HD Revanna
ಕರ್ನಾಟಕದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ ಎಚ್.ಡಿ. ರೇವಣ್ಣ ಹುಟ್ಟಿದ್ದು 1966ರ ಡಿಸೆಂಬರ್ 17ರಂದು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಹಿರಿಯ ಮಗ. ಎಚ್.ಡಿ. ಕುಮಾರಸ್ವಾಮಿ ಅವರ ಅಣ್ಣನಾದ ರೇವಣ್ಣ ಓದಿದ್ದು ಎಸ್ಸೆಸ್ಸೆಲ್ಸಿವರೆಗೆ ಮಾತ್ರ. ಆದರೆ ತಮ್ಮ ಹುಟ್ಟೂರು ಇರುವ ಹೊಳೆನರಸೀಪುರ ಕ್ಷೇತ್ರವನ್ನು ಜೆಡಿಎಸ್ ಭದ್ರಕೋಟೆಯನ್ನಾಗಿ ಮಾಡುವಲ್ಲಿ ಅವರ ಶ್ರಮ ಹೆಚ್ಚಿದೆ. 1994ರಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದರು. 1999ರಲ್ಲಿ ಸೋತ ಬಳಿಕ 2004ರಿಂದ ಇಲ್ಲಿ ಸತತವಾಗಿ ಗೆಲುವು ಪಡೆದರು. ಎಚ್ ಡಿ ರೇವಣ್ಣ ಲೋಕೋಪಯೋಗಿ ಖಾತೆ (ಪಿಡಬ್ಲ್ಯುಡಿ) ಮತ್ತು ಇಂಧನ ಖಾತೆಗಳಿರುವ ಸಚಿವ ಸ್ಥಾನಗಳನ್ನು ನಿಭಾಯಿಸಿದ್ದಾರೆ. ಧರಂ ಸಿಂಗ್ ಮತ್ತು ಕುಮಾರಸ್ವಾಮಿ ನೇತೃತ್ವದ ಸರ್ಕಾರಗಳಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕ ಹಾಲು ಒಕ್ಕೂಟ ಕೆಎಂಎಫ್ನಲ್ಲಿ 9 ವರ್ಷ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.
ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ: ಸೂರಜ್ ರೇವಣ್ಣಗೆ ಶಾಕ್ ಕೊಟ್ಟ ಕೋರ್ಟ್
ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಜೀವ ಬೆದರಿಕೆಯೊಡ್ಡಿದ ಆರೋಪ ಎದುರಿಸುತ್ತಿರುವ ಸೂರಜ್ ರೇವಣ್ಣಗೆ ಬಿಗ್ ಶಾಕ್ ಕೊಟ್ಟಿದೆ. ಸೂರಜ್ ರೇವಣ್ಣ ವಿರುದ್ಧದ ಎಫ್ಐಆರ್ಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಸಲ್ಲಿಸಿದ್ದ 'ಬಿ' ರಿಪೋರ್ಟ್ ವರದಿಯನ್ನು ತಿರಿಸ್ಕರಿಸಿದೆ. ಅಲ್ಲದೇ ತನಿಖೆ ಮುಂದುವರಿಕೆಗೆ ಆದೇಶಿಸಿದೆ. ಇದರಿಂದ ಸೂರಜ್ ರೇವಣ್ಣ ಮತ್ತೆ ಸಂಕಷ್ಟ ಎದುರಾಗಿದೆ.
- Ramesha M
- Updated on: Dec 2, 2025
- 8:55 pm
ಹಾಸನಾಂಬೆ ದರ್ಶನಕ್ಕೆ ಬರುವಾಗ ಕಾರು ತಡೆದಿದ್ದಕ್ಕೆ ಶಾಸಕ ಹೆಚ್.ಡಿ. ರೇವಣ್ಣ ಗರಂ
ಶಿಷ್ಟಾಚಾರ ಪಾಲನೆ ಅಧಿಕಾರಿಗಳಿಗೆ ತಿಳಿಸದೆ ಹಾಸನಾಂಬೆ ದರ್ಶನಕ್ಕೆ ತಮ್ಮ ಭದ್ರತಾ ವ್ಯವಸ್ಥೆ ಜೊತೆ ಬಂದ ಶಾಸಕ ಹೆಚ್.ಡಿ. ರೇವಣ್ಣ ಅವರನ್ನು ಸಿಬ್ಬಂದಿ ತಡೆದ ಪರಿಣಾಮ ಹೈಡ್ರಾಮಾ ನಡೆದಿದೆ. ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಶಾಸಕರು ಸಿಟ್ಟಾಗಿದ್ದು, ಬಳಿಕ ಕಾರಿನಿಂದ ಇಳಿದು ನಡೆದುಕೊಂಡೇ ದರ್ಶನಕ್ಕೆ ತೆರಳಿದ್ದಾರೆ.
- Manjunath KB
- Updated on: Oct 13, 2025
- 11:24 am
ಪ್ರಜ್ವಲ್ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ, ಅಷ್ಟನ್ನು ಮಾತ್ರ ಹೇಳಬಲ್ಲೆ: ಸೂರಜ್ ರೇವಣ್ಣ
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷದ ಶಾಸಕರಿಗೆ ₹25 ಕೋಟಿ ಮತ್ತು ಆಡಳಿತ ಪಕ್ಷದ ಶಾಸಕರಿಗೆ ₹50 ಕೋಟಿ ಅನುದಾನ ನೀಡೋದಾಗಿ ಹೇಳಿದ್ದಾರೆ, ಇನ್ನೂ ಬಿಡುಗಡೆ ಮಾಡಿಲ್ಲ, ಸೋಮವಾರದಿಂದ ವಿಧಾನಸಭಾ ಅಧಿವೇಶನ ಶುರುವಾಗಲಿದೆ, ಅದಕ್ಕಿಂತ ಮೊದಲೇ ಮಾಡುತ್ತಾರೋ ಅಥವಾ ನಂತರ ಮಾಡುತ್ತಾರೋ ಗೊತ್ತಿಲ್ಲ, ಬಿಡುಗಡೆ ಮಾಡುವದನ್ನು ಅವರೇ ಹೇಳಿರುವುದರಿಂದ ಕಾಯಬೇಕು ಎಂದು ಸೂರಜ್ ರೇವಣ್ಣ ಹೇಳಿದರು.
- Arun Belly
- Updated on: Aug 8, 2025
- 4:38 pm
ಪೂರ್ತಿ ಕುಟುಂಬ ರಾಜಕಾರಣದಲ್ಲಿದ್ದರೂ ಪ್ರಜ್ವಲ್ ಪರದೇಶಿ, ಇನ್ನು ಜೈಲುವಾಸವೇ ಬದುಕು
ಜನಪ್ರತಿನಿಧಿಗಳ ನ್ಯಾಯಾಲಯ ಪ್ರಜ್ವಲ್ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರೂ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ ಎಂದು ಹೇಳಲಾಗುತ್ತಿದೆ. ಅದು ಸರಿ, ಅದರೆ, ಜಾಮೀನು ಕೋರಿ ಇವರು ಸಲ್ಲಿಸಿದ್ದ ಅರ್ಜಿ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯ ಎರಡು ಕಡೆಯೂ ತಿರಸ್ಕೃತಗೊಂಡಿತ್ತು ಅನ್ನೋದನ್ನು ಮರೆಯಬಾರದು. ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಅವರ ಮೇಲಿನ ಮತ್ತೊಂದು ಆರೋಪದ ವಿಚಾರಣೆ ಆರಂಭವಾಗಿದೆ.
- Arun Belly
- Updated on: Aug 2, 2025
- 8:29 pm
ಹೆಚ್ಡಿ ರೇವಣ್ಣ ಬೆಂಗಳೂರು ಮನೆ ಮುಂದೆ ಬೀದಿನಾಯಿಗಳೂ ಸುಳಿದಾಡುತ್ತಿಲ್ಲ, ಸುತ್ತಲೂ ಸ್ಮಶಾನ ಮೌನ
ಪ್ರಜ್ವಲ್ ರೇವಣ್ಣಗೆ ಜಾಮೀನು ಸಿಕ್ಕರೆ ಅವರ 35ನೇ ಹುಟ್ಟುಹಬ್ಬವನ್ನು ಮಂಗಳವಾರ (ಆಗಸ್ಟ್ 5) ಇದೇ ಮನೆಯಲ್ಲಿ ವಿಜೃಂಭಣೆಯಿಂದ ಆಚರಿಸುವ ಯೋಚನೆ ರೇವಣ್ಣ ದಂಪತಿಗಿತ್ತು. ಅದರೆ ನಿನ್ನೆ ನ್ಯಾಯಾಲಯ ಪ್ರಜ್ವಲ್ ದೋಷಿ ಅಂತ ತೀರ್ಪಿತ್ತ ನಂತರ ಅವರ ಉತ್ಸಾಹ ಕಮರಿ ಹೋಗಿತ್ತು. ಇವತ್ತು ಜೀವಾವಧಿ ಶಿಕ್ಷೆಯ ಸುದ್ದಿ ಕೇಳಿ ರೇವಣ್ಣ ಮತ್ತು ಭವಾನಿಯವರ ಜಂಘಾಬಲವೇ ಉಡುಗಿಹೋಗಿದೆ.
- Arun Belly
- Updated on: Aug 2, 2025
- 6:30 pm
ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ: ಮಾಧ್ಯಮಗಳಿಗೆ ಏನನ್ನೂ ಹೇಳದ ಹೆಚ್ ಡಿ ರೇವಣ್ಣ
ಪ್ರಜ್ವಲ್ ರೇವಣ್ಣ ವಿರುದ್ಧ ಬಹಳಷ್ಟು ಸಂತ್ರಸ್ತೆಯರು ಮಾರ್ಯದೆ, ಗೌರವಕ್ಕೆ ಹೆದರಿ ದೂರು ಸಲ್ಲಿಸಿಲ್ಲ. ಕೆಲವಷ್ಟೇ ಜನ ಧೈರ್ಯ ಮಾಡಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅವರ ಲ್ಯಾಪ್ಟಾಪ್ನಲ್ಲಿದ್ದ ವಿಡಿಯೋಗಳನ್ನು ಪೆನ್ ಡ್ರೈವ್ಗಳಿಗೆ ಅಪ್ಲೋಡ್ ಮಾಡಿಕೊಂಡು ಹಾಸನ ನಗರ ಮತ್ತು ಇತರ ಭಾಗಗಳಲ್ಲಿ ಪೆನ್ ಡ್ರೈವ್ಗಳನ್ನು ಹಂಚಲಾಗಿತ್ತು.
- Arun Belly
- Updated on: Aug 1, 2025
- 5:55 pm
ಪ್ರಜ್ವಲ್ ತಪ್ಪಿತಸ್ಥ ಅಂತ ಕೋರ್ಟ್ ತೀರ್ಪು ನೀಡಿದ ಬಳಿಕ ತಾನು ಹೇಳೋದೇನಿರುತ್ತದೆ? ಸುಮಲತಾ ಅಂಬರೀಶ್
ಪ್ರಕರಣದ ಎಲ್ಲ ಅಂಶಗಳನ್ನು ಗಮನಿಸಿಯೇ ಜನಪ್ರತಿನಿಧಿಗಳ ಕೋರ್ಟ್ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ತೀರ್ಪು ನೀಡಿರುತ್ತದೆ, ಕೋರ್ಟ್ ಮಾತಾಡಿರುವುದರಿಂದ ತಾನು ಮಾತಾಡುವುದರಲ್ಲಿ ಅರ್ಥವಿರುವುದಿಲ್ಲ ಎಂದು ಸುಮಲತಾ ಅಂಬರೀಶ್ ಹೇಳಿದರು. ಕಾಂಗ್ರೆಸ್ ನಾಯಕರನ್ನು ಹೊರತುಪಡಿಸಿ, ಬಿಜೆಪಿ ನಾಯಕರಾಗಲೀ, ಜೆಡಿಎಸ್ ಮುಖಂಡರಾಗಲೀ ಪ್ರಜ್ವಲ್ ಪ್ರಕರಣದ ತೀರ್ಪಿನ ಬಗ್ಗೆ ಕಾಮೆಂಟ್ ಮಾಡುತ್ತಿಲ್ಲ.
- Arun Belly
- Updated on: Aug 1, 2025
- 5:40 pm
ಪ್ರಜ್ವಲ್ ರೇವಣ್ಣ ವಿರುದ್ಧ ಬಂದಿರುವ ತೀರ್ಪಿಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಯಾಕೆ ಪ್ರತಿಕ್ರಿಯಿಸುತ್ತಿಲ್ಲ? ಪ್ರಿಯಾಂಕ್ ಖರ್ಗೆ
ನ್ಯಾಯಾಲಯವೇ ಪ್ರಜ್ವಲ್ ರೇವಣ್ಣ ತಪ್ಪಿತಸ್ಥ ಅಂತ ಹೇಳಿದೆ, ತಾನು ಅಂದುಕೊಳ್ಳುವ ಹಾಗೆ ಕೇವಲ ಒಂದು ಪ್ರಕರಣದಲ್ಲಿ ಮಾತ್ರ ನ್ಯಾಯಾಲಯ ದೋಷಿ ಅಂತ ಹೇಳಿದೆ, ಇನ್ನೂ ಮೂರ್ನಾಲ್ಕು ಪ್ರಕರಣಗಳ ವಿಚಾರಣೆ ನಡೆಯಬೇಕಿದೆ, ಜೆಡಿಎಸ್ ಮತ್ತು ಬಿಜೆಪಿ ನಾಯಕರು ಉತ್ತರ ನೀಡಬೇಕು, ಪ್ರಜ್ವಲ್, ಸೂರಜ್, ಮುನಿರತ್ನ ಎಲ್ಲರ ವಿರುದ್ಧ ದಾಖಲಾಗಿರೋದು ಅತ್ಯಾಚಾರದ ಪ್ರಕರಣಗಳು ಎಂದು ಖರ್ಗೆ ಹೇಳಿದರು.
- Arun Belly
- Updated on: Aug 1, 2025
- 4:09 pm
ಸರ್ಕಾರದ ವಿರುದ್ಧ ಸಿಡಿಯುವ ರೇವಣ್ಣ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಮತ್ತು ಗುಂಡೂರಾವ್ರನ್ನು ಟೀಕಿಸಲ್ಲ
ಗಮನಿಸಬೇಕಾದ ಸಂಗತಿಯೆಂದರೆ, ಜಿಲ್ಲಾಸ್ಪತ್ರೆ ಮತ್ತು ನಿರ್ದಿಷ್ಟವಾಗಿ ಹಾಸನ ಜಿಲ್ಲೆ ಅವ್ಯವಸ್ಥೆಗಳ ಆಗರವಾಗಿದ್ದರೂ ಶಾಸಕ ರೇವಣ್ಣ, ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಅವರನ್ನು ದೂರುವುದಿಲ್ಲ, ಇಬ್ಬರೂ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುತ್ತಾರೆ. ಉಸ್ತುವಾರಿ ಸಚಿವನಿಗೆ ಮಂತ್ರಗಿರಿ ಬೇಕಿಲ್ಲ ಅನ್ನೋದು ರೇವಣ್ಣಗೆ ಇನ್ನೂ ಗೊತ್ತಾದಂತಿಲ್ಲ.
- Arun Belly
- Updated on: Jul 5, 2025
- 10:15 am
ವರ್ಗಾವಣೆ ಧಂದೆಯನ್ನು ಸರ್ಕಾರ ಎಗ್ಗಿಲ್ಲದೆ ನಡೆಸುತ್ತಿದೆ ಎಂದ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ
ವರ್ಗಾವಣೆ ಧಂದೆಯನ್ನು ಕಾಂಗ್ರೆಸ್ ಸರ್ಕಾರ ಎಗ್ಗಿಲ್ಲದ ನಡೆಸುತ್ತಿದೆ, ತಮಗೆ ಬೇಕಾದ ಆಫೀಸರ್ಗಳನ್ನು ಹಾಕಿಸಿಕೊಳ್ಳಬೇಕಾದರೆ ₹ 5-10 ಲಕ್ಷ ಖರ್ಚು ಮಾಡಬೇಕು, ತನ್ನ ಕ್ಷೇತ್ರದ ಒಬ್ಬ ಸರ್ಕಾರಿ ನೌಕರನನ್ನು ಉಡುಪಿ ಜಿಲ್ಲೆಯ ಬೆಳ್ತಂಗಡಿಗೆ ಟ್ರಾನ್ಸ್ಫರ್ ಮಾಡಲಾಗಿದೆ ಎಂದು ಹೇಳಿದ ರೇವಣ್ಣ ಅವರು, ಇದೆಲ್ಲ ಬಹಳ ದಿನ ನಡೆಯಲ್ಲ, ದೇವರೇ ನಿಮಗೆ ಶಿಕ್ಷೆ ನೀಡುತ್ತಾನೆ ಎಂದು ಸಚಿವ ಸುಧಾಕರ್ರನ್ನು ಎಚ್ಚರಿಸಿದರು.
- Arun Belly
- Updated on: Jun 30, 2025
- 6:53 pm