
HD Revanna
ಕರ್ನಾಟಕದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ ಎಚ್.ಡಿ. ರೇವಣ್ಣ ಹುಟ್ಟಿದ್ದು 1966ರ ಡಿಸೆಂಬರ್ 17ರಂದು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಹಿರಿಯ ಮಗ. ಎಚ್.ಡಿ. ಕುಮಾರಸ್ವಾಮಿ ಅವರ ಅಣ್ಣನಾದ ರೇವಣ್ಣ ಓದಿದ್ದು ಎಸ್ಸೆಸ್ಸೆಲ್ಸಿವರೆಗೆ ಮಾತ್ರ. ಆದರೆ ತಮ್ಮ ಹುಟ್ಟೂರು ಇರುವ ಹೊಳೆನರಸೀಪುರ ಕ್ಷೇತ್ರವನ್ನು ಜೆಡಿಎಸ್ ಭದ್ರಕೋಟೆಯನ್ನಾಗಿ ಮಾಡುವಲ್ಲಿ ಅವರ ಶ್ರಮ ಹೆಚ್ಚಿದೆ. 1994ರಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದರು. 1999ರಲ್ಲಿ ಸೋತ ಬಳಿಕ 2004ರಿಂದ ಇಲ್ಲಿ ಸತತವಾಗಿ ಗೆಲುವು ಪಡೆದರು. ಎಚ್ ಡಿ ರೇವಣ್ಣ ಲೋಕೋಪಯೋಗಿ ಖಾತೆ (ಪಿಡಬ್ಲ್ಯುಡಿ) ಮತ್ತು ಇಂಧನ ಖಾತೆಗಳಿರುವ ಸಚಿವ ಸ್ಥಾನಗಳನ್ನು ನಿಭಾಯಿಸಿದ್ದಾರೆ. ಧರಂ ಸಿಂಗ್ ಮತ್ತು ಕುಮಾರಸ್ವಾಮಿ ನೇತೃತ್ವದ ಸರ್ಕಾರಗಳಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕ ಹಾಲು ಒಕ್ಕೂಟ ಕೆಎಂಎಫ್ನಲ್ಲಿ 9 ವರ್ಷ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.
ವೇದಿಕೆಯ ಮೇಲೆ ಹಾರ ಹಾಕಿಸಿಕೊಳ್ಳುವಾಗ ಸೂರಜ್ ರೇವಣ್ಣನನ್ನು ಹತ್ತಿರಕ್ಕೆ ಕರೆದ ನಿಖಿಲ್ ಕುಮಾರಸ್ವಾಮಿ!
ಮಾಧ್ಯಮಗಳಲ್ಲಿ ಪದೇಪದೆ ವರದಿಯಾಗಿರುವಂತೆ ಕುಮಾರಸ್ವಾಮಿಯವರು ತಮ್ಮ ಮಗ ನಿಖಿಲ್ನನ್ನು ಪಕ್ಷದ ರಾಜ್ಯಾಧ್ಯಕ್ಷನಾಗಿ ಘೋಷಿಸಲು ಸಕಲ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅವರ ಪ್ರಸ್ತಾಪಿತ ನಡೆಗೆ ಜೆಡಿಎಸ್ ನಾಯಕರಿಂದ ವಿರೋಧವೇನೂ ಎದುರಾಗಿಲ್ಲ. ಕುಟುಂಬದ ರಾಜಕೀಯ ಲೆಗಸಿಯನ್ನು ಮಗ ಮುಂದುವರಿಸಿಕೊಂಡು ಹೋಗಲಿ ಅನ್ನೋದು ಕುಮಾರಸ್ವಾಮಿಯವರ ಇರಾದೆಯಾಗಿರಬಹುದು. ಸೂರಜ್ನನ್ನು ಅಧ್ಯಕ್ಷ ಮಾಡುವಂತೆ ರೇವಣ್ಣ ಒತ್ತಾಯಿಲಾರರು.
- Arun Belly
- Updated on: Feb 19, 2025
- 6:53 pm
ಜನರು ಯಾರಿಗಾದರೂ ವೋಟು ನೀಡಲಿ ಅದರೆ ಊರುಗಳನ್ನು ನೆಮ್ಮದಿಯಿಂದಿರಲು ಬಿಡಿ: ಹೆಚ್ ಡಿ ರೇವಣ್ಣ, ಶಾಸಕ
ಕಾಮಸಮುದ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ರಾಜಕೀಯ ಹಗೆತನ ಹೆಚ್ಚುತ್ತಿದೆ. ಜನ ಯಾರಿಗೆ ವೋಟು ಹಾಕುತ್ತಾರೆ ಅನ್ನೋದು ಮುಖ್ಯವಲ್ಲ, ಅದು ಅವರ ವೈಯಕ್ತಿಕ ವಿಚಾರ, ಅದರೆ ಊರು ನೆಮ್ಮದಿಯಾಗಿರಬೇಕು, ಶಾಂತಿ ನೆಲೆಸಿರಬೇಕು, ಗಲಭೆಗಳಿಗೆ ಅವಕಾಶ ನೀಡಬಾರದೆಂದು ರೇವಣ್ಣ ಪೊಲೀಸರಿಗೆ ತಾಕೀತು ಮಾಡಿದರು. ರಾಜಕಾರಣ ಬೇರೆ ಜನರ ಬದುಕೇ ಬೇರೆ ಎಂದು ಶಾಸಕ ಹೇಳಿದರು.
- Arun Belly
- Updated on: Feb 11, 2025
- 11:18 am
ದೇಶದಲ್ಲಿ ಪ್ರಾಮಾಣಿಕ ರಾಜಕಾರಣಿಗಳ ಕುಟುಂಬ ಇದ್ದರೆ ಅದು ದೇವೇಗೌಡರದ್ದು ಮಾತ್ರ: ಎನ್ ಚಲುವರಾಯಸ್ವಾಮಿ
ದೇವೇಗೌಡರ ಜೊತೆ ತಾನಿದ್ದಾಗ ಅವರು ತಮ್ಮ ಮಕ್ಕಳ ಬಗ್ಗೆ ಏನು ಹೇಳುತ್ತಿದ್ದರು, ನೀಡುತ್ತಿದ್ದ ಬುದ್ಧಿವಾದ ಹೇಗಿರುತಿತ್ತ್ತು ಅನ್ನೋದೆಲ್ಲ ಗೊತ್ತಿದೆ, ಅವರು ಕಾಂಗ್ರೆಸ್ ನಾಯಕರನ್ನು ಟೀಕಿಸುವ ಬದಲು ಅವರ ಮನೆಯಲ್ಲಿ ಸಂಸದರು, ಮಾಜಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು-ಎಲ್ಲ ಇದ್ದಾರೆ, ಅವರ ಬಗ್ಗೆ ಒಂದಿಷ್ಟು ಮಾತಾಡಲಿ, ಮೊದಲು ಬಿಜೆಪಿಯನ್ನು ಟೀಕಿಸುತ್ತಿದ್ದರು, ಈಗ ಕಾಂಗ್ರೆಸ್ ಎಂದು ಸಚಿವ ಹೇಳಿದರು.
- Arun Belly
- Updated on: Feb 7, 2025
- 4:22 pm
ಕಾಂಗ್ರೆಸ್ ಪಕ್ಷ ಜೆಡಿಎಸ್ ಶಾಸಕರನ್ನು ಸೆಳೆದುಕೊಳ್ಳುವ ಪ್ರಯತ್ನ ಮಾಡಿದರೆ ನಾವು ಹೆದರಲ್ಲ: ಹೆಚ್ ಡಿ ರೇವಣ್ಣ
ಕಾಂಗ್ರೆಸ್ ಪಕ್ಷ ಏನೇ ಮಾಡಿದರೂ ಜೆಡಿಎಸ್ ಹೆದರಲ್ಲ, ದೇವೇಗೌಡರ ಕಣ್ಣ ಮುಂದೇನೇ ಈ ರಾಜ್ಯಕ್ಕೆ ಏನು ಕಾದಿದೆ ಅನ್ನೋದನ್ನು ನೋಡಬೇಕಿದೆ, ಆದರೆ ಇದು ಅಸಲಿ ಕಾಂಗ್ರೆಸ್ ಅಲ್ಲ, ಅಂದರೆ ಮಹಾತ್ಮಾ ಗಾಂಧಿಯವರು ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಅಲ್ಲ, ಆ ಕಾಂಗ್ರೆಸ್ ಪಕ್ಷವೇ ಬೇರೆ, ಈಗಿನ ಕಾಂಗ್ರೆಸ್ ಪಕ್ಷವೇ ಬೇರೆ, ಈಗೀರೋದು 75 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಎಂದು ರೇವಣ್ಣ ಹೇಳಿದರು.
- Arun Belly
- Updated on: Feb 5, 2025
- 4:28 pm
ಪೆನ್ಡ್ರೈವ್ಗಳ ಬಗ್ಗೆ ಮಾತಾಡುವ ಸೂರಜ್ ರೇವಣ್ಣಗೆ ಆ ಕುಕೃತ್ಯ ರೆಕಾರ್ಡ್ ಮಾಡಿದ್ಯಾರು ಅಂತ ಗೊತ್ತಿಲ್ವೇ? ಶೇಯಸ್ ಪಟೇಲ್
ಆರು ಲಕ್ಷ ಮತ ಪಡೆದಿರುವ ತನಗೆ ಪೆನ್ಡ್ರೈವ್ ಗಳನ್ನು ಬಳಸಿಕೊಂಡು ಸಂಸದನಾಗುವ ದರ್ದು ಇರಲಿಲ್ಲ, ಅಸಲಿಗೆ, ನೂರಾರು ಹೆಣ್ಣುಮಕ್ಕಳ ಬಾಳು ಹಾಳು ಮಾಡಿರುವ ಪೆನ್ಡ್ರೈವ್ ಗಳ ಬಗ್ಗೆ ಮಾತಾಡುವುದು ತನಗೆ ಬೇಕಿಲ್ಲ, ಇಷ್ಟಕ್ಕೂ ಆ ಕುಕೃತ್ಯಗಳನ್ನು ರೆಕಾರ್ಡ್ ಮಾಡಿದ್ದು ಯಾರು? ಆ ಹೆಣ್ಣಮಕ್ಕಳ ನರಕಸದೃಶ ಬದುಕಿಗೆ ಕಾರಣರಾದವರು ಯಾರು? ಎಂದು ಶ್ರೇಯಸ್ ಕೇಳಿದರು.
- Arun Belly
- Updated on: Jan 3, 2025
- 5:47 pm
ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಹೆಚ್ಡಿ ಕುಮಾರಸ್ವಾಮಿ ಗುಡ್ ನ್ಯೂಸ್
ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯ ದೇವೇಶ್ವರ ದೇಗುಲಕ್ಕೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಭೇಟಿ ನೀಡಿದರು. ಸಹೋದರ ಹೆಚ್ಡಿ ರೇವಣ್ಣ, ಶಾಸಕ ಸ್ವರೂಪ್ ಪ್ರಕಾಶ್ ಜೊತೆ ಆಗಮಿಸಿ ಪೂಜೆ ಸಲ್ಲಿಸಿದ ಅವರು, ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಪುನಶ್ಚೇತನದ ಬಗ್ಗೆಯೂ ಮಾತನಾಡಿದ್ದಾರೆ. ವಿವರಗಳು ವಿಡಿಯೋದಲ್ಲಿವೆ.
- Manjunath KB
- Updated on: Dec 23, 2024
- 2:52 pm
ಸೋಲು-ಗೆಲುವು ರಾಜಕೀಯ ಪಕ್ಷವೊಂದರ ಅಸ್ತಿತ್ವವನ್ನು ನಿರ್ಧರಿಸುವುದಿಲ್ಲ: ಹೆಚ್ ಡಿ ದೇವೇಗೌಡ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜನ ನೀಡಿರುವ ತೀರ್ಮನ್ನು ಸಮಾಧಾನಚಿತ್ತದಿಂದ ಸ್ವೀಕರಿಸಿದ್ದೇನೆ, ಅವರ ತೀರ್ಪಿನ ಬಗ್ಗೆ ತಾನ್ಯಾವತ್ತೂ ಲಘುವಾಗಿ ಮಾತಾಡಿಲ್ಲ, ಈ ಬಾರಿ ಸೋಲಿಸಿದ ಜನರೇ ತಮ್ನನ್ನು ಮುಂದಿನ ಬಾರಿ ಗೆಲ್ಲಿಸುತ್ತಾರೆ, ತನ್ನ ವೈಯಕ್ತಿಕ ರಾಜಕೀಯ ಅನುಭವದಿಂದ ಕಂಡುಕೊಂಡಿರುವ ಸತ್ಯವಿದು ಎಂದು ದೇವೇಗೌಡ ಹೇಳಿದರು.
- Arun Belly
- Updated on: Dec 7, 2024
- 3:40 pm
ಹಾಸನದ ಎಲ್ಲ ಅಸೆಂಬ್ಲಿ ಸ್ಥಾನಗಳನ್ನು ಗೆಲ್ಲುತ್ತೇನೆ ಅಂತ ಸಿದ್ದರಾಮಯ್ಯ ಹೇಳಿದ್ದು ಕಾರ್ಯಕರ್ತರನ್ನು ಹುರಿದುಂಬಿಸಲು: ಬಾಲಕೃಷ್ಣ
ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿಯವರು ಮುಚ್ಚಿಹೋಗಿರುವ ಮತ್ತು ರೋಗಗ್ರಸ್ತ ಅನೇಕ ಕಾರ್ಖಾನೆಗಳಿಗೆ ಜೀವ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ, ಎರಡು ಬಾರಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅವರು ರೈತರ ಪರ ಮತ್ತು ಜನಪರ ಕಾರ್ಯಕ್ರಮಗಳನ್ನು ನೀಡಿದರು ಎಂದು ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಹೇಳಿದರು.
- Arun Belly
- Updated on: Dec 6, 2024
- 5:23 pm
ಸಿಡಿ ಬಿಡುಗಡೆ ಮಾಡಿ ಬದುಕನ್ನು ಹಾಳು ಮಾಡಿದವರು ಒಬ್ಬ ಮಹಿಳೆಗಾದರೂ ಸಾಂತ್ವನ ಹೇಳಿದರೇ? ಕುಮಾರಸ್ವಾಮಿ
ನಾಳೆ ಹಾಸನದಲ್ಲಿ ಕಾಂಗ್ರೆಸ್ ನಡೆಸುವ ಜನಕಲ್ಯಾಣ ಸಮಾವೇಶವನ್ನು ಲೇವಡಿ ಮಾಡಿದ ಕುಮಾರಸ್ವಾಮಿ, ಸಿಡಿಗಳನ್ನು ಬಿಡುಗಡೆ ಮಾಡಿ ಹೆಣ್ಣುಮಕ್ಕಳ ಬದುಕನ್ನು ಬೀದಿಗೆ ತಂದು ಅವರಿಗೆ ಒಂದೇ ಒಂದು ಸಾಂತ್ವನ ಹೇಳದ ಸರ್ಕಾರ ಅದ್ಯಾವ ನೈತಿಕತೆಯಿಂದ ಸಮಾವೇಶ ನಡೆಸುತ್ತದೆ? ಈ ಸರ್ಕಾರದ ಪ್ರತಿನಿಧಿಗಳು ಮುಂದೆ ಉತ್ತರ ನೀಡಬೇಕಾದ ಸಮಯ ಬರಲಿದೆ ಎಂದು ಕುಮಾರಸ್ವಾಮಿ ಹೇಳಿದರು.
- Arun Belly
- Updated on: Dec 4, 2024
- 7:26 pm
ಜೆಡಿಎಸ್ ಪಕ್ಷವನ್ನೂ ಯಾರೇನೂ ಮಾಡಕ್ಕಾಗಲ್ಲ, ಜನಕಲ್ಯಾಣದಂಥ ಹಲವಾರು ಸಮಾವೇಶಗಳನ್ನು ನೋಡಿದ್ದೇನೆ: ಹೆಚ್ ಡಿ ರೇವಣ್ಣ
ದೆಹಲಿಗೆ ಬಂದಿರುವ ವಿಷಯವನ್ನು ಹೇಳಿದ ರೇವಣ್ಣ, ಹಾಸನ ರಿಂಗ್ ರೋಡ್ ಯೋಜನೆ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿತ್ತು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ದೇವೇಗೌಡ ಮತ್ತು ಕುಮಾರಸ್ವಾಮಿಯರೊಂದಿಗೆ ಭೇಟಿಯಾಗಿ ಹಣ ಮಂಜೂರು ಮಾಡಿಸಿಕೊಂಡಿದ್ದೇವೆ, ಜಿಲ್ಲೆಯಲ್ಲಿ 5 ರೇಲ್ವೇ ಯೋಜನೆಗಳ ಸಲುವಾಗಿ ರೇಲ್ವೇ ಸಚಿವರನ್ನು ಭೇಟಿಯಾಗಿದ್ದೇವೆ ಎಂದು ಹೇಳಿದರು.
- Arun Belly
- Updated on: Dec 4, 2024
- 12:18 pm