ಬೆಂಗಳೂರಲ್ಲಿ ನೀರಿನ ಬವಣೆ ತಪ್ಪಿಸಲು ಬಿಬಿಎಂಪಿ ಆಯುಕ್ತರೊಂದಿಗೆ ಮಾರ್ಗೋಪಾಯಗಳನ್ನು ಚರ್ಚಿಸಿದ ಸಂಸದ ತೇಜಸ್ವೀ ಸೂರ್ಯ

|

Updated on: Feb 24, 2024 | 7:09 PM

ನೀರಿನ ಹಾಹಾಕಾರ ಹೆಚ್ಚಿರುವ ನಗರದ ಏರಿಯಾಗಳಲ್ಲಿ ಅಂತರ್ಜಲ ಮಟ್ಟ ಉತ್ತಮವಾಗಿದ್ದರೆ ಪಾಲಿಕೆಯು ಬೋರ್ ವೆಲ್ ಗಳನ್ನು ಕೊರೆಸಬೇಕು ಮತ್ತು ತಳದಲ್ಲಿ ನೀರಿಲ್ಲದಿದ್ದರೆ ಪಾಲಿಕೆಯೇ ಟ್ಯಾಂಕರ್ ಗಳ ವೆಚ್ಚ ಭರಿಸಿ ನೀರು ಪೂರೈಸುವ ವ್ಯವಸ್ಥೆ ಮಾಡಲು ಕೋರಿದ್ದೇನೆ ಎಂದು ಸೂರ್ಯ ಹೇಳಿದರು.

ಬೆಂಗಳೂರು: ಬೇಸಿಗೆ ಈಗಷ್ಟೇ ಆರಂಭವಾಗಿದ್ದರೂ, ಬೆಂಗಳೂರು ನಗರದಲ್ಲಿ ನೀರಿನ ಹಾಹಾಕಾರ ಶುರುವಾಗಿದೆ ಮತ್ತು ಜನರ ನೀರಿನ ಬವಣೆ ತಪ್ಪಿಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದು ಅಂತ ಚರ್ಚಿಸಲು ಹಾಗೂ ಕೆಲ ಸಲಹೆಗಳನ್ನು ನೀಡಲು ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ (Tejasvi Surya) ಇಂದು ಪಾಲಿಕೆ ಕಮೀಶನರ್ ತುಷಾರ್ ಗಿರಿನಾಥ (Tushar Girinath) ಅವರನ್ನು ಭೇಟಿಯಾಗಿದ್ದರು. ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರನೊಂದಿಗೆ ಮಾತಾಡಿರುವ ಅವರು ಆಯಕ್ತರೊಂದಿಗೆ ಉಪಯುಕ್ತ ಮಾತುಕತೆ ನಡೆಯಿತು ಮತ್ತು ಒಂದಷ್ಟು ಸಲಹೆಗಳನ್ನು ನೀಡಿರುವೆನೆಂದರು. ನೀರಿನ ಹಾಹಾಕಾರ ಹೆಚ್ಚಿರುವ ನಗರದ ಏರಿಯಾಗಳಲ್ಲಿ ಅಂತರ್ಜಲ ಮಟ್ಟ ಉತ್ತಮವಾಗಿದ್ದರೆ ಪಾಲಿಕೆಯು ಬೋರ್ ವೆಲ್ ಗಳನ್ನು ಕೊರೆಸಬೇಕು ಮತ್ತು ತಳದಲ್ಲಿ ನೀರಿಲ್ಲದಿದ್ದರೆ ಪಾಲಿಕೆಯೇ ಟ್ಯಾಂಕರ್ ಗಳ ವೆಚ್ಚ ಭರಿಸಿ ನೀರು ಪೂರೈಸುವ ವ್ಯವಸ್ಥೆ ಮಾಡಲು ಕೋರಿದ್ದೇನೆ ಎಂದು ಸೂರ್ಯ ಹೇಳಿದರು. ದಕ್ಷಿಣ ಬೆಂಗಳೂರು ಭಾಗದಲ್ಲಿ ಟ್ಯಾಂಕರ್ ನೀರಿಗೆ 1,400 ವರೆಗೆ ಹಣ ಪೀಕಲಾಗುತ್ತಿದೆ ಎಂದ ಸೂರ್ಯ, ದೀರ್ಘಗಾಮಿ ಯೋಜನೆಯಾಗಿ ಕಾವೇರಿ ನೀರು ಪೂರೈಸುವ ಪೈಪ್ ಲೈನ್ ಗಳು ಹಾಳಾಗಿ ಅಥವಾ ಒಡೆದು ಬಹಳಷ್ಟು ನೀರು ಪೋಲಾಗುತ್ತಿದೆ ಅದನ್ನು ತಡೆಯುವ ಕೆಲಸವಾಗಬೇಕು ಎಂದು ಆಯಕ್ತರಿಗೆ ಹೇಳಿರುವುದಾಗಿ ತಿಳಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow us on