ವೇದಿಕೆ ಮೇಲೆ ಜ್ಯೂ. ಚಿರುಗಾಗಿ ಹುಡುಕಾಡಿದ ಮೇಘನಾ ರಾಜ್

| Updated By: ರಾಜೇಶ್ ದುಗ್ಗುಮನೆ

Updated on: May 02, 2022 | 9:16 PM

ರಾಮನಾರಾಯಣ್ ಅವರು ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ‘ರಾಜಮಾರ್ತಾಂಡ’ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ಕರೆಯಲಾಗಿತ್ತು. ಈ ವೇಳೆ ಅಚ್ಚರಿಯ ಘಟನೆ ನಡೆಯಿತು.

ನಟ ಚಿರಂಜೀವಿ ಸರ್ಜಾ ಅವರ (Chiranjeevi) ನಟನೆಯ ‘ರಾಜಮಾರ್ತಾಂಡ’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಚಿರು ನಟನೆಯ ಕೊನೆಯ ಸಿನಿಮಾ ಇದು ಎನ್ನುವ ಕಾರಣಕ್ಕೆ ಅಭಿಮಾನಿಗಳಿಗೆ ವಿಶೇಷ ಪ್ರೀತಿ ಇದೆ. ಅದರಲ್ಲೂ ನಟಿ ಮೇಘನಾ ರಾಜ್​ ಅವರು ಈ ಚಿತ್ರದ ಬಗ್ಗೆ ಹೆಚ್ಚು ಪ್ರೀತಿ ಇಟ್ಟುಕೊಂಡಿದ್ದಾರೆ. ರಾಮನಾರಾಯಣ್ ಅವರು ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ‘ರಾಜಮಾರ್ತಾಂಡ’ (Rajamartanda) ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ಕರೆಯಲಾಗಿತ್ತು. ಈ ಚಿತ್ರದಲ್ಲಿ ಜ್ಯೂ. ಚಿರು ಪಾತ್ರವನ್ನು ನಿರ್ಮಾಪಕರ ಮಗ ಮಾಡಿದ್ದಾನೆ. ವೇದಿಕೆ ಮೇಲೆ ಜ್ಯೂ. ಚಿರು ಬರಬೇಕು ಎಂದು ಕೋರಲಾಯಿತು. ಈ ವೇಳೆ ಮೇಘನಾ ರಾಜ್​ಗೆ (Meghana Raj) ಅಚ್ಚರಿ ಆಯಿತು. ರಾಯನ್ ಎಲ್ಲಿಂದ ಬಂದ ಎಂದು ಅವರು ಹುಡುಕಾಡಿದರು. ಆ ನಂತರ ಅಸಲಿ ವಿಚಾರ ತಿಳಿದು ಅವರು ನಕ್ಕರು.

ಇದನ್ನೂ ಓದಿ: Acharya: ರಾಮ್​ ಚರಣ್-ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾದ ಮೊದಲಾರ್ಧ ಹೇಗಿದೆ? ಇಲ್ಲಿದೆ ವಿವರ

ಚಿರಂಜೀವಿ, ರಾಮ್​ ಚರಣ್​ ಕಟೌಟ್​ಗೆ ಹಾಲಿನ ಅಭಿಷೇಕ ಮಾಡಿದ ಫ್ಯಾನ್ಸ್​; ಪವನ್​ ಕಲ್ಯಾಣ್​ಗೂ ಜೈಕಾರ

Follow us on