ಡಿಕೆ ಶಿವಕುಮಾರ್ ಮೌನ ವ್ರತಕ್ಕೆ ಟಾಂಗ್ ಕೊಟ್ಟ ಸಚಿವ ಅಶ್ವತ್ಥ್ ನಾರಾಯಣ

Edited By: sandhya thejappa

Updated on: Jan 11, 2022 | 12:18 PM

ಡಿಕೆ ಶಿವಕುಮಾರ್ ಮಾತನಾಡಿದರೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಅದಕ್ಕೆ ಬಚಾವ್ ಆಗಲು ಮೌನ ವ್ರತಕ್ಕೆ ನಿರ್ಧರಿಸಿದ್ದಾರೆ ಅಷ್ಟೆ ಅಂತ ಸಚಿವ ಅಶ್ವತ್ಥ್ ನಾರಾಯಣ ಹೇಳಿದರು.

ಇಂದು ಕಾಂಗ್ರೆಸ್ ನಾಯರು ಮೂರನೇ ದಿನದ ಪಾದಯಾತ್ರೆ ನಡೆಸುತ್ತಿದ್ದಾರೆ. ಕನಕಪುದಿಂದ ಆರಂಭವಾದ ಪಾದಯಾತ್ರೆ ಇಂದು ಸಂಜೆ ಚಿಕ್ಕೇನಹಳ್ಳಿಗೆ ತಲುಪುತ್ತದೆ. ಪಾದಯಾತ್ರೆ ನಡುವೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ 3 ದಿನಗಳ ಕಾಲ ಮೌನ ವ್ರತಕ್ಕೆ ನಿರ್ಧರಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಸಚಿವ ಅಶ್ವತ್ಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಮಾತನಾಡಿದರೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಅದಕ್ಕೆ ಬಚಾವ್ ಆಗಲು ಮೌನ ವ್ರತಕ್ಕೆ ನಿರ್ಧರಿಸಿದ್ದಾರೆ ಅಷ್ಟೆ ಅಂತ ಹೇಳಿದರು. ಈ ವೇಳೆ ರೇಣುಕಾಚಾರ್ಯ ಕಾರ್ಯಕ್ರಮಕ್ಕೆ ಹೋಗಿದ್ದಕ್ಕೆ ಕ್ಷಮೆ ಕೇಳಿದ್ದಾರೆ. ಇನ್ನು ಮುಂದೆ ಜವಬ್ದಾರಿಯುತವಾಗಿ ನಡೆದುಕೊಳ್ಳುತ್ತೇನೆ ಎಂದಿದ್ದಾರೆ. ಕಾಂಗ್ರೆಸ್ನವರ ರೀತಿ ಬಂಡತನಕ್ಕೆ ಬಿದ್ದಿಲ್ಲ ಅಂತ ಸಚಿವ ಅಶ್ವತ್ಥ್ ನಾರಾಯಣ ಹೇಳಿದರು.

ಇದನ್ನೂ ಓದಿ

Viral Video: ಹದಗೆಟ್ಟ ಊರಿನ ರಸ್ತೆಯ ಬಗ್ಗೆ ವಿವರಿಸಲು ರಿಪೋರ್ಟರ್​ ಆದ ಬಾಲಕಿ

ಬಾಲಕರ ವಸತಿ ನಿಲಯದ ಸುತ್ತಮುತ್ತ ಬಿಯರ್ ಬಾಟಲ್​ಗಳ ರಾಶಿ; ಬೆಂಗಳೂರು ವಿಶ್ವವಿದ್ಯಾಲಯದಲ್ಲಿನ ಈ ಸ್ಥಿತಿಗೆ ಯಾರು ಹೊಣೆ?

Follow Us
Web contact

TV9 Kannada

Read More