Sign In

By signing in or creating an account, you agree with Associated Broadcasting Company's Terms & Conditions and Privacy Policy.

Stone pelting: ಬಾಗಲಕೋಟೆ-ಮೈಸೂರು ಎಕ್ಸ್​​ಪ್ರೆಸ್​​​ ಮೇಲೆ ಕಲಬುರಗಿ ಬಳಿ ಕಳೆದ ರಾತ್ರಿ ಕಲ್ಲು ತೂರಾಟ, ಪ್ರಯಾಣಿಕರು ಸುರಕ್ಷಿತ

Stone pelting: ಬಾಗಲಕೋಟೆ-ಮೈಸೂರು ಎಕ್ಸ್​​ಪ್ರೆಸ್​​​ ಮೇಲೆ ಕಲಬುರಗಿ ಬಳಿ ಕಳೆದ ರಾತ್ರಿ ಕಲ್ಲು ತೂರಾಟ, ಪ್ರಯಾಣಿಕರು ಸುರಕ್ಷಿತ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 20, 2023 | 10:59 AM

ಸೋಜಿಗದ ಸಂಗತಿಯೆಂದರೆ, ವಾಡಿ ಜಂಕ್ಷನ್ ನಲ್ಲಿದ್ದ ರೇಲ್ವೇಸ್ ಆಧಿಕಾರಿಗಳಿಗೆ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ

ಕಲಬುರಗಿ: ಬಾಗಲಕೋಟೆ-ಮೈಸೂರು ನಡುವೆ ಚಲಿಸುವ ಬಸವ ಎಕ್ಸ್ ಪ್ರೆಸ್ (Basava Express) ಟ್ರೈನಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ಬುಧವಾರ ರಾತ್ರಿ ಕಲಬುರಗಿ (Kalaburagi) ನಗರಕ್ಕೆ ಹತ್ತಿರದ ಬಬಲಾದ ಗ್ರಾಮದ ಬಳಿ ನಡೆದಿದೆ. ಹವಾನಿಯಂತ್ರಿತ ಬೋಗಿಯೊಂದರ (AC compartment) ಕಿಟಕಿ ಗಾಜುಗಳು ಜಖಂಗೊಂಡಿವೆಯಾದರೂ ಅದೃಷ್ಟವಶಾತ್ ಪ್ರಯಾಣಿಕರಾರೂ ಗಾಯಗೊಂಡಿಲ್ಲ. ವಾಡಿ ರೇಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಸೋಜಿಗದ ಸಂಗತಿಯೆಂದರೆ, ವಾಡಿ ಜಂಕ್ಷನ್ ನಲ್ಲಿದ್ದ ರೇಲ್ವೇಸ್ ಆಧಿಕಾರಿಗಳಿಗೆ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಟಿವಿ9 ಕಲಬುರಗಿ ವರದಿಗಾರ ಕೇಳಿದ ಮಾಹಿತಿಗೆ ಅವರು ಅನ್ಯಮನಸ್ಕರಾಗಿ ಉತ್ತರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ