AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bollywood

Bollywood

ಭಾರತದ ಸಮೃದ್ಧ ಚಲನಚಿತ್ರೋದ್ಯಮಗಳಲ್ಲಿ ಬಾಲಿವುಡ್ ಕೂಡ ಒಂದು. ಈವರೆಗೆ ಹಲವು ಸೂಪರ್ ಹಿಟ್ ಚಿತ್ರಗಳು ಇಲ್ಲಿ ಸಿದ್ಧಗೊಳ್ಳುತ್ತವೆ. ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಆಗುತ್ತದೆ. 1930ರ ಸಂದರ್ಭದಲ್ಲಿ ಬಾಲಿವುಡ್ ಆರಂಭ ಆಯಿತು. ನಂತರ ಜಾಗತಿಕವಾಗಿ ಅತಿದೊಡ್ಡ ಮತ್ತು ಅತ್ಯಂತ ಪ್ರಭಾವಶಾಲಿ ಚಿತ್ರರಂಗವಾಗಿ ಬೆಳೆಯಿತು. ಬಾಲಿವುಡ್ನಲ್ಲಿ ಈವರೆಗೆ ಎಲ್ಲಾ ರೀತಿಯ ಸಿನಿಮಾಗಳು ಸಿದ್ಧಗೊಂಡಿವೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಐಶ್ವರ್ಯ ರೈ ಮತ್ತು ಅಮಿತಾಭ್ ಬಚ್ಚನ್ ಅವರಂತಹ ಅಪ್ರತಿಮ ನಟರು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಬಾಲಿವುಡ್ನಲ್ಲಿ ರೊಮ್ಯಾಂಟಿಕ್ ಡ್ರಾಮಾದಿಂದ ಹಿಡಿದು ಆ್ಯಕ್ಷನ್ ಪ್ಯಾಕ್ಡ್ ಬ್ಲಾಕ್‌ಬಸ್ಟರ್‌ಗಳವರೆಗೆ ವೈವಿಧ್ಯಮಯ ಶ್ರೇಣಿಯ ಚಲನಚಿತ್ರಗಳನ್ನು ನಿರ್ಮಾಣ ಮಾಡಲಾಗುತ್ತದೆ. ಬಾಲಿವುಡ್‌ನ ಪ್ರಭಾವವು ಮನರಂಜನೆಯನ್ನು ಮೀರಿ ವಿಸ್ತರಿಸಿದೆ.

ಇನ್ನೂ ಹೆಚ್ಚು ಓದಿ

ಕೇವಲ 1 ರೂಪಾಯಿ ಸಂಭಾವನೆ ಪಡೆದು ಹೆಚ್​ಐವಿ ಪೀಡಿತನ ಪಾತ್ರ ಮಾಡಿದ್ದ ಸಲ್ಮಾನ್ ಖಾನ್

ಹೆಚ್​ಐವಿ ಪೀಡಿತ ಯುವಕನ ಪಾತ್ರ ಮಾಡಲು ಬೇರೆ ಯಾವುದೇ ಹೀರೋಗಳು ಕೂಡ ಒಪ್ಪಿಕೊಂಡಿರಲಿಲ್ಲ. ಸಲ್ಮಾನ್ ಖಾನ್ ಅವರು ಆ ಬೋಲ್ಡ್ ನಿರ್ಧಾರ ಮಾಡಿದ್ದರು. ಅದು ಸಮಾಜಕ್ಕೆ ಸಂದೇಶ ನೀಡುವ ಸಲುವಾಗಿ. ಕೇವಲ ಒಂದು ರೂಪಾಯಿ ಸಂಭಾವನೆ ಪಡೆದು ‘ಫಿರ್ ಮಿಲೇಂಗೆ’ ಸಿನಿಮಾದಲ್ಲಿ ಅವರು ನಟಿಸಿದ್ದರು.

ಅಕ್ಷಯ್ ಖನ್ನಾ ಬದಲಿಗೆ ‘ಪಾತಾಳ್ ಲೋಕ್’ ನಟನಿಗೆ ‘ದೃಶ್ಯಂ 3’ ಅವಕಾಶ

‘ಪಾತಾಳ್ ಲೋಕ್’ ವೆಬ್ ಸರಣಿಯಲ್ಲಿ ನಟಿಸಿದ್ದ ಜೈದೀಪ್ ಅಹಲಾವತ್ ಅವರಿಗೆ ‘ದೃಶ್ಯಂ 3’ ಚಿತ್ರದ ಅವಕಾಶ ಸಿಕ್ಕಿದೆ. ಅಕ್ಷಯ್ ಖನ್ನಾ ಮಾಡಬೇಕಿದ್ದ ಪಾತ್ರವನ್ನು ಈಗ ಜೈದೀಪ್ ಮಾಡಲಿದ್ದಾರೆ. ನಿರ್ಮಾಪಕರು ಇದನ್ನು ಖಚಿತಪಡಿಸಿದ್ದಾರೆ. ಅಕ್ಷಯ್​ ಖನ್ನಾಗಿಂತಲೂ ಜೈದೀಪ್ ಅವರು ಉತ್ತಮ ನಟ ಮತ್ತು ಉತ್ತಮ ವ್ಯಕ್ತಿ ಎಂದು ನಿರ್ಮಾಪಕರು ಹೇಳಿದ್ದಾರೆ.

‘ಧುರಂಧರ್’ ತಡೆಯೋರು ಯಾರೂ ಇಲ್ಲ: ಸಾವಿರ ಕೋಟಿ ರೂ. ದಾಟಿದರೂ ನಿಂತಿಲ್ಲ ಹವಾ

ವೀಕೆಂಡ್ ಹಾಗೂ ನ್ಯೂ ಇಯರ್ ಸಂಭ್ರಮದಲ್ಲಿ ‘ಧುರಂಧರ್’ ಸಿನಿಮಾದ ಕಲೆಕ್ಷನ್ ಇನ್ನಷ್ಟು ಹೆಚ್ಚಾಗಲಿದೆ. ವಿಶ್ವಾದ್ಯಂತ 1024 ಕೋಟಿ ರೂಪಾಯಿ ಗಳಿಸಿ ಈ ಚಿತ್ರ ಮುನ್ನುತ್ತಿದೆ. ಟೋಟಲ್ ಕಲೆಕ್ಷನ್ ಏರಿಕೆ ಆಗುತ್ತಲೇ ಇದೆ. ರಣವೀರ್ ಸಿಂಗ್ ಅವರು ‘ಧುರಂಧರ್’ ಸಿನಿಮಾದಿಂದ ಭರ್ಜರಿ ಗೆಲುವು ಕಂಡಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ..

‘ಅಕ್ಷಯ್ ಖನ್ನಾಗೆ ಯಶಸ್ಸು ತಲೆಗೇರಿದೆ’; ದೊಡ್ಡ ನಿರ್ಧಾರ ತೆಗೆದುಕೊಂಡ ನಿರ್ಮಾಪಕ

ಸಂಭಾವನೆ ವಿವಾದ ಮತ್ತು ವಿಗ್ ಹಠದಿಂದ ಅಕ್ಷಯ್ ಖನ್ನಾ 'ದೃಶ್ಯಂ 3' ಚಿತ್ರದಿಂದ ಹೊರನಡೆದಿದ್ದಾರೆ. ನಿರ್ಮಾಪಕ ಕುಮಾರ್ ಮಂಗತ್, ಅಕ್ಷಯ್ ಅವರ ವೃತ್ತಿಪರತೆ ಇಲ್ಲದ ನಡವಳಿಕೆ ಮತ್ತು ಯಶಸ್ಸು ತಲೆಗೇರಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬದಲಾವಣೆಯಿಂದಾಗಿ, ನಿರ್ಮಾಪಕರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಈ ನಿರ್ಧಾರ ಅಭಿಮಾನಿಗಳಿಗೆ ಆಶ್ಚರ್ಯ ತಂದಿದೆ.

3 ಸಾವಿರ ಕೋಟಿ ಒಡೆಯ ಸಲ್ಮಾನ್ ಖಾನ್; ಹೂಡಿಕೆಗಳನ್ನು ನೋಡಿದ್ರೆ ತಲೆತಿರುಗುತ್ತೆ

Salman Khan: ಸಲ್ಮಾನ್ ಖಾನ್ ಅವರಿಗೆ ಇಂದು (ಡಿಸೆಂಬರ್ 27) ಜನ್ಮದಿನ. ಅವರು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರು. ಅಂದಹಾಗೆ ಸಲ್ಮಾನ್ ಖಾನ್ ಬಳಿಯ ಒಟ್ಟು ಆಸ್ತಿ ಎಷ್ಟು? ಸಲ್ಮಾನ್ ಬಳಿ ಇವೆ ಹಲವು ಬಲು ದುಬಾರಿ ವಸ್ತುಗಳು.

‘ಧುರಂಧರ್’ ಸಿನಿಮಾದ ಭಯಂಕರ ದೃಶ್ಯದ ಶೂಟಿಂಗ್ ಆಗಿದ್ದು ಹೀಗೆ.. ವಿಡಿಯೋ ನೋಡಿ

ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಚಿತ್ರಕ್ಕೆ ‘ಎ’ ಪ್ರಮಾಣಪತ್ರ ನೀಡಲಾಗಿದೆ. ಈ ಸಿನಿಮಾದಲ್ಲಿ ಕ್ರೌರ್ಯದ ದೃಶ್ಯಗಳು ಇರುವುದು ಸಹ ‘ಎ’ ಪ್ರಮಾಣಪತ್ರ ಸಿಗಲು ಕಾರಣ. ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರ ತಯಾರಾಗಿದೆ. ರಣವೀರ್ ಸಿಂಗ್ ಅವರಿಗೆ ಈ ಸಿನಿಮಾದಿಂದ ದೊಡ್ಡ ಗೆಲುವು ಸಿಕ್ಕಿದೆ.

ಮಾರ್ಕ್, 45, ಡೆವಿಲ್ ಬಂದರೂ ತಗ್ಗಿಲ್ಲ ‘ಧುರಂಧರ್’ ಹವಾ; 21ನೇ ದಿನವೂ 26 ಕೋಟಿ ರೂ. ಗಳಿಕೆ

ಯಾವುದೇ ಹೊಸ ಸಿನಿಮಾಗಳು ಬಿಡುಗಡೆ ಆದರೂ ಕೂಡ ‘ಧುರಂಧರ್’ ಸಿನಿಮಾದ ಕಲೆಕ್ಷನ್ ತಗ್ಗುತ್ತಲೇ ಇಲ್ಲ. ‘ಅವತಾರ್ 3’, ‘ಮಾರ್ಕ್’, ‘45’, ‘ದಿ ಡೆವಿಲ್’ ಸಿನಿಮಾಗಳ ಎದುರಲ್ಲಿ ‘ಧುರಂಧರ್’ ಚಿತ್ರ ಅಬ್ಬರಿಸುತ್ತಿದೆ. ವಿಶ್ವಾದ್ಯಂತ ಈ ಸಿನಿಮಾದ ಕಲೆಕ್ಷನ್ ಈಗಾಗಲೇ ಸಾವಿರ ಕೋಟಿ ರೂಪಾಯಿ ದಾಟಿದೆ. ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಸಂಜಯ್ ಕಪೂರ್ ಆಸ್ತಿ ವಿವಾದ; ತೀರ್ಪು ಕಾಯ್ದಿರಿಸಿದ ಕೋರ್ಟ್

ನಟಿ ಕರಿಷ್ಮಾ ಕಪೂರ್ ಮಕ್ಕಳಾದ ಸಮೈರಾ ಮತ್ತು ಕಿಯಾನ್ ದಿವಂಗತ ತಂದೆ ಸಂಜಯ್ ಕಪೂರ್ ಆಸ್ತಿಯಲ್ಲಿ ಪಾಲು ಕೋರಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ವಿಲ್ ನಕಲಿ ಮತ್ತು ತಿರುಚಲ್ಪಟ್ಟಿದೆ ಎಂದು ಆರೋಪಿಸಿದ್ದಾರೆ. ನ್ಯಾಯಾಲಯ ತೀರ್ಪು ಕಾಯ್ದಿರಿಸಿದ್ದು, ಪ್ರಿಯಾ ಸಚ್‌ದೇವ್ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಆಸ್ತಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮುಂದಿನ ತೀರ್ಪು ನಿರ್ಣಾಯಕವಾಗಲಿದೆ.

ಹೃತಿಕ್ ಮನೆಯಲ್ಲಿ ಮದುವೆ ಸಂಭ್ರಮ; ತಂದೆ, ಮಕ್ಕಳ ಜೊತೆ ಹಾಡಿ ಕುಣಿದ ನಟ

ನಟ ಹೃತಿಕ್ ರೋಷನ್ ಸೋದರಸಂಬಂಧಿ ಇಶಾನ್ ರೋಷನ್ ವಿವಾಹ ಸಂಭ್ರಮದಲ್ಲಿ ಹೃತಿಕ್ ಮತ್ತು ಅವರ ಮಕ್ಕಳು ನೃತ್ಯ ಮಾಡಿ ಗಮನ ಸೆಳೆದಿದ್ದಾರೆ. ಈ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಇದೇ ವೇಳೆ, ಹೃತಿಕ್ ಗೆಳತಿ ಸಬಾ ಆಜಾದ್ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಮಾಜಿ ಪತ್ನಿ ಸುಸೇನ್ ಖಾನ್ ಕೂಡ ಮದುವೆಯಲ್ಲಿ ಉಪಸ್ಥಿತರಿದ್ದರು.

‘ಧುರಂಧರ್’ ಯಶಸ್ಸಿನ ಬಳಿಕ ‘ದೃಶ್ಯಂ 3’ ಚಿತ್ರದಿಂದ ಹೊರಬಂದ ಅಕ್ಷಯ್ ಖನ್ನಾ?

ಒಂದು ಸಿನಿಮಾ ಹಿಟ್ ಆದ ಬಳಿಕ ಸಿಕ್ಕ ಸಿಕ್ಕ ಅವಕಾಶಗಳನ್ನೆಲ್ಲ ಬಾಚಿಕೊಳ್ಳುತ್ತಾರೆ ಕೆಲವು ಕಲಾವಿದರು. ಆದರೆ ರಣವೀರ್ ಸಿಂಗ್ ಮತ್ತು ಅಕ್ಷಯ್ ಖನ್ನಾ ಅವರು ಇರುವ ಅವಕಾಶಗಳನ್ನು ಕೈ ಚೆಲ್ಲುತ್ತಿದ್ದಾರೆ. ‘ಧುರಂಧರ್’ ಸಿನಿಮಾ ಬ್ಲಾಕ್ ಬಸ್ಟರ್ ಆದ ಬಳಿಕ ಈ ಬೆಳವಣಿಗೆ ನಡೆದಿದೆ ಎಂಬ ಮಾತು ಹೇಳಿಬರುತ್ತಿದೆ.

ಬೆಂಗಳೂರಿನ ಗೌರಿಯಿಂದ ಆಮೀರ್ ಮನಸ್ಸಿಗೆ ಸಿಕ್ಕಿತು ಶಾಂತಿ 

ಆಮಿರ್ ಖಾನ್ ವೈಯಕ್ತಿಕ ಜೀವನದಲ್ಲಿ ಗೌರಿ ಸ್ಪ್ರಟ್ ಹೊಸ ಅಧ್ಯಾಯ ತೆರೆದಿದ್ದಾರೆ. ಎರಡು ವಿವಾಹಗಳು, ವಿಚ್ಛೇದನಗಳ ನಂತರವೂ ಮಾಜಿ ಪತ್ನಿಯರೊಂದಿಗೆ ಸ್ನೇಹ ಉಳಿಸಿಕೊಂಡಿರುವ ಖಾನ್, ಗೌರಿ ತಮ್ಮ ಜೀವನಕ್ಕೆ ಶಾಂತಿ ತಂದಿದ್ದಾರೆಂದು ಹೇಳಿದ್ದಾರೆ. ಚಲನಚಿತ್ರ ವೃತ್ತಿಜೀವನದಲ್ಲಿ ನಿಧಾನಗತಿ ಅನುಸರಿಸುತ್ತಿರುವ ಆಮಿರ್, ಚಿತ್ರರಂಗ ತೊರೆಯುವ ಆಲೋಚನೆಯಿಂದ ಹೊರಬಂದು, ನಿಧಾನವಾಗಿ ಕೆಲಸ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

ನೋರಾ ಫತೇಹಿ ಕಾರು ಅಪಘಾತ: ಈಗ ಹೇಗಿದೆ ನಟಿಯ ಪರಿಸ್ಥಿತಿ?

ಅಪಘಾತಕ್ಕೆ ಒಳಗಾಗಿರುವ ನಟಿ ನೋರಾ ಫತೇಹಿ ಅವರ ಕಾರಿನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮುಂಬೈನಲ್ಲಿ ಈ ಅಪಘಾತ ಸಂಭವಿಸಿದೆ. ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬರು ಕಾರು ಓಡಿಸಿದ್ದರಿಂದ ಈ ಅವಘಡ ಉಂಟಾಗಿದೆ. ನೋರಾ ಫತೇಹಿ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.