ಎಕ್ಸ್​ಪ್ರೆಸ್ ಬಸ್​ಗಳಿಗೆ ರಾಜಹಂಸ ಬಸ್ ಮಾದರಿ ವಿನ್ಯಾಸ ಮತ್ತು ಸೇವೆ ಒದಗಿಸಲು ನಿರ್ಧರಿಸಿರುವ ಕೆಎಸ್​ಆರ್​ಟಿಸಿ

ಬೆಂಗಳೂರು ಮತ್ತು ಧರ್ಮಸ್ಥಳ ನಡುವೆ ಓಡಾಡುವ ಈ ಬಸ್ ಒಳಭಾಗದಲ್ಲಿ ಸ್ವಲ್ಪ ರಾಜಹಂಸ ಬಸ್ ನಂತೆ ವಿನ್ಯಾಸಗೊಂಡಿದೆ. ಆಸನಗಳು ಸುಖಾಸೀನಗೊಂಡಿರುವುದನ್ನು ಸಂಸ್ಥೆಯ ಅಧಿಕಾರಿಗಳೊಂದಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವೀಕ್ಷಿಸುತ್ತಿದ್ದಾರೆ.

ಎಕ್ಸ್​ಪ್ರೆಸ್ ಬಸ್​ಗಳಿಗೆ ರಾಜಹಂಸ ಬಸ್ ಮಾದರಿ ವಿನ್ಯಾಸ ಮತ್ತು ಸೇವೆ ಒದಗಿಸಲು ನಿರ್ಧರಿಸಿರುವ ಕೆಎಸ್​ಆರ್​ಟಿಸಿ
|

Updated on: Aug 21, 2023 | 5:48 PM

ಬೆಂಗಳೂರು: ಶಕ್ತಿ ಯೋಜನೆ (Shakti Scheme) ಜಾರಿಗೊಳಿಸಿದ ಬಳಿಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ದಿವಾಳಿಯೇಳುತ್ತದೆ ಅಂತ ವಿರೋಧ ಪಕ್ಷಗಳ ನಾಯಕರು ಕುಹುಕವಾಡಿದ್ದರು. ಈ ತಿಂಗಳು ಸಂಸ್ಥೆಯ ನೌಕರರಿಗೆ ಸಂಬಳ ಬಿಡುಗಡೆಯಾಗೋದು ತಡವಾದಾಗ ಅವರು ಹೇಳಿದ್ದರಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ ಅನಿಸಿದ್ದು ನಿಜವೇ. ಆದರೆ, ಈ ಬಸ್ಸನ್ನು ನೋಡುತ್ತಿದ್ದರೆ ವಾಸ್ತವ ಬೇರೆಯಿದೆ ಅನಿಸದಿರದು. ರಾಜಹಂಸ (Rajahamsa) ಮಾದರಿ ವ್ಯವಸ್ಥೆ ಮತ್ತು ಸವಲತ್ತುಗಳನ್ನು ಎಕ್ಸ್ ಪ್ರೆಸ್ ಬಸ್ ಗಳಲ್ಲಿ ಕಲ್ಪಿಸಿ ರಸ್ತೆಗಿಳಿಸುವ ನಿರ್ಣಯವನ್ನು ಸಾರಿಗೆ ಇಲಾಖೆ ತೆಗೆದುಕೊಂಡಿದೆ ಮತ್ತು ಅದರ ನಮೂನೆ ಇಲ್ಲಿದೆ. ಬೆಂಗಳೂರು ಮತ್ತು ಧರ್ಮಸ್ಥಳ ನಡುವೆ ಓಡಾಡುವ ಈ ಬಸ್ ಒಳಭಾಗದಲ್ಲಿ ಸ್ವಲ್ಪ ರಾಜಹಂಸ ಬಸ್ ನಂತೆ ವಿನ್ಯಾಸಗೊಂಡಿದೆ. ಆಸನಗಳು ಸುಖಾಸೀನಗೊಂಡಿರುವುದನ್ನು ಸಂಸ್ಥೆಯ ಅಧಿಕಾರಿಗಳೊಂದಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ವೀಕ್ಷಿಸುತ್ತಿದ್ದಾರೆ. ಈ ಬಸ್ ಬೆಂಗಳೂರು ಬಿಟ್ಟರೆ ನಿಲ್ಲೋದು ಧರ್ಮಸ್ಥಳದಳದಲ್ಲೇ. ಮುಂದಿನ ಒಂದೂವರೆ ತಿಂಗಳ ಅವಧಿಯಲ್ಲಿ ಇಂಥ 300 ಬಸ್ ಗಳು ರಸ್ತೆಗಿಳಿಯಲಿವೆಯಂತೆ. ಇದನ್ನೆಲ್ಲ ನೋಡುತ್ತಿದ್ದರೆ ಕರಾರಸಾ ಸಂಸ್ಥೆ ನಷ್ಟದಲ್ಲಿದೆ ಅಂತ ಅನಿಸದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​