ನಟ ಸಲ್ಮಾನ್ ಖಾನ್​ಗೆ ಜೀವಬೆದರಿಕೆ ಸಂದೇಶ, ರಾಯಚೂರು ಯುವಕ ಮುಂಬೈ ಪೊಲೀಸ್ ವಶಕ್ಕೆ

ಅರುಣ್​ ಕುಮಾರ್​ ಬೆಳ್ಳಿ

Updated on: Nov 13, 2024 | 5:24 PM

ಸೊಹೇಲ್ ಪಾಶಾನ ತಾಯಿ ಹೇಳುವ ಪ್ರಕಾರ ಅವರಿಗಿರುವ ಇಬ್ಬರು ಮಕ್ಕಳಲ್ಲಿ ಸೊಹೇಲ್ ಹಿರಿಯ, ಕೇವಲ ಎಂಟನೇ ಕ್ಲಾಸ್​ವೆರೆಗೆ ಮಾತ್ರ ಓದಿರುವ ಅವನು ಸಲ್ಮಾನ್ ಖಾನ್ ಕಟ್ಟಾ ಅಭಿಮಾನಿ, ಕೇವಲ ಸಲ್ಮಾನ್ ಸಿನಿಮಾಗಳನ್ನು ನೋಡುವ ಅವನು ಜೀವಬೆದರಿಕೆಯ ಮೆಸೇಜ್ ಯಾಕೆ ಕಳಿಸಿಯಾನು? ಎಂದು ಆಕೆ ಕೇಳುತ್ತಾರೆ.

ರಾಯಚೂರು: ಎಲ್ಲಿಯ ಸಲ್ಮಾನ್ ಖಾನ್ ಎಲ್ಲಿ ಮಾನ್ವಿಯ ಸೊಹೇಲ್ ಪಾಶಾ? ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಜೀವಬೆದರಿಕೆಯೊಡ್ಡಿರುವ ಅರೋಪದಲ್ಲಿ ಮುಂಬೈ ಪೊಲೀಸರು ಜಿಲ್ಲೆಯ ಮಾನ್ವಿ ಪಟ್ಟಣದ ನಿವಾಸಿ ಸೊಹೇಲ್ ಪಾಶಾನನ್ನು ವಶಕ್ಕೆ ಪಡೆದು ತಮ್ಮೊಂದಿಗೆ ಕರೆದೊಯ್ದಿದ್ದಾರೆ. ರಾಯಚೂರು ಜಿಲ್ಲಾ ಪೊಲೀಸರ ನೆರವಿನಿಂದ ಸೊಹೇಲ್ ನನ್ನು ಬಂಧಿಸಲಾಗಿದೆ. ತನ್ನ ಮಗ ಗ್ಯಾರೇಜೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾನೆ, ಅವನು ಅಮಾಯಕ, ಪೊಲೀಸರು ಯಾಕೆ ಬಂಧಿಸಿದ್ದಾರೋ ಗೊತ್ತಿಲ್ಲವೆಂದು ಸೊಹೇಲ್ ತಾಯಿ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Salman Khan Death Threat: ‘ಏಪ್ರಿಲ್ 30ಕ್ಕೆ ಸಲ್ಮಾನ್ ಖಾನ್​ನ ಮುಗಿಸ್ತೀವಿ’; ಸಲ್ಲುಗೆ ಬಂತು ಮತ್ತೊಂದು ಬೆದರಿಕೆ ಕರೆ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.