ಮಂಗಳೂರು: ಗಾಂಜಾ ಮತ್ತಲ್ಲಿ ಸಾರ್ವಜನಿಕರಿಗೆ ಕಿರ್ಪಾನ್ ತೋರಿಸಿ ಹೆದರಿಸುತ್ತಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದ ರೀತಿ ರೋಚಕ!
ರಸ್ತೆಯ ಮತ್ತೊಂದು ಬದಿಯಿಂದ ಮಫ್ತಿಯಲ್ಲಿದ್ದ ಪೊಲೀಸ್ ಒಬ್ಬರು ಸಿದ್ದೀಕ್ ತನ್ನ ಕಡೆ ಬೆನ್ನು ಮಾಡುತ್ತಿದ್ದಂತೆ ಅವನ ಮೇಲೆರಗುತ್ತಾರೆ. ಅವನು ಕೊಸರಾಡುವಷ್ಟರಲ್ಲಿ ಉಳಿದ ಪೊಲೀಸರು ಸಿದ್ದೀಖ್ ನನ್ನು ವಶಕ್ಕೆ ಪಡೆದು ಜೇಬಲ್ಲಿದ್ದ ಕಿರ್ಪಾನ್ ತೆಗೆದುಕೊಂಡು ಬಿಡುತ್ತಾರೆ. ನಂತರ ಅವನನ್ನು ಪೊಲೀಸ್ ಕಾರಲ್ಲಿ ನೂಕಿ ಠಾಣೆಗೆ ಕರೆದೊಯ್ಯಲಾಗುತ್ತದೆ.
ಮಂಗಳೂರು: ಗಾಂಜಾ ಅಮಲಿನಲ್ಲಿರುವ ಈ ಯುವಕನನ್ನು ಒಮ್ಮೆ ನೋಡಿ ಮಾರಾಯ್ರೇ. ಅವನೊಬ್ಬ ಅಪರಾಧಿ ಅನ್ನೋದರಲ್ಲಿ ಅನುಮಾನ ಬೇಡ. ನಗರದ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಅವನ ಹೆಸರು ಅಬೂಬಕ್ಕರ್ ಸಿದ್ದೀಖ್ (Abubakar Siddique) ಮತ್ತು ಉಳ್ಳಾಲದ ಮುಕ್ಕಚ್ಚೇರಿಯಲ್ಲಿರುವ ಕೈಕೋ ರೋಡ್ ನಿವಾಸಿ. ಈ ಆಸಾಮಿ ಗಾಂಜಾ ಏರಿಸಿ (Marijuana) ನಗರದ ನಾಟಿಕಲ್ ಎಂಬಲ್ಲಿ ಡಿವೈಡರ್ ಮೇಲೆ ರಾಜಾರೋಶವಾಗಿ ತಿರುಗಾಡುತ್ತಾ ಸಾರ್ವಜನಿಕರಿಗೆ ಚಾಕು (Kirpan) (ಸಿಖ್ ಸಮುದಾಯದವರು ಸಾಂಪ್ರದಾಯಿಕವಾಗಿ ತಮ್ಮೊಂದಿಗೆ ಇಟ್ಟುಕೊಳ್ಳುವ ಕಿರ್ಪಾನ್ ಆಯುಧ) ತೋರಿಸಿ ಹೆದರಿಸುತ್ತಿದ್ದ. ಭೀತಿಗೊಳಗಾಗಿದ್ದ ಜನ ಪೊಲೀಸ್ ಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಅವನಲ್ಲಿ ಕಿರ್ಪಾನ್ ಇದ್ದಿದ್ದು ಗೊತ್ತಿತ್ತು; ಹಾಗಾಗೇ ಬಹಳ ಎಚ್ಚರಿಕೆಯಿಂದ ಆಪರೇಶನ್ ಸಿದ್ದೀಖ್ ಕಾರ್ಯರೂಪಕ್ಕಿಳಿಸಿದರು. ತನ್ನನ್ನು ಹಿಡಿಯಲು ಪೊಲೀಸರು ಅಗಮಿಸಿದ ಅಂಶ ಅವನ ಗಮನಕ್ಕೆ ಬರಲೇ ಇಲ್ಲ. ರಸ್ತೆಯ ಮತ್ತೊಂದು ಬದಿಯಿಂದ ಮಫ್ತಿಯಲ್ಲಿದ್ದ ಪೊಲೀಸ್ ಒಬ್ಬರು ಸಿದ್ದೀಕ್ ತನ್ನ ಕಡೆ ಬೆನ್ನು ಮಾಡುತ್ತಿದ್ದಂತೆ ಅವನ ಮೇಲೆರಗುತ್ತಾರೆ. ಅವನು ಕೊಸರಾಡುವಷ್ಟರಲ್ಲಿ ಉಳಿದ ಪೊಲೀಸರು ಸಿದ್ದೀಖ್ ನನ್ನು ವಶಕ್ಕೆ ಪಡೆದು ಜೇಬಲ್ಲಿದ್ದ ಕಿರ್ಪಾನ್ ತೆಗೆದುಕೊಂಡು ಬಿಡುತ್ತಾರೆ. ನಂತರ ಅವನನ್ನು ಪೊಲೀಸ್ ಕಾರಲ್ಲಿ ನೂಕಿ ಠಾಣೆಗೆ ಕರೆದೊಯ್ಯಲಾಗುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
