5 ದಿನ ‘ಕಾವೇರಿ ಆರತಿ’: ಯಾವಾಗಿನಿಂದ? ಹೇಗೆ? ಎಲ್ಲಿ? ಇಲ್ಲಿದೆ ಮಾಹಿತಿ

Updated on: Sep 25, 2025 | 3:54 PM

ಮೈಸೂರು ದಸರಾ ಪ್ರಯುಕ್ತ ನಡೆಯುವ ಕಾವೇರಿ ಆರತಿ ಕುರಿತು ಸಚಿವ ಚೆಲುವರಾಯಸ್ವಾಮಿ ಮಾಹಿತಿ ಹಂಚಿಕೊಂಡಿದ್ದಾರೆ. ನಾಳೆ ಆರತಿಯ ಉದ್ಘಾಟನೆ ನಡೆಯಲಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ಸಲಹೆಯ ಮೇರೆಗೆ ಸಧ್ಯಕ್ಕೆ ಇರುವ ಜಾಗದಲ್ಲಿಯೇ ಆರತಿಯನ್ನು ನಡೆಸಲಿದ್ದೇವೆ. ಕೋರ್ಟ್​ನಿಂದ ಸಲಹೆ ಬಂದ ಬಳಿಕ ನಿರ್ದಿಷ್ಠ ಜಾಗದ ತಯಾರಿ ಮಾಡಬೇಕೆಂದಿದ್ದೇವೆ ಎಂದರು.

ಮೈಸೂರು, ಸೆಪ್ಟೆಂಬರ್ 25 : ಮೈಸೂರಿನಲ್ಲಿ ನಡೆಯುತ್ತಿರುವ ನಾಡಹಬ್ಬ ದಸರಾದ ಪ್ರಯುಕ್ತವಾಗಿ ಕಾವೇರಿ ಆರತಿಯನ್ನುಆಯೋಜಿಸಲಾಗುತ್ತಿದೆ. ಈ ಕುರಿತು ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ಕಾವೇರಿ ಆರತಿಗಾಗಿ ಯಾವುದೇ ತಯಾರಿಯಿಲ್ಲದೆ  ಇರುವ ಜಾಗದಲ್ಲೇ ಮಾಡಬೇಕು ಎಂದುಕೊಂಡಿದ್ದೇವೆ. ನಾಳೆ (ಸೆ.26) ಡಿಸಿಎಂ ಡಿ.ಕೆ ಶಿವಕುಮಾರ್ ಇದಕ್ಕೆ ಚಾಲನೆ ನೀಡಿ, ಸತತ 5 ದಿನಗಳ ವರೆಗೆ ಆರತಿ ನೆರವೇರಿಸುವಂತೆ ಹೇಳಿದ್ದಾರೆ. ಕೋರ್ಟ್​ ತೀರ್ಪಿನ ನಂತರ ಇದಕ್ಕೊಂದು ಶಾಶ್ವತ ಜಾಗವನ್ನು ಏರ್ಪಡಿಸುತ್ತೇವೆ. ನಾಳಿನ ಉದ್ಘಾಟನೆಗೆ ಶ್ರೀರಂಗಪಟ್ಟಣ, ಮಂಡ್ಯ, ಪಾಂಡುಪುರ ಜನರನ್ನು ನಾವು ವಿಶೇಷವಾಗಿ ಆಹ್ವಾನಿಸಿದ್ದೇವೆ. ಅದಾದ ನಂತರದ 5 ದಿನಗಳಲ್ಲಿ ಒಂದೊಂದು ತಾಲೂಕಿನವರೂ ಬರಬಹುದು ಎಂದಿದ್ದಾರೆ. ಈ ವೀಡಿಯೋ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.