Bollywood
ಭಾರತದ ಸಮೃದ್ಧ ಚಲನಚಿತ್ರೋದ್ಯಮಗಳಲ್ಲಿ ಬಾಲಿವುಡ್ ಕೂಡ ಒಂದು. ಈವರೆಗೆ ಹಲವು ಸೂಪರ್ ಹಿಟ್ ಚಿತ್ರಗಳು ಇಲ್ಲಿ ಸಿದ್ಧಗೊಳ್ಳುತ್ತವೆ. ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಆಗುತ್ತದೆ. 1930ರ ಸಂದರ್ಭದಲ್ಲಿ ಬಾಲಿವುಡ್ ಆರಂಭ ಆಯಿತು. ನಂತರ ಜಾಗತಿಕವಾಗಿ ಅತಿದೊಡ್ಡ ಮತ್ತು ಅತ್ಯಂತ ಪ್ರಭಾವಶಾಲಿ ಚಿತ್ರರಂಗವಾಗಿ ಬೆಳೆಯಿತು. ಬಾಲಿವುಡ್ನಲ್ಲಿ ಈವರೆಗೆ ಎಲ್ಲಾ ರೀತಿಯ ಸಿನಿಮಾಗಳು ಸಿದ್ಧಗೊಂಡಿವೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಐಶ್ವರ್ಯ ರೈ ಮತ್ತು ಅಮಿತಾಭ್ ಬಚ್ಚನ್ ಅವರಂತಹ ಅಪ್ರತಿಮ ನಟರು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಬಾಲಿವುಡ್ನಲ್ಲಿ ರೊಮ್ಯಾಂಟಿಕ್ ಡ್ರಾಮಾದಿಂದ ಹಿಡಿದು ಆ್ಯಕ್ಷನ್ ಪ್ಯಾಕ್ಡ್ ಬ್ಲಾಕ್ಬಸ್ಟರ್ಗಳವರೆಗೆ ವೈವಿಧ್ಯಮಯ ಶ್ರೇಣಿಯ ಚಲನಚಿತ್ರಗಳನ್ನು ನಿರ್ಮಾಣ ಮಾಡಲಾಗುತ್ತದೆ. ಬಾಲಿವುಡ್ನ ಪ್ರಭಾವವು ಮನರಂಜನೆಯನ್ನು ಮೀರಿ ವಿಸ್ತರಿಸಿದೆ.
ಇನ್ನೂ ಹೆಚ್ಚು ಓದಿಪಾನ್ ಮಸಾಲ ವಿವಾದ: ಶಾರುಖ್, ಅಜಯ್ ದೇವಗನ್, ಟೈಗರ್ ಶ್ರಾಫ್ಗೆ ದೆಹಲಿ ಹೈಕೋರ್ಟ್ನಿಂದ ಇಲ್ಲ ರಿಲೀಫ್
ವಿಮಲ್ ಪಾನ್ ಮಸಾಲದ ಪರೋಕ್ಷ ಪ್ರಚಾರ ಆರೋಪದಡಿ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ಗೆ ಮಹಾರಾಷ್ಟ್ರ ಎಫ್ಡಿಎ ನೀಡಿದ್ದ ಶೋಕಾಸ್ ನೋಟಿಸ್ ಸವಾಲು ಮಾಡಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಾಂಗ ವ್ಯಾಪ್ತಿಯ ಕಾರಣ ನೀಡಿ ಅರ್ಜಿಯನ್ನು ತಳ್ಳಿಹಾಕಿದ್ದು, ನಟರಿಗೆ ಯಾವುದೇ ರಿಲೀಫ್ ಸಿಕ್ಕಿಲ್ಲ.
- Shreelaxmi H
- Updated on: Sep 15, 2026
- 11:00 am
‘ಪೌರಕಾರ್ಮಿಕನ ಕೆಲಸವೂ ನಿಮಗ ಸಿಗಲ್ಲ’: ನಟಿ ರಾಖಿ ಸಾವಂತ್ ಕಾಲೆಳೆದ ಕಂಗನಾ ರಣಾವತ್
ನಟಿ ಹಾಗೂ ಸಂಸದೆ ಕಂಗನಾ ರಣಾವತ್, ತಮಗೆ ನಿಂದಿಸಿದ ರಾಖಿ ಸಾವಂತ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಪೌರಕಾರ್ಮಿಕನ ಕೆಲಸಕ್ಕೂ ಅರ್ಹತೆ ಬೇಕು, ಸೋತ ಜನರು ಯಶಸ್ವಿ ಮಹಿಳೆಯರ ನಿಂದನೆ ಮಾಡುತ್ತಾರೆ ಎಂದಿರುವ ಕಂಗನಾ, ತಮ್ಮ ಯಶಸ್ಸು ಕಾಣದವರ ಮಾತು ಕೇಳಲ್ಲ ಎಂದು ಖಡಕ್ ಉತ್ತರ ನೀಡಿದ್ದಾರೆ.
- Shreelaxmi H
- Updated on: Sep 15, 2026
- 9:17 am
‘ಹನುಮಾನ್ ಅಂಶ್’ ಯಶಸ್ಸು: ತುಳಸಿದಾಸರ ಬಯೋಪಿಕ್ ಘೋಷಿಸಿದ ನಿರ್ದೇಶಕ ವಿಶಾಲ್ ಚತುರ್ವೇದಿ
ಕೇವಲ 2 ಕೋಟಿ ಬಜೆಟ್ನ ‘ಹನುಮಾನ್ ಅಂಶ’ ಸಿನಿಮಾ ಬರೋಬ್ಬರಿ 268 ಕೋಟಿ ರೂಪಾಯಿ ಗಳಿಸಿ ಶ್ರೇಷ್ಠ ದಾಖಲೆ ಬರೆದಿದೆ. ಈ ಭಾರಿ ಯಶಸ್ಸಿನ ಬೆನ್ನಲ್ಲೇ ನಿರ್ದೇಶಕ ವಿಶಾಲ್ ಚತುರ್ವೇದಿ ಸಂತ ತುಳಸಿದಾಸರ ಜೀವನ ಆಧಾರಿತ 'ರಾಮ್ಬೋಲ' ಹೊಸ ಚಿತ್ರವನ್ನು ಘೋಷಿಸಿದ್ದಾರೆ. ಈ ಸುದ್ದಿ ಈಗ ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿದೆ.
- Rajesh Duggumane
- Updated on: Sep 15, 2026
- 7:47 am
200 ಕೋಟಿ ರೂ. ಗಳಿಸಿದ ‘ಹನುಮಾನ್ ಅಂಶ್’ ಸಿನಿಮಾಗೆ 21ರ ಪ್ರಾಯದ ನಿರ್ಮಾಪಕಿ
ಸ್ವಯಂಭೂ ಮೀಡಿಯಾ ನೆಟ್ವರ್ಕ್ ಪ್ರೈವೇಟ್ ಲಿಮಿಟೆಡ್, ರಾಗಿಣಿ ಎಸ್., ನಮ್ರತಾ ಜಿ.ಎಸ್. ಮತ್ತು ಅನುಪ್ರಿಯಾ ಎ. ನಾಗರ್ ಅವರು ಒಟ್ಟಾಗಿ ‘ಹನುಮಾನ್ ಅಂಶ್’ ಚಿತ್ರವನ್ನು ನಿರ್ಮಿಸಿದ್ದಾರೆ. ಬರೋಬ್ಬರಿ 200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದ ಈ ಸಿನಿಮಾ ಕುರಿತು ಕಿರಿಯ ನಿರ್ಮಾಪಕಿ ಅನುಪ್ರಿಯಾ ನಾಗರ್ ಮಾತಾಡಿದ್ದಾರೆ.
- Madan Kumar
- Updated on: Sep 14, 2026
- 3:29 pm
ಹೀನಾಯವಾಗಿ ಸೋತ ಅಕ್ಷಯ್ ಕುಮಾರ್, ಸೈಫ್ ಅಲಿ ಖಾನ್ ಸಿನಿಮಾ ‘ಹೈವಾನ್’
ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ಅವರಂತಹ ಸ್ಟಾರ್ ಹೀರೋಗಳು ನಟಿಸಿದ್ದರೂ ಕೂಡ ‘ಹೈವಾನ್’ ಸಿನಿಮಾ ಎರಡು ದಿನಗಳಲ್ಲಿ ಪ್ರಪಂಚದಾದ್ಯಂತ ಕೇವಲ 8.60 ಕೋಟಿ ರೂಪಾಯಿ ಮಾತ್ರ ಗಳಿಸಿದೆ. ಈ ಸೋಲಿನಿಂದ ಅಭಿಮಾನಿಗಳಿಗೆ ಬೇಸರ ಆಗಿದೆ. ಚಿತ್ರದ ಕಲೆಕ್ಷನ್ ಬಗ್ಗೆ ಇಲ್ಲಿದೆ ವಿವರ..
- Madan Kumar
- Updated on: Sep 14, 2026
- 12:02 pm
ನಟಿ ಅಮೀಷಾ ಪಟೇಲ್ ಪೋಷಕರ ಮನೆಯಲ್ಲಿ 5 ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನ
ಖ್ಯಾತ ನಟಿ ಅಮೀಷಾ ಪಟೇಲ್ ಪೋಷಕರ ಮನೆಯಲ್ಲಿ ಆದ ಕಳ್ಳತನಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಚಿನ್ನದ ಬಳೆ ಕದ್ದ ಆರೋಪದ ಮೇಲೆ 40ರ ಪ್ರಾಯದ ಮಹಿಳೆಯನ್ನು ಬಂಧಿಸಲಾಗಿದೆ. ಕಳ್ಳತನ ಮತ್ತು ಬಂಧನದ ಬಗ್ಗೆ ನಟಿಯ ಮ್ಯಾನೇಜರ್ ಕಡೆಯಿಂದ ಪ್ರತಿಕ್ರಿಯೆ ಸಿಕ್ಕಿದೆ.
- Madan Kumar
- Updated on: Sep 14, 2026
- 10:10 am
‘ಹನುಮಾನ್ ಅಂಶ್’ ಸಿನಿಮಾಗೆ 100 ಕೋಟಿ ರೂ. ಒಟಿಟಿ ಆಫರ್ ಬಂದಿದ್ದು ನಿಜವೇ? ಇಲ್ಲಿದೆ ಸ್ಪಷ್ಟನೆ
ಕೇವಲ 2 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣಗೊಂಡಿರುವ ‘ಹನುಮಾನ್ ಅಂಶ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 230 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಈ ನಡುವೆ ಚಿತ್ರದ ಒಟಿಟಿ ವ್ಯವಹಾರದ ಬಗ್ಗೆ ಇಂಟರೆಸ್ಟಿಂಗ್ ವಿಷಯ ಕೇಳಿಬಂದಿದೆ. ಆ ಬಗ್ಗೆ ನಿರ್ಮಾಪಕಿ ರಾಗಿಣಿ ಸೋನಾ ಪ್ರತಿಕ್ರಿಯಿಸಿದ್ದಾರೆ.
- Madan Kumar
- Updated on: Sep 14, 2026
- 7:16 am
ಆಸ್ಕರ್ ರೇಸ್ನಿಂದ ‘ಹನುಮಾನ್ ಅಂಶ್’ ಹೊರಗೆ: ಅವಕಾಶ ತಪ್ಪಿದ್ದಕ್ಕೆ ಕಾರಣ ತಿಳಿಸಿದ ನಿರ್ಮಾಪಕಿ
ನೀಮ್ ಕರೋಲಿ ಬಾಬಾ ಅವರ ಜೀವನ ಆಧಾರಿತ ‘ಹನುಮಾನ್ ಅಂಶ್’ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗೆಲುವು ಸಾಧಿಸಿದೆ. 205 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿರುವ ಈ ಚಿತ್ರಕ್ಕೆ ಆಸ್ಕರ್ ಕಣದಲ್ಲಿ ಸ್ಪರ್ಧಿಸುವ ಅವಕಾಶ ತಪ್ಪಿಹೋಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
- Madan Kumar
- Updated on: Sep 13, 2026
- 3:09 pm
ನಟಿಯರ ತೀವ್ರ ಜಗಳ: ಪೊಲೀಸರು ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್
‘ಸಿನಿಮಾ ಮತ್ತು ಟಿವಿ ಕಲಾವಿದರ ಸಂಘ’ದ ಜಗಳ ಬೀದಿಗೆ ಬಂದಿದೆ. ಪೊಲೀಸರ ಸಮ್ಮುಖದಲ್ಲೇ ನಟಿಯರು ಪರಸ್ಪರ ಜಗಳ ಮಾಡಿಕೊಂಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ನಟಿಯರ ಈ ವರ್ತನೆ ಕಂಡು ಪೊಲೀಸರು ಗರಂ ಆಗಿದ್ದಾರೆ. ಜಗಳ ಮಾಡಿದ ನಟಿಯರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
- Madan Kumar
- Updated on: Sep 13, 2026
- 7:28 am
ಒಂದಂಕಿ ಗಳಿಸಿದ ‘ಹೈವಾನ್’ ಸಿನಿಮಾ; ಅಕ್ಷಯ್ ಕುಮಾರ್ಗೆ ಮತ್ತೊಂದು ಸೋಲು?
ಅಕ್ಷಯ್ ಕುಮಾರ್ ಹಾಗೂ ಸೈಫ್ ಅಲಿ ಖಾನ್ ನಟನೆಯ ‘ಹೈವಾನ್’ ಸಿನಿಮಾ ಮೊದಲ ದಿನ ಪ್ರಪಂಚದಾದ್ಯಂತ ಕೇವಲ 4.60 ಕೋಟಿ ರೂಪಾಯಿ ಗಳಿಸಿ ನಿರಾಸೆ ಮೂಡಿಸಿದೆ. ಕೆವಿಎನ್ ಸಂಸ್ಥೆ ನಿರ್ಮಿಸಿದ ಈ ಚಿತ್ರ ಸಾಲು ಸಾಲು ಸೋಲು ಕಾಣುತ್ತಿರುವ ಅಕ್ಷಯ್ ಅವರಿಗೆ ಮತ್ತೊಂದು ಹಿನ್ನಡೆಯ ಸೂಚನೆ ನೀಡಿದ್ದು, ಬಾಕ್ಸ್ ಆಫೀಸ್ನಲ್ಲಿ ಕಳಪೆ ಆರಂಭ ಪಡೆದಿದೆ.
- Rajesh Duggumane
- Updated on: Sep 12, 2026
- 7:39 am
7 ಭಾಗಗಳಲ್ಲಿ ಬರಲಿದೆ ‘ಶ್ರೀಮದ್ಭಾಗವತಂ’: ಸಾಗರ್ ಪಿಕ್ಚರ್ಸ್ನಿಂದ ಬೃಹತ್ ಪೌರಾಣಿಕ ಸಿನಿಮಾ
ಪೌರಾಣಿಕ ಕಥಾಹಂದರದ ಸಿನಿಮಾಗಳ ಬಗ್ಗೆ ಪ್ರೇಕ್ಷಕರ ಆಸಕ್ತಿ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ‘ಸಾಗರ್ ಪಿಕ್ಚರ್ಸ್ ಎಂಟರ್ಟೈನ್ಮೆಂಟ್’ ಸಂಸ್ಥೆಯ ಕಡೆಯಿಂದ 7 ಭಾಗಗಳ ಬೃಹತ್ ಸಿನಿಮಾ ಘೋಷಣೆ ಆಗಿದೆ. ಆಕಾಶ್ ಸಾಗರ್ ಚೋಪ್ರಾ ಮತ್ತು ಅಮೃತ್ ಸಾಗರ್ ಅವರು ಇದರ ನೇತೃತ್ವ ವಹಿಸಿದ್ದಾರೆ. ಜಾಗತಿಕ ಮಟ್ಟದ ತಾಂತ್ರಿಕ ಪರಿಣತರ ತಂಡವು ಈ ಚಿತ್ರಕ್ಕಾಗಿ ಕೆಲಸ ಮಾಡಲಿದೆ.
- Madan Kumar
- Updated on: Sep 11, 2026
- 9:45 pm
ಬಾದ್ಶಾ ಮೋಸ ಮಾಡಿದ್ದರ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಮಾತಾಡಿದ ಇಶಾ ರಿಖಿ
ಬಾದ್ಶಾ ಹಾಗೂ ಇಶಾ ರಿಖಿ ವಿಚ್ಛೇದನದ ಬೆನ್ನಲ್ಲೇ, ‘ಬಿಗ್ ಬಾಸ್ 20’ ಸ್ಪರ್ಧಿಯಾಗಿರುವ ಇಶಾ ಅವರು ಶೋನಲ್ಲಿ ಆಡಿರುವ ಮಾತುಗಳು ಭಾರಿ ಚರ್ಚೆಗೆ ಗ್ರಾಸವಾಗಿವೆ. ತಾವು ಜೀವನದಲ್ಲಿ ಪ್ಲೇಬಾಯ್ ರೀತಿಯ ದೊಡ್ಡ ರೆಡ್ ಫ್ಲ್ಯಾಗ್ ವ್ಯಕ್ತಿಯನ್ನು ನೋಡಿರುವುದಾಗಿ ಅವರು ಹೇಳಿದ್ದಾರೆ. ಇದು ಬಾದ್ಶಾ ಬಗ್ಗೆಯೇ ಹೇಳಿದ್ದು ಎಂದು ಜನರು ಊಹಿಸುತ್ತಿದ್ದಾರೆ.
- Madan Kumar
- Updated on: Sep 11, 2026
- 7:15 pm