Bollywood
ಭಾರತದ ಸಮೃದ್ಧ ಚಲನಚಿತ್ರೋದ್ಯಮಗಳಲ್ಲಿ ಬಾಲಿವುಡ್ ಕೂಡ ಒಂದು. ಈವರೆಗೆ ಹಲವು ಸೂಪರ್ ಹಿಟ್ ಚಿತ್ರಗಳು ಇಲ್ಲಿ ಸಿದ್ಧಗೊಳ್ಳುತ್ತವೆ. ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಆಗುತ್ತದೆ. 1930ರ ಸಂದರ್ಭದಲ್ಲಿ ಬಾಲಿವುಡ್ ಆರಂಭ ಆಯಿತು. ನಂತರ ಜಾಗತಿಕವಾಗಿ ಅತಿದೊಡ್ಡ ಮತ್ತು ಅತ್ಯಂತ ಪ್ರಭಾವಶಾಲಿ ಚಿತ್ರರಂಗವಾಗಿ ಬೆಳೆಯಿತು. ಬಾಲಿವುಡ್ನಲ್ಲಿ ಈವರೆಗೆ ಎಲ್ಲಾ ರೀತಿಯ ಸಿನಿಮಾಗಳು ಸಿದ್ಧಗೊಂಡಿವೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಐಶ್ವರ್ಯ ರೈ ಮತ್ತು ಅಮಿತಾಭ್ ಬಚ್ಚನ್ ಅವರಂತಹ ಅಪ್ರತಿಮ ನಟರು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಬಾಲಿವುಡ್ನಲ್ಲಿ ರೊಮ್ಯಾಂಟಿಕ್ ಡ್ರಾಮಾದಿಂದ ಹಿಡಿದು ಆ್ಯಕ್ಷನ್ ಪ್ಯಾಕ್ಡ್ ಬ್ಲಾಕ್ಬಸ್ಟರ್ಗಳವರೆಗೆ ವೈವಿಧ್ಯಮಯ ಶ್ರೇಣಿಯ ಚಲನಚಿತ್ರಗಳನ್ನು ನಿರ್ಮಾಣ ಮಾಡಲಾಗುತ್ತದೆ. ಬಾಲಿವುಡ್ನ ಪ್ರಭಾವವು ಮನರಂಜನೆಯನ್ನು ಮೀರಿ ವಿಸ್ತರಿಸಿದೆ.
ಈ ವಾರ ‘ಧುರಂಧರ್’, ‘ಅಖಂಡ 2’, ‘ಧರ್ಮಂ’ ಜೊತೆ ಇನ್ನಷ್ಟು ಸಿನಿಮಾ ರಿಲೀಸ್
ಈ ವಾರ ಬಾಕ್ಸ್ ಆಫೀಸ್ನಲ್ಲಿ ರಣವೀರ್ ಸಿಂಗ್, ಬಾಲಯ್ಯ, ಮಮ್ಮೂಟ್ಟಿ ಮುಂತಾದವರ ನಡುವೆ ಪೈಪೋಟಿ ಏರ್ಪಟ್ಟಿದೆ. ‘ಧುರಂಧರ್’, ‘ಅಖಂಡ 2’, ‘ಕಲಂಕಾವಲ್’, ‘ಧರ್ಮಂ’ ಮುಂತಾದ ಸಿನಿಮಾಗಳು ಡಿಸೆಂಬರ್ 5ಕ್ಕೆ ರಿಲೀಸ್ ಆಗುತ್ತಿವೆ. ಒಂದಲ್ಲ ಒಂದು ಕಾರಣದಿಂದ ಈ ಸಿನಿಮಾಗಳು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿವೆ. ಆ ಬಗ್ಗೆ ಇಲ್ಲಿದೆ ವಿವರ..
- Madan Kumar
- Updated on: Dec 4, 2025
- 9:20 pm
ಬೆಂಗಳೂರಲ್ಲಿ ಮಧ್ಯ ಬೆರಳು ತೋರಿಸಿದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್
ಇತ್ತೀಚೆಗೆ ಆರ್ಯನ್ ಖಾನ್ ಅವರು ಬೆಂಗಳೂರಿಗೆ ಬಂದಿದ್ದರು. ಆ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆರ್ಯನ್ ಖಾನ್ ಅವರು ಜನರ ಕಡೆಗೆ ಮಧ್ಯದ ಬೆರಳು ತೋರಿಸಿದ ವಿಡಿಯೋ ಈಗ ವೈರಲ್ ಆಗಿದೆ. ಸಾರ್ವಜನಿಕವಾಗಿ ಅಸಭ್ಯ ಸನ್ನೆ ಮಾಡಿದ ಅವರ ವಿರುದ್ಧ ಪೊಲೀಸರು ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
- Rachappaji Naik S
- Updated on: Dec 4, 2025
- 3:53 pm
ಸೀರಿಯಲ್ ಕಿಲ್ಲರ್ ಆದ ಮಾಧುರಿ ದೀಕ್ಷಿತ್; ಹೊಸ ಅವತಾರದಲ್ಲಿ ಧಕ್ ಧಕ್ ಗರ್ಲ್
ಮಾಧುರಿ ದೀಕ್ಷಿತ್ 'Mrs. ದೇಶಪಾಂಡೆ' ವೆಬ್ ಸರಣಿ ಮೂಲಕ ಸೀರಿಯಲ್ ಕಿಲ್ಲರ್ ಆಗಿ ಬರುತ್ತಿದ್ದಾರೆ. ಡಿಸೆಂಬರ್ 19ರಂದು ಜಿಯೋ ಹಾಟ್ಸ್ಟಾರ್ನಲ್ಲಿ ಪ್ರಸಾರವಾಗಲಿರುವ ಈ ಸಸ್ಪೆನ್ಸ್ ಥ್ರಿಲ್ಲರ್ನ ಟ್ರೈಲರ್ ಬಿಡುಗಡೆಯಾಗಿದೆ. ಹಗ್ಗದಿಂದ ಕೊಲೆ ಮಾಡುವ ಮಾಧುರಿ ಶೈಲಿಯನ್ನು ಹೊಸ ಕಿಲ್ಲರ್ ಅನುಕರಿಸುತ್ತಿದ್ದಾನೆ. ಆತನಿಗೆ ಮಾಧುರಿ ಸಹಾಯ ಮಾಡುತ್ತಾರಾ ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.
- Shreelaxmi H
- Updated on: Dec 4, 2025
- 2:13 pm
‘ಧುರಂಧರ್’ ರಿಲೀಸ್ಗೂ ಮೊದಲೇ ರಣವೀರ್ಗೆ ಬೆಂಗಳೂರಲ್ಲಿ ಎದುರಾಯ್ತು ದೊಡ್ಡ ಸಂಕಷ್ಟ
ನಟ ರಣವೀರ್ ಸಿಂಗ್, 'ದೈವ'ವನ್ನು 'ಹೆಣ್ಣು ದೆವ್ವ' ಎಂದು ಕರೆದು ವಿವಾದಕ್ಕೆ ಸಿಲುಕಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ವಕೀಲ ಪ್ರಶಾಂತ್ ಮೇತಲ್ ಅವರು ದೂರು ದಾಖಲಿಸಿ, ಎಫ್ಐಆರ್ ದಾಖಲಿಸಲು ಆಗ್ರಹಿಸಿದ್ದಾರೆ. ಕ್ಷಮೆ ಕೇಳಿದ್ದರೂ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅವರ ಹೊಸ ಸಿನಿಮಾ 'ಧುರಂಧರ್' ಬಿಡುಗಡೆಗೂ ಮುನ್ನವೇ ಈ ವಿವಾದ ಚಿತ್ರದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ.
- Shivaprasad B
- Updated on: Dec 4, 2025
- 8:20 am
‘ಧುರಂಧರ್’ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ ‘ಡಾನ್ 3’ ಸಿನಿಮಾ ಭವಿಷ್ಯ
ರಣವೀರ್ ಸಿಂಗ್ ಅವರ ಇತ್ತೀಚಿನ ಚಿತ್ರಗಳ ಸೋಲು 'ಡಾನ್ 3' ನಿರ್ಮಾಣವನ್ನು ವಿಳಂಬಗೊಳಿಸಿದೆ. ಶಾರುಖ್ ಖಾನ್ ಬದಲಿಗೆ ರಣವೀರ್ ಅವರನ್ನು ಆಯ್ಕೆ ಮಾಡಿದ್ದರೂ, ನಿರ್ದೇಶಕ ಫರ್ಹಾನ್ ಅಖ್ತರ್ 'ಧುರಂಧರ್' ಸಿನಿಮಾದ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ರಣವೀರ್ ಅವರ ಜನಪ್ರಿಯತೆ ಎಷ್ಟಿದೆ ಎಂಬುದನ್ನು 'ಧುರಂಧರ್' ಫಲಿತಾಂಶ ನಿರ್ಧರಿಸಲಿದೆ.
- Rajesh Duggumane
- Updated on: Dec 3, 2025
- 3:09 pm
‘ಧುರಂಧರ್’ ಬಗ್ಗೆ ನಿರ್ಮಾಪಕರಿಗೆ ಶುರುವಾಗಿದೆ ಭಯ; ಚಿತ್ರಕ್ಕೆ ಮೈನಸ್ ಆದ ರಣವೀರ್ ಸಿಂಗ್
ಆದಿತ್ಯ ಧಾರ್ ನಿರ್ದೇಶನದ 'ಧುರಂಧರ್' ಸಿನಿಮಾ ನಿರೀಕ್ಷೆ ಹುಸಿಗೊಳಿಸಿದೆ. ನಾಲ್ಕು ನಿಮಿಷದ ಟ್ರೇಲರ್ ಆಸಕ್ತಿ ಕೆರಳಿಸಿಲ್ಲ. ರಣವೀರ್ ಸಿಂಗ್ ಅವರ ಇತ್ತೀಚಿನ ವಿವಾದಗಳು ಹಾಗೂ ಸಾಲು ಸಾಲು ಸೋಲುಗಳು ಚಿತ್ರಕ್ಕೆ ಹಿನ್ನಡೆ ತರುತ್ತಿವೆ. ಪ್ರಚಾರದ ಕೊರತೆಯಿಂದ ದೊಡ್ಡ ಬಜೆಟ್ನ ಈ ಚಿತ್ರದ ಅಡ್ವಾನ್ಸ್ ಬುಕಿಂಗ್ ಚೇತರಿಸಿಕೊಂಡಿಲ್ಲ. ಡಿಸೆಂಬರ್ 5ಕ್ಕೆ ತೆರೆಗೆ ಬರುತ್ತಿರುವ ಚಿತ್ರಕ್ಕೆ ಬಾಕ್ಸ್ ಆಫೀಸ್ ಸವಾಲು ಎದುರಾಗಿದೆ.
- Rajesh Duggumane
- Updated on: Dec 2, 2025
- 8:42 am
ರಣವೀರ್ ಸಿಂಗ್ ಸಿನಿಮಾಗೆ ಸಂಕಷ್ಟ: ಬಿಡುಗಡೆಗೂ ಮುನ್ನ ವಿವಾದದಲ್ಲಿ ಸಿಲುಕಿದ ‘ಧುರಂಧರ್’
ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಬಹುನಿರೀಕ್ಷಿತ ‘ಧುರಂಧರ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಡಿಸೆಂಬರ್ 5ರಂದು ಬಿಡುಗಡೆ ಆಗಬೇಕಿರುವ ಈ ಸಿನಿಮಾದ ಮೇಲೆ ದೆಹಲಿ ಹೈಕೋರ್ಟ್ನಲ್ಲಿ ಕೇಸ್ ಹಾಕಲಾಗಿದೆ. ಈ ಸಿನಿಮಾಗೆ ಎದುರಾಗಿರುವ ಆಕ್ಷೇಪಗಳನ್ನು ಪರಿಶೀಲಿಸುವಂತೆ ಸೆನ್ಸಾರ್ ಮಂಡಳಿಗೆ ನ್ಯಾಯಾಲಯ ಸೂಚಿಸಿದೆ.
- Madan Kumar
- Updated on: Dec 1, 2025
- 7:38 pm
ಅವರು ಯಾರ ಮನೆ ಬೇಕಿದ್ದರೂ ಪ್ರವೇಶಿಸುವ ಇಲಿಗಳಂತೆ; ಜಯಾ ಬಚ್ಚನ್ ಕೋಪ ಯಾರ ಮೇಲೆ?
ಬಾಲಿವುಡ್ ಹಿರಿಯ ನಟಿ ಜಯಾ ಬಚ್ಚನ್ ಅವರು ಪಾಪರಾಜಿಗಳ ಬಗ್ಗೆ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಂಪ್ರದಾಯಿಕ ಮಾಧ್ಯಮ ಮತ್ತು ಪಾಪರಾಜಿಗಳನ್ನು ಪ್ರತ್ಯೇಕಿಸಿ ಮಾತನಾಡಿದ ಅವರು, ಪಾಪರಾಜಿಗಳನ್ನು 'ಇಲಿಗಳು' ಎಂದು ಕರೆದಿದ್ದಾರೆ. ಅವರಿಗೆ ಯಾವುದೇ ಗೌರವವಿಲ್ಲ ಎಂದು ಜಯಾ ಹೇಳಿದ್ದಾರೆ. ಯುವ ನಟರು ಪಾಪರಾಜಿಗಳಿಗೆ ಹಣ ನೀಡುತ್ತಾರೆ ಎಂಬ ವರದಿಯನ್ನು ಅವರು ತಳ್ಳಿಹಾಕಿದ್ದಾರೆ.
- Shreelaxmi H
- Updated on: Dec 1, 2025
- 12:52 pm
ದೈವ ಅವಮಾನಿಸಿದ ರಣವೀರ್ ಸಿಂಗ್ಗೆ ಕೌಂಟರ್ ಕೊಟ್ಟ ಅಮೇಜಾನ್ ಪ್ರೈಮ್ ವಿಡಿಯೋ
ನಟ ರಣವೀರ್ ಸಿಂಗ್ ಗೋವಾದಲ್ಲಿ ಕಾಂತಾರ ದೈವವನ್ನು 'ದೆವ್ವ' ಎಂದಿದ್ದು ವಿವಾದ ಸೃಷ್ಟಿಸಿದೆ. ರಿಷಬ್ ಶೆಟ್ಟಿಗೂ ಮುಜುಗರ ತಂದ ಈ ಘಟನೆ ಬಗ್ಗೆ ಚರ್ಚೆ ನಡೆಯುತ್ತಿದೆ. ಈಗ ಅಮೇಜಾನ್ ಪ್ರೈಮ್ ವಿಡಿಯೋ, ರಣವೀರ್ ಹೇಳಿದ್ದ ದೃಶ್ಯವನ್ನೇ ಹಂಚಿಕೊಂಡು ಕೌಂಟರ್ ನೀಡಿದೆ ಎಂದು ಹಲವರು ಭಾವಿಸಿದ್ದಾರೆ. ಕಾಂತಾರ 'ದೈವ'ದ ಬಗ್ಗೆ ರಣವೀರ್ ತಿಳುವಳಿಕೆ ಕೊರತೆಗೆ ಟೀಕೆ ವ್ಯಕ್ತವಾಗಿದೆ.
- Rajesh Duggumane
- Updated on: Dec 1, 2025
- 7:04 am
ನಟ ಧನುಷ್ ಜೊತೆ ಮೃಣಾಲ್ ಠಾಕೂರ್ ಡೇಟಿಂಗ್? ಹೆಚ್ಚಾಗಿದೆ ಅನುಮಾನ
ಖ್ಯಾತ ನಟಿ ಮೃಣಾಲ್ ಠಾಕೂರ್ ಅವರು ಧನುಷ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಇದೆ. ಇಬ್ಬರ ನಡುವೆ ಆಪ್ತತೆ ಬೆಳೆದಿದೆ. ಒಂದೆರಡು ಬಾರಿ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದು ಕೂಡ ಇದೆ. ಧನುಷ್ ಅವರಿಗೆ 42 ವರ್ಷ ವಯಸ್ಸು. ಮೃಣಾಲ್ ಅವರಿಗೆ 33ರ ಪ್ರಾಯ. ಡೇಟಿಂಗ್ ಬಗ್ಗೆ ಇಲ್ಲಿದೆ ಮಾಹಿತಿ.
- Madan Kumar
- Updated on: Nov 28, 2025
- 5:47 pm