‘ಚೈತ್ರಾಗೆ ನೀನು ರನ್ನ, ಚಿನ್ನ, ಚಂದ್ರ ಅಂದ್ರೆ ಮುಗೀತು’: ಇದು ಗೋಲ್ಡ್ ಸುರೇಶ್ ಲೆಕ್ಕಾಚಾರ

|

Updated on: Oct 01, 2024 | 7:08 PM

ಚೈತ್ರಾ ಕುಂದಾಪುರ ಅವರು ಬಿಗ್​ ಬಾಸ್​ ಆಟದ ಆರಂಭದಲ್ಲೇ ರೆಬೆಲ್​ ಆಗಿದ್ದಾರೆ. ಜಗಳ ಜೋರಾಗಿದೆ. ಅವರ ಬಗ್ಗೆ ಗೋಲ್ಡ್​ ಸುರೇಶ್​ ಅವರಿಗೆ ಇರುವ ಅಭಿಪ್ರಾಯವೇ ಬೇರೆ. ಈ ಕುರಿತು ನರಕವಾಸಿಗಳಾದ ಮನಸಾ ಹಾಗೂ ಗೋಲ್ಡ್ ಸುರೇಶ್​ ಅವರು ಮಾತುಕಥೆ ಮಾಡಿದ್ದಾರೆ. ಎರಡೇ ದಿನದಲ್ಲಿ ಚೈತ್ರಾ ಕುಂದಾಪುರ ಅವರು ಹೈಲೈಟ್​ ಆಗಿದ್ದಾರೆ. ಹಲವರ ಜೊತೆ ಅವರು ಜಗಳ ಮಾಡಿದ್ದಾರೆ.

‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಕಾರ್ಯಕ್ರಮದ ಮನೆಯನ್ನು ಸ್ವರ್ಗ ಮತ್ತು ನರಕ ಎಂದು ಎರಡು ಭಾಗ ಮಾಡಲಾಗಿದೆ. ಗೋಲ್ಡ್ ಸುರೇಶ್, ಚೈತ್ರಾ ಕುಂದಾಪುರ, ಮಾನಸಾ ಮುಂತಾದವರು ನರಕದಲ್ಲಿ ಇದ್ದಾರೆ. ಚೈತ್ರಾ ಅವರ ಬಗ್ಗೆ ಮಾನಸಾ ಮತ್ತು ಗೋಲ್ಡ್ ಸುರೇಶ್ ಕುಳಿತು ಮಾತನಾಡಿದ್ದಾರೆ. ‘ಚೈತ್ರಾನ ನಿಜಕ್ಕೂ ಕಂಟ್ರೋಲ್​ ಮಾಡೋಕೆ ಆಗಲ್ಲ. ಅವರ ಟ್ಯಾಲೆಂಟ್​ ಅರ್ಥ ಮಾಡಿಕೊಳ್ಳಿ. ಚೈತ್ರಾನ ಮೇಲಕ್ಕೆ ಹತ್ತಿಸಬೇಕು. ಮಾತಲ್ಲೇ ಮನೆ ಕಟ್ಟಿದರೆ ಹೌದೋ ಓಹ್ ಅಂತಾರೆ. ನೀನು ರನ್ನ, ಚಿನ್ನ, ಚಂದ್ರ, ಚಂದಮಾಮ ಎಂದರೆ ಮುಗಿಯಿತು. ನಮ್ಮ ಕಡೆ ಚೈತ್ರಾ, ಆ ಕಡೆ ಜಗದೀಶ್. ಇಬ್ಬರೂ ಸರಿಯಾಗಿದ್ದಾರೆ’ ಎಂದು ಗೋಲ್ಡ್​ ಸುರೇಶ್ ಹೇಳಿದ್ದಾರೆ. ಅವರ ಮಾತು ಕೇಳಿ ಮಾನಸಾ ನಕ್ಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on