ವಿಜಯಪುರ: ಮೊಬೈಲ್​ ಟವರ್​ ಏರಿದ ಮಾನಸಿಕ ಅಸ್ವಸ್ಥ, ವಿಡಿಯೋ ನೋಡಿ

| Updated By: ವಿವೇಕ ಬಿರಾದಾರ

Updated on: Mar 19, 2024 | 2:58 PM

ಇಂಡಿ ತಾಲೂಕಿನ ತೆಗ್ಗಿಹಳ್ಳಿ ಗ್ರಾಮದ ಶಿವು ಕಡಣಿ ಮೊಬೈಲ್​ ಟವರ್​ ಏರಿ ಕುಳಿತಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ. ಯುವಕ ಶಿವು ಕಡಣಿ ಮಾನಸಿಕ ಅಸ್ವಸ್ಥನಾಗಿದ್ದು, ಈ ಹಿಂದೆ ಕೂಡ ಸಿಂದಗಿ ತಾಲೂಕಿನ ಬಳಗಾನೂರು ಹಾಗೂ ಇತರೆ ಗ್ರಾಮಗಳಲ್ಲಿರುವ ಟವರ್​ಗಳನ್ನು ಏರಿದ್ದನು.

ವಿಜಯಪುರ, ಮಾರ್ಚ್​ 19: ಮಾನಸಿಕ ಅಸ್ವಸ್ಥ ಯುವಕ ಇಂಡಿ (Indi) ಪಟ್ಟಣದ ಬಸವೇಶ್ವರ ಸರ್ಕಲ್​ನಲ್ಲಿರುವ ಮೊಬೈಲ್ ಟವರ್​​ನ್ನು (Mobile Tower) ಏರಿದ್ದಾನೆ. ಇಂಡಿ ತಾಲೂಕಿನ ತೆಗ್ಗಿಹಳ್ಳಿ ಗ್ರಾಮದ ಶಿವು ಕಡಣಿ ಟವರ್​ ಏರಿ ಕುಳಿತಿರುವ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಯುವಕನನ್ನು ಕೆಳಗಿಳಿಸಿದ್ದಾರೆ. ಬಳಿಕ ಪೊಲೀಸರು ಶಿವು ಕಡಣಿಯನ್ನು ಮನೆಗೆ ಬಿಟ್ಟು ಬಂದರು. ಶಿವು ಕಡಣಿ ಈ‌ ಹಿಂದೆ ಸಿಂದಗಿ ತಾಲೂಕಿನ ಬಳಗಾನೂರು ಹಾಗೂ ಇತರೆ ಗ್ರಾಮಗಳಲ್ಲಿರುವ ಟವರ್​ಗಳನ್ನು ಏರಿದ್ದನು. ಇಂಡಿ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿ‌ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow us on