ಎಕ್ಸ್ಪ್ರೆಸ್ ಬಸ್ಗಳಿಗೆ ರಾಜಹಂಸ ಬಸ್ ಮಾದರಿ ವಿನ್ಯಾಸ ಮತ್ತು ಸೇವೆ ಒದಗಿಸಲು ನಿರ್ಧರಿಸಿರುವ ಕೆಎಸ್ಆರ್ಟಿಸಿ
ಬೆಂಗಳೂರು ಮತ್ತು ಧರ್ಮಸ್ಥಳ ನಡುವೆ ಓಡಾಡುವ ಈ ಬಸ್ ಒಳಭಾಗದಲ್ಲಿ ಸ್ವಲ್ಪ ರಾಜಹಂಸ ಬಸ್ ನಂತೆ ವಿನ್ಯಾಸಗೊಂಡಿದೆ. ಆಸನಗಳು ಸುಖಾಸೀನಗೊಂಡಿರುವುದನ್ನು ಸಂಸ್ಥೆಯ ಅಧಿಕಾರಿಗಳೊಂದಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವೀಕ್ಷಿಸುತ್ತಿದ್ದಾರೆ.
ಬೆಂಗಳೂರು: ಶಕ್ತಿ ಯೋಜನೆ (Shakti Scheme) ಜಾರಿಗೊಳಿಸಿದ ಬಳಿಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ದಿವಾಳಿಯೇಳುತ್ತದೆ ಅಂತ ವಿರೋಧ ಪಕ್ಷಗಳ ನಾಯಕರು ಕುಹುಕವಾಡಿದ್ದರು. ಈ ತಿಂಗಳು ಸಂಸ್ಥೆಯ ನೌಕರರಿಗೆ ಸಂಬಳ ಬಿಡುಗಡೆಯಾಗೋದು ತಡವಾದಾಗ ಅವರು ಹೇಳಿದ್ದರಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ ಅನಿಸಿದ್ದು ನಿಜವೇ. ಆದರೆ, ಈ ಬಸ್ಸನ್ನು ನೋಡುತ್ತಿದ್ದರೆ ವಾಸ್ತವ ಬೇರೆಯಿದೆ ಅನಿಸದಿರದು. ರಾಜಹಂಸ (Rajahamsa) ಮಾದರಿ ವ್ಯವಸ್ಥೆ ಮತ್ತು ಸವಲತ್ತುಗಳನ್ನು ಎಕ್ಸ್ ಪ್ರೆಸ್ ಬಸ್ ಗಳಲ್ಲಿ ಕಲ್ಪಿಸಿ ರಸ್ತೆಗಿಳಿಸುವ ನಿರ್ಣಯವನ್ನು ಸಾರಿಗೆ ಇಲಾಖೆ ತೆಗೆದುಕೊಂಡಿದೆ ಮತ್ತು ಅದರ ನಮೂನೆ ಇಲ್ಲಿದೆ. ಬೆಂಗಳೂರು ಮತ್ತು ಧರ್ಮಸ್ಥಳ ನಡುವೆ ಓಡಾಡುವ ಈ ಬಸ್ ಒಳಭಾಗದಲ್ಲಿ ಸ್ವಲ್ಪ ರಾಜಹಂಸ ಬಸ್ ನಂತೆ ವಿನ್ಯಾಸಗೊಂಡಿದೆ. ಆಸನಗಳು ಸುಖಾಸೀನಗೊಂಡಿರುವುದನ್ನು ಸಂಸ್ಥೆಯ ಅಧಿಕಾರಿಗಳೊಂದಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ವೀಕ್ಷಿಸುತ್ತಿದ್ದಾರೆ. ಈ ಬಸ್ ಬೆಂಗಳೂರು ಬಿಟ್ಟರೆ ನಿಲ್ಲೋದು ಧರ್ಮಸ್ಥಳದಳದಲ್ಲೇ. ಮುಂದಿನ ಒಂದೂವರೆ ತಿಂಗಳ ಅವಧಿಯಲ್ಲಿ ಇಂಥ 300 ಬಸ್ ಗಳು ರಸ್ತೆಗಿಳಿಯಲಿವೆಯಂತೆ. ಇದನ್ನೆಲ್ಲ ನೋಡುತ್ತಿದ್ದರೆ ಕರಾರಸಾ ಸಂಸ್ಥೆ ನಷ್ಟದಲ್ಲಿದೆ ಅಂತ ಅನಿಸದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?

