Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರು: ಕ್ರೇನ್​​ನಿಂದ ಕಳಜಿ ಬಿದ್ದ ಮೂಸಂಬಿ, ಸೇಬಿನ ಹಾರ; ಅಪಾಯದಿಂದ ಪಾರಾದ ಪರಮೇಶ್ವರ

ತುಮಕೂರು: ಕ್ರೇನ್​​ನಿಂದ ಕಳಜಿ ಬಿದ್ದ ಮೂಸಂಬಿ, ಸೇಬಿನ ಹಾರ; ಅಪಾಯದಿಂದ ಪಾರಾದ ಪರಮೇಶ್ವರ

ವಿವೇಕ ಬಿರಾದಾರ
|

Updated on: Mar 06, 2023 | 9:28 AM

ನಿನ್ನೆ (ಮಾ.5) ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಅವಘಡವೊಂದು ಸಂಭವಿಸಿದ್ದು, ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಅಪಾಯದಿಂದ ಪಾರಾಗಿದ್ದಾರೆ.

ತುಮಕೂರು: ನಿನ್ನೆ (ಮಾ.5) ಜಿಲ್ಲೆಯ ಕೊರಟಗೆರೆ (Kortgere) ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ (Prajadhwani) ಯಾತ್ರೆಯಲ್ಲಿ ಅವಘಡವೊಂದು ಸಂಭವಿಸಿದ್ದು, ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ (G Parameshwara) ಅಪಾಯದಿಂದ ಪಾರಾಗಿದ್ದಾರೆ. ಕೊರಟಗೆರೆ ಪಟ್ಟಣದ ಊರ್ಡಿಗೆರೆ ವೃತ್ತದ ಬಳಿ ಬಸ್​ ಯಾತ್ರೆ ಬಂದವೇಳೆ ಪರಮೇಶ್ವರ್ ಬಸ್​ ಮೇಲೆ ಹತ್ತಿ ಜನರತ್ತ ಕೈ ಬೀಸುತ್ತಿದ್ದರು. ಈ ವೇಳೆ ಪರಮೇಶ್ವರ ಅವರಿಗೆ ಹಾಕಲೆಂದು ಬೃಹತ್ತಾದ ಮೂಸಂಬಿ ಹಾಗೂ ಸೇಬಿನ ಹಾರ ಅಭಿಮಾನಿಗಳು ಕ್ರೇನ್ ಮೂಲಕ ಹಾಕಲು ಮುಂದಾಗಿದ್ದರು. ಇನ್ನೇನು ಹಾರವನ್ನು ಹಾಕಬೇಕು ಎನ್ನುವಷ್ಟರಲ್ಲಿ ಹಾರ ಕ್ರೇನ್​​ನಿಂದ ಜಾರಿ ಕೆಳಗೆ ಬಿದ್ದಿದೆ. ಈ ಮೂಲಕ ಪರಮೇಶ್ವರ ಅಪಾಯದಿಂದ ಪಾರಾಗಿದ್ದಾರೆ. ಇದನ್ನು ಕಂಡು ಮೂಸಂಬಿ ಹಾಗೂ ಸೇಬಿಗೆ ಜನರು ಮುಗಿಬಿದ್ದರು.