ತದೆ. ಆದು ಹೌದಾಗಿದ್ದರೆ ಅದರ ಚಾಲಕ ಮತ್ತು ನಿರ್ವಾಹಕ ಅದರಲ್ಲೇ ಮಲಗಿರುತ್ತಾರೆ. ಅದೃಷ್ಟವಶಾತ್ ಸಲಗ ಯಾರಿಗೂ ತೊಂದರೆ ಮಾಡದೆ ತನ್ನ ಪಾಡಿಗೆ ತಾನು ನಡೆದು ಹೋಗುತ್ತದೆ. ಈ ಆನೆಗೆ ಭೀಮ ಅಂತ ನಾಮಕರಣ ಮಾಡಲಾಗಿದೆಯಂತೆ. ಭೀಮನ ವರ್ತನೆ ಅಂದರೆ ಗಾಂಭೀರ್ಯತೆಯೊಂದಿಗೆ ನಿಧಾನವಾಗಿ ಊರೊಳಗೆ ನಡೆಯುತ್ತಾ ಬಂದು ಒಂದು ಸುತ್ತು ಹಾಕಿ ವಾಪಸ್ಸು ಹೋಗೋದನ್ನು ನೋಡಿದರೆ, ಕಾಡಿನಿಂದ ಊರೊಳಗೆ ಮಾರ್ನಿಂಗ್ ವಾಕ್ ಗೆ ಬಂದಂತೆ ಅನಿಸುತ್ತೆ! ಭೀಮ ಕಾಣುತ್ತಲೇ ಬಿದ್ದೆನೋ ಸತ್ತೆನೋ ಅಂತ ಓಡಿದ್ದ ಗ್ರಾಮದ ಸಾಕು ಪ್ರಾಣಿಗಳು ಅವನ ಬೆನ್ನು ಕಾಣುತ್ತಲೇ ತಾವಿದ್ದ ಸ್ಥಳಗಳಿಗೆ ವಾಪಸ್ಸಾಗುತ್ತವೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.