ಹಾಸನಾಂಬೆ ದರ್ಶನಕ್ಕೆ ಬರುವಾಗ ಕಾರು ತಡೆದಿದ್ದಕ್ಕೆ ಶಾಸಕ ಹೆಚ್.ಡಿ. ರೇವಣ್ಣ ಗರಂ
ಶಿಷ್ಟಾಚಾರ ಪಾಲನೆ ಅಧಿಕಾರಿಗಳಿಗೆ ತಿಳಿಸದೆ ಹಾಸನಾಂಬೆ ದರ್ಶನಕ್ಕೆ ತಮ್ಮ ಭದ್ರತಾ ವ್ಯವಸ್ಥೆ ಜೊತೆ ಬಂದ ಶಾಸಕ ಹೆಚ್.ಡಿ. ರೇವಣ್ಣ ಅವರನ್ನು ಸಿಬ್ಬಂದಿ ತಡೆದ ಪರಿಣಾಮ ಹೈಡ್ರಾಮಾ ನಡೆದಿದೆ. ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಶಾಸಕರು ಸಿಟ್ಟಾಗಿದ್ದು, ಬಳಿಕ ಕಾರಿನಿಂದ ಇಳಿದು ನಡೆದುಕೊಂಡೇ ದರ್ಶನಕ್ಕೆ ತೆರಳಿದ್ದಾರೆ.
ಹಾಸನ, ಅಕ್ಟೋಬರ್ 13: ಹಾಸನಾಂಬೆ ದರ್ಶನಕ್ಕೆಂದು ಬರುವಾಗ ತಮ್ಮ ಕಾರನ್ನು ತಡೆದ ಅಧಿಕಾರಿಗಳ ವಿರುದ್ಧ ಶಾಸಕ ಹೆಚ್.ಡಿ.ರೇವಣ್ಣ (H.D. Revanna) ಗರಂ ಆದ ಪ್ರಸಂಗ ನಡೆದಿದೆ. ತಮ್ಮ ಭದ್ರತಾ ವ್ಯವಸ್ಥೆಯೊಂದಿಗೆ ಶಿಷ್ಟಾಚಾರ ಪಾಲನೆ ಅಧಿಕಾರಿಗಳಿಗೆ ತಿಳಿಸದೆ ಹಾಸನಾಂಬೆ ದರ್ಶನಕ್ಕೆ ರೇವಣ್ಣ ಆಗಮಿಸಿದ್ದರು. ಹೀಗಾಗಿ ಅವರ ಕಾರನ್ನು ಕಂದಾಯ ಇಲಾಖೆ ಸಿಬ್ಬಂದಿ ತಡೆದಿದ್ದಾರೆ. ಈ ವೇಳೆ ಗರಂ ಆದ ಶಾಸಕರು, ಬಳಿಕ ಕಾರಿನಿಂದ ಇಳಿದು ನಡೆದುಕೊಂಡು ದರ್ಶನಕ್ಕೆ ತೆರಳಿದ್ದಾರೆ. ಹೆಚ್.ಡಿ.ರೇವಣ್ಣ, ಪತ್ನಿ ಭವಾನಿಗೆ ಸಿಬ್ಬಂದಿ ನೇರ ಎಂಟ್ರಿ ಕೊಟ್ಟಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಹೆಚ್ಡಿಕೆ ವಿರುದ್ಧ ‘ಕೋಳಿ’ ಪೋಸ್ಟರ್ ಅಂಟಿಸಿ ಕಾಂಗ್ರೆಸ್ ವ್ಯಂಗ್ಯ
ಗೆಳೆಯ ವಾಸುಕಿ ವೈಭವ್ ಕಾನ್ಸರ್ಟ್ಗೆ ಟಿಕೆಟ್ ಖರೀದಿಸಿ ಬಂದ ಶೈನ್ ಶೆಟ್ಟಿ
ಇಂದು ಮಾಸ ಶಿವರಾತ್ರಿ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಭಾರತ-ಚೀನಾ ಗಡಿ ಬಳಿ ಪ್ರವಾಹ; ಉತ್ತರಾಖಂಡದಲ್ಲಿ ಕೊಚ್ಚಿಹೋದ ಬಿಆರ್ಒ ಸೇತುವೆ

