AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದಿನ ಸರ್ಕಾರಕ್ಕಿಂತ ಹೆಚ್ಚಿನ ಕಮೀಶನ್ ಡಿಮ್ಯಾಂಡ್ ಮಾಡಲಾಗುತ್ತಿದೆ: ಮಂಜುನಾಥ್, ಗುತ್ತಿಗೆದಾರರ ಸಂಘದ ಅಧ್ಯಕ್ಷ

ಹಿಂದಿನ ಸರ್ಕಾರಕ್ಕಿಂತ ಹೆಚ್ಚಿನ ಕಮೀಶನ್ ಡಿಮ್ಯಾಂಡ್ ಮಾಡಲಾಗುತ್ತಿದೆ: ಮಂಜುನಾಥ್, ಗುತ್ತಿಗೆದಾರರ ಸಂಘದ ಅಧ್ಯಕ್ಷ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 10, 2025 | 4:38 PM

ಸತೀಶ್ ಜಾರಕಿಹೊಳಿ ನಿಸ್ಸಂದೇಹವಾಗಿ ಪ್ರಾಮಾಣಿಕರು, ಆದರೆ ಲೋಕೋಪಯೋಗಿ ಇಲಾಖೆಯಲ್ಲೂ ಕಾಣದ ಕೈಗಳು ಕೆಲಸ ಮಾಡುತ್ತಿವೆ, ಗುತ್ತಿಗೆದಾರರ ಪೇಮೆಂಟ್​ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ, ಐಎಫ್​ಡಿ ಮತ್ತು ಓಎಸ್​ಡಿ ಮೂವರಿಗೆ ಸಂಬಂಧಿಸಿದ್ದಾಗಿರುತ್ತದೆ, ಆದರೆ ಫೋನ್ ಮಾಡಿದಾಗ ಮೂವರೂ ನಂಗೊತ್ತಿಲ್ಲ ಅನ್ನುತ್ತಾರೆ, ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಫೋನ್ ಮಾಡಿದರೆ ಅವರು ರಿಸೀವ್ ಮಾಡೋದಿಲ್ಲ, ಸಚಿವ ಬೋಸರಾಜು ಅವರು ಮಗ ನೇರವಾಗಿ ಡೀಲ್ ಮಾಡುತ್ತಿದ್ದಾನೆ ಎಂದು ಮಂಜುನಾಥ್ ಹೇಳುತ್ತಾರೆ.

ಚಿತ್ರದುರ್ಗ, ಏಪ್ರಿಲ್ 10: ರಾಜ್ಯದ ಗುತ್ತಿಗೆದಾರರಿಗೆ ಈ ಸರ್ಕಾರದಿಂದಲೂ ಪೇಮೆಂಟ್​​​ಗಳು ಆಗುತ್ತಿಲ್ಲ, ಕಾಂಟ್ರ್ಯಾಕ್ಟರ್ ಮತ್ತು ಇಲಾಖೆಗಳ ನಡುವೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಅರ್ ಮಂಜುನಾಥ್ ಹೇಳುತ್ತಾರೆ. ನಮ್ಮ ಚಿತ್ರದುರ್ಗದ ಪ್ರತಿನಿಧಿಯೊಂದಿಗೆ ಮಾತಾಡಿರುವ ಅವರು ಪಾರದರ್ಶಕತೆ ಕಾಯ್ದೆ ಪ್ರಕಾರ ಜೇಷ್ಠತೆ ಆಧಾರದ ಮೇಲೆ ಬಿಲ್​ಗಳ ಪಾವತಿ ಅಗಬೇಕು, ಆದರೆ ಸರ್ಕಾರ ಮಾಡುತ್ತಿಲ್ಲ, ರಾಜ್ಯದಲ್ಲಿ ಒಟ್ಟು ಒಂದೂವರೆ ಲಕ್ಷ ಜನ ಗುತ್ತಿಗೆದಾರರಿದ್ದಾರೆ ಮತ್ತು ಅವರಲ್ಲಿ ಶೇಕಡ 60ರಷ್ಟು ಜನ ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರು. ಇವರಿಗೆ ಪೇಮೆಂಟ್​ಗಳೇ ಆಗುತ್ತಿಲ್ಲ. ಕೇವಲ ಬಲಾಢ್ಯ ಗುತ್ತಿಗೆದಾರರಿಗೆ ಮಾತ್ರ ಪೇಮೆಂಟ್ ಆಗುತ್ತಿದೆ, ಮಿಕ್ಕವರು ಹೇಗೆ ಬದುಕಬೇಕು? ಎಂದು ಮಂಜುನಾಥ್ ಪ್ರಶ್ನಿಸುತ್ತಾರೆ.

ಇದನ್ನೂ ಓದಿ:   ಗುತ್ತಿಗೆದಾರರ ಸಮಾವೇಶದಲ್ಲಿ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ! ಕಾರಣ ಇದೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ