Maha Kumbh 2025: ಮೇಳವೇನೋ ಅದ್ದೂರಿ, ಆದರೆ ಸ್ಥಳೀಯರಿಂದ ಯಾತ್ರಾರ್ಥಿಗಳ ಸುಲಿಗೆ ಅನಿರ್ಬಂಧಿತ!

ಅರುಣ್​ ಕುಮಾರ್​ ಬೆಳ್ಳಿ

Updated on: Jan 15, 2025 | 8:19 PM

Maha Kumbh 2025: ಮಹಾಕುಂಭ ಮೇಳದಲ್ಲಿ ಭಾಗಿಯಾಗಲು ಬೆಂಗಳೂರುನಿಂದ ಪ್ರಯಾಗ್​ರಾಜ್​ಗೆ ಹೋಗಿರುವ ಕನ್ನಡಿಗರೊಬ್ಬರೊಂದಿಗೆ ಟವಿ9 ಪ್ರತಿನಿಧಿ ಮಾತಾಡಿದ್ದಾರೆ. ಇವರು ಹೊರಡುವ ಮೊದಲೇ ಹೋಟೆಲ್ ಬುಕ್ ಮಾಡಿದ್ದರೂ ಎರಡು ಪಟ್ಟು ಹಣವನ್ನು ತೆರಬೇಕಾಗಿದೆಯಂತೆ. ಪ್ರಯಾಗ್ ರಾಜ್ ನಲ್ಲಿ ಇಳಿದ ಕೂಡಲೇ ಯಾತ್ರಾರ್ಥಿಗಳನ್ನು ಸುಲಿಯುವ ಕೆಲಸ ಶುರುವಾಗುತ್ತಂತೆ.

ಪ್ರಯಾಗ್​ರಾಜ್ (ಉತ್ತರ ಪ್ರದೇಶ): ಈ ಬಾರಿಯ ಮಹಾಕುಂಭ ಮೇಳ 144 ನೇ ವರ್ಷಕ್ಕೆ ಬಂದಿರುವಂಥದ್ದು, ಎಲ್ಲರಿಗೂ ಗೊತ್ತಿರುವಂತೆ ಕುಂಭ ಮೇಳ 12 ವರ್ಷಗಳಿಗೊಮ್ಮೆ ಜರುಗುತ್ತದೆ. ಮಹಾಕುಂಭ ಮೇಳವೇನೋ ಅದ್ದೂರಿಯಾಗಿ ನಡೆಯುತ್ತಿದೆ, ಕೋಟ್ಯಾನು ಕೋಟಿ ಜನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಅದರೆ ಇಲ್ಲಿನ ಈ-ಟ್ಯಾಕ್ಸಿ, ಬೈಕ್ ವಾಲಾಗಳು, ಆ್ಯಪ್ ಅಗ್ರಿಗೇಟೆಡ್ ಕ್ಯಾಬ್​ಗಳು, ಹೋಟೆಲ್ ಗಳು, ಲಾಜ್ ಗಳು ಮನಬಂದಂತೆ ಯಾತ್ರಾರ್ಥಿಗಳ ಸುಲಿಗೆ ಮಾಡುತ್ತಿವೆ ಎಂದು ನಮ್ಮ ವರದಿಗಾರ ಹೇಳುತ್ತಾರೆ. ಪ್ರಯಾಗ್ ರಾಜ್​​ನಿಂದ ತ್ರಿವೇಣಿ ಸಂಗಮ್ ಸುಮಾರು 5 ಕೀಮೀ ದೂರದಲ್ಲಿದೆಯಂತೆ, ಈ-ಟ್ಯಾಕ್ಸಿಗಳು ಅಥವಾ ಬೇರೆ ಸಾರಿಗೆ ಸಾಧನಗಳು ಜನರಿಂದ ₹ 4,000-5,000 ವಸೂಲಿ ಮಾಡುತ್ತಿವೆಯಂತೆ. ಹೋಟೆಲ್ ಗಳಲ್ಲಿ ತಂಗಬೇಕಾದರೆ ಮಾಮೂಲಿ ದರಕ್ಕಿಂತ 4-5 ಪಟ್ಟು ಹೆಚ್ಚು ಹಣ ತೆರಬೇಕು, ಹಾಗಾಗಿ ಇಲ್ಲಿಗೆ ಬರಲಿಚ್ಛಿಸುವವರು ಸುಲಿಗೆ ಬಗ್ಗೆ ತಿಳಿದುಕೊಂಡಿರಲಿ ಎಂದು ನಮ್ಮ ಪ್ರತಿನಿಧಿ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Maha Kumbh 2025: ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಾಗಲೇ ಪಾಸಿಟಿವ್ ಎನರ್ಜಿ ಏನು ಅಂತ ಗೊತ್ತಾಗುತ್ತದೆ ಎನ್ನುತ್ತಾರೊಬ್ಬ ಕನ್ನಡಿಗ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.