
Bollywood
ಭಾರತದ ಸಮೃದ್ಧ ಚಲನಚಿತ್ರೋದ್ಯಮಗಳಲ್ಲಿ ಬಾಲಿವುಡ್ ಕೂಡ ಒಂದು. ಈವರೆಗೆ ಹಲವು ಸೂಪರ್ ಹಿಟ್ ಚಿತ್ರಗಳು ಇಲ್ಲಿ ಸಿದ್ಧಗೊಳ್ಳುತ್ತವೆ. ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಆಗುತ್ತದೆ. 1930ರ ಸಂದರ್ಭದಲ್ಲಿ ಬಾಲಿವುಡ್ ಆರಂಭ ಆಯಿತು. ನಂತರ ಜಾಗತಿಕವಾಗಿ ಅತಿದೊಡ್ಡ ಮತ್ತು ಅತ್ಯಂತ ಪ್ರಭಾವಶಾಲಿ ಚಿತ್ರರಂಗವಾಗಿ ಬೆಳೆಯಿತು. ಬಾಲಿವುಡ್ನಲ್ಲಿ ಈವರೆಗೆ ಎಲ್ಲಾ ರೀತಿಯ ಸಿನಿಮಾಗಳು ಸಿದ್ಧಗೊಂಡಿವೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಐಶ್ವರ್ಯ ರೈ ಮತ್ತು ಅಮಿತಾಭ್ ಬಚ್ಚನ್ ಅವರಂತಹ ಅಪ್ರತಿಮ ನಟರು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಬಾಲಿವುಡ್ನಲ್ಲಿ ರೊಮ್ಯಾಂಟಿಕ್ ಡ್ರಾಮಾದಿಂದ ಹಿಡಿದು ಆ್ಯಕ್ಷನ್ ಪ್ಯಾಕ್ಡ್ ಬ್ಲಾಕ್ಬಸ್ಟರ್ಗಳವರೆಗೆ ವೈವಿಧ್ಯಮಯ ಶ್ರೇಣಿಯ ಚಲನಚಿತ್ರಗಳನ್ನು ನಿರ್ಮಾಣ ಮಾಡಲಾಗುತ್ತದೆ. ಬಾಲಿವುಡ್ನ ಪ್ರಭಾವವು ಮನರಂಜನೆಯನ್ನು ಮೀರಿ ವಿಸ್ತರಿಸಿದೆ.
‘ಕೇಸರಿ: ಚಾಪ್ಟರ್ 2’ ಸಿನಿಮಾಗೆ ದೊಡ್ಡ ಪೆಟ್ಟು; ಬಿಡುಗಡೆಯಾಗಿ ಕೆಲವೇ ಗಂಟೆಯಲ್ಲಿ ಪೈರಸಿ
ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ‘ಕೇಸರಿ: ಚಾಪ್ಟರ್ 2’ ಸಿನಿಮಾ ಲೀಕ್ ಆಗಿದೆ. ಇದರಿಂದ ಚಿತ್ರದ ಕಲೆಕ್ಷನ್ಗೆ ತೊಂದರೆ ಆಗಲಿದೆ. ಹಲವು ಪೈರಸಿ ವೆಬ್ಸೈಟ್ಗಳಲ್ಲಿ ಈ ಸಿನಿಮಾವನ್ನು ಹರಿಬಿಡಲಾಗಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟ ಆಗಿದೆ. ಕೆಲವೇ ದಿನಗಳ ಹಿಂದೆ ‘ಸಿಕಂದರ್’, ‘ಛಾವ’ ಮುಂತಾದ ಚಿತ್ರಗಳಿಗೆ ಕೂಡ ಪೈರಸಿ ಸಮಸ್ಯೆ ಎದುರಾಗಿತ್ತು.
- Madan Kumar
- Updated on: Apr 18, 2025
- 6:23 pm
Yash: ಮೇ ಟು ಅಕ್ಟೋಬರ್.. ‘ರಾಮಾಯಣ 2’ ಶೂಟ್ನಲ್ಲಿ ಬ್ಯುಸಿ ಆಗಲಿದ್ದಾರೆ ಯಶ್
ಯಶ್ ಅವರು ಮೇ ತಿಂಗಳಿಂದ ಅಕ್ಟೋಬರ್ವರೆಗೆ ‘ರಾಮಾಯಣ 2’ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಜೊತೆ ಅವರ ಕೆಲಸದ ವೇಳಾಪಟ್ಟಿ ಹೊಂದಾಣಿಕೆಯಾಗಿದೆ. ಚಿತ್ರದ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗ 2026ರ ದೀಪಾವಳಿಗೆ ಮತ್ತು ಎರಡನೇ ಭಾಗ 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ.
- Rajesh Duggumane
- Updated on: Apr 18, 2025
- 3:18 pm
ಗೌರಿ ಖಾನ್ ಒಡೆತನದ ರೆಸ್ಟೋರೆಂಟ್ನಲ್ಲಿ ನಕಲಿ ಪನ್ನೀರ್ ಬಳಕೆ? ವ್ಯಕ್ತವಾಯ್ತು ಟೀಕೆ
ಸಾರ್ಥಕ್ ಎಂಬುವರು ಗೌರಿ ಖಾನ್ ಅವರ ಟೋರಿ ರೆಸ್ಟೋರೆಂಟ್ನಲ್ಲಿ ನಕಲಿ ಪನ್ನೀರ್ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅವರು ಅಯೋಡಿನ್ ಪರೀಕ್ಷೆ ನಡೆಸಿ, ಪನ್ನೀರ್ ನಕಲಿ ಎಂದು ತೋರಿಸಿದ್ದಾರೆ. ಆದರೆ, ರೆಸ್ಟೋರೆಂಟ್ ಇದನ್ನು ತಳ್ಳಿಹಾಕಿದೆ. ಈ ವಿಡಿಯೋ ವೈರಲ್ ಆಗಿದ್ದು, ಟೋರಿ ರೆಸ್ಟೋರೆಂಟ್ನ ಖ್ಯಾತಿಗೆ ಧಕ್ಕೆ ತಂದಿದೆ.
- Rajesh Duggumane
- Updated on: Apr 18, 2025
- 11:58 am
ಸ್ಪರ್ಧೆ ಬೇಡ ಎಂಬ ನಿರ್ಧಾರ; ಅಂದುಕೊಂಡಿದ್ದಕ್ಕಿಂತ ಮೊದಲೇ ಆಮಿರ್ ಖಾನ್ ಸಿನಿಮಾ ರಿಲೀಸ್
ಆಮಿರ್ ಖಾನ್ ಅವರ ಮುಂಬರುವ ಚಿತ್ರ 'ಸಿತಾರೆ ಜಮೀನ್ ಪರ್' ಅಂದುಕೊಂಡಿದ್ದಕ್ಕಿಂತ ಮೊದಲೇ ಬಿಡುಗಡೆಯಾಗುವ ಸಾಧ್ಯತೆ ಇದೆ. ಬೇರೆ ದೊಡ್ಡ ಚಿತ್ರಗಳೊಂದಿಗೆ ಸ್ಪರ್ಧಿಸದಿರಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಆಮಿರ್ ಖಾನ್. ಈ ಚಿತ್ರದ ಟ್ರೈಲರ್ ಅಜಯ್ ದೇವಗನ್ ಅವರ 'ರೇಡ್ 2' ಜೊತೆಗೆ ಬಿಡುಗಡೆಯಾಗಲಿದೆ.
- Rajesh Duggumane
- Updated on: Apr 18, 2025
- 6:55 am
ಅಕ್ಷಯ್ ಕುಮಾರ್ಗೆ ರಾಷ್ಟ್ರ ಪ್ರಶಸ್ತಿ ಸಿಗಬೇಕು: ‘ಕೇಸರಿ 2’ ರಿಲೀಸ್ಗೂ ಮೊದಲೇ ಫ್ಯಾನ್ಸ್ ಒತ್ತಾಯ
ಬಿಡುಗಡೆಗೂ ಮುನ್ನವೇ ‘ಕೇಸರಿ: ಚಾಪ್ಟರ್ 2’ ಸಿನಿಮಾದ ಬಗ್ಗೆ ಪಾಸಿಟಿವ್ ಟಾಕ್ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಬಗ್ಗೆ ಹೈಪ್ ಜಾಸ್ತಿ ಆಗಿದೆ. ಸ್ಪೆಷಲ್ ಶೋ ನೋಡಿದ ಪ್ರೇಕ್ಷಕರು ಅಕ್ಷಯ್ ಕುಮಾರ್ ಅವರ ನಟನೆಯನ್ನು ಹೊಗಳಲು ಶುರು ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
- Madan Kumar
- Updated on: Apr 16, 2025
- 8:55 pm
6 ಲಕ್ಷ ರೂಪಾಯಿ ಬೆಲೆಯ ಬ್ಯಾಗ್ ಧರಿಸಿದ ನಟಿ ಅನನ್ಯಾ ಪಾಂಡೆ
ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ಅವರು ಧರಿಸಿರುವ ಈ ಚಿಕ್ಕ ಬ್ಯಾಗ್ ಬೆಲೆ 6 ಲಕ್ಷ ರೂಪಾಯಿ! ಇದು ಕೇವಲ ಹಣದ ವಿಷಯ ಅಲ್ಲ. ನಟಿಯ ಪಾಲಿಗೆ ಹೆಮ್ಮೆಯ ವಿಷಯ. ಯಾಕೆಂದರೆ, ಜಾಗತಿಕ ಮಟ್ಟದಲ್ಲಿ ಹೆಸರುವಾಸಿ ಆಗಿರುವ ‘ಶನೆಲ್’ ಕಂಪನಿಗೆ ಅನನ್ಯಾ ಪಾಂಡೆ ಅವರು ಪ್ರಚಾರ ರಾಯಭಾರಿಯಾಗಿ ಆಯ್ಕೆ ಆಗಿದ್ದಾರೆ.
- Madan Kumar
- Updated on: Apr 16, 2025
- 6:47 pm
‘ಇಂಥ ಸಿನಿಮಾ ನೋಡುವಾಗ ಮೊಬೈಲ್ ಮುಟ್ಟಬೇಡಿ’: ಅಕ್ಷಯ್ ಕುಮಾರ್ ಮನವಿ
‘ಕೇಸರಿ: ಚಾಪ್ಟರ್ 2’ ಸಿನಿಮಾ ಬಿಡುಗಡೆ ಆಗುವುದಕ್ಕೂ ಮೊದಲೇ ಅಕ್ಷಯ್ ಕುಮಾರ್ ಒಂದು ಮನವಿ ಮಾಡಿಕೊಂಡಿದ್ದಾರೆ. ಚಿತ್ರಮಂದಿರದಲ್ಲಿ ಅಭಿಮಾನಿಗಳು ಈ ಸಿನಿಮಾಗೆ ಅವಮಾನ ಮಾಡಬಾರದು ಎಂದು ಅವರು ಹೇಳಿದ್ದಾರೆ. ಸಿನಿಮಾ ವೀಕ್ಷಣೆ ವೇಳೆ ಮೊಬೈಲ್ ಬಳಕೆ ಮಾಡಿಬೇಡಿ ಎಂದು ಅಕ್ಷಯ್ ಕುಮಾರ್ ಅವರು ಪ್ರೇಕ್ಷಕರಲ್ಲಿ ವಿನಂತಿಸಿಕೊಂಡಿದ್ದಾರೆ.
- Madan Kumar
- Updated on: Apr 16, 2025
- 4:56 pm
‘ಕೊನೆ ಉಸಿರಿನವರೆಗೂ ಐಶ್ವರ್ಯಾ ಪರವಾಗಿ ಹೋರಾಡುತ್ತೇನೆ’; ಅಮಿತಾಭ್ ಹೇಳಿದ್ದ ಮಾತಿದು
ಅಮಿತಾಭ್ ಬಚ್ಚನ್ ಅವರು ತಮ್ಮ ಸೊಸೆ ಐಶ್ವರ್ಯಾ ರೈ ಬಚ್ಚನ್ ಅವರ ಬಗ್ಗೆ ತಮ್ಮ ಅಪಾರ ಪ್ರೀತಿಯನ್ನು ಅನೇಕ ಬಾರಿ ವ್ಯಕ್ತಪಡಿಸಿದ್ದಾರೆ. 2010 ರಲ್ಲಿ ಐಶ್ವರ್ಯಾ ಅವರ ಬಗ್ಗೆ ಪತ್ರಿಕೆಯೊಂದರಲ್ಲಿ ಪ್ರಕಟವಾದ ಸುಳ್ಳು ಸುದ್ದಿಯನ್ನು ಅಮಿತಾಭ್ ಬಲವಾಗಿ ಖಂಡಿಸಿದರು. ಅವರು ತಮ್ಮ ಬ್ಲಾಗ್ನಲ್ಲಿ ತಮ್ಮ ಕೋಪವನ್ನು ವ್ಯಕ್ತಪಡಿಸಿ, ಐಶ್ವರ್ಯಾ ಅವರನ್ನು ತಮ್ಮ ಮಗಳಂತೆ ಕಾಣುತ್ತೇನೆ ಎಂದು ಹೇಳಿದ್ದರು.
- Shreelaxmi H
- Updated on: Apr 16, 2025
- 8:04 am
ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಹಾಕಿದವನು ಮಾನಸಿಕ ಅಸ್ವಸ್ಥ; ಗುಜರಾತ್ನಲ್ಲಿ ಬಂಧನ
ಗುಜರಾಜ್ನ ವಡೋದರದಿಂದ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಸಂದೇಶ ಬಂದಿತ್ತು. ಮುಂಬೈ ಪೊಲೀಸರು ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಆರೋಪಿಯು ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂಬುದು ತಿಳಿದು ಬಂದಿದೆ. ಅಲ್ಲದೇ ಆತ ಚಿಕಿತ್ಸೆ ಕೂಡ ಪಡೆಯುತ್ತಿದ್ದಾನೆ. ಬೆದರಿಕೆ ಸಂದೇಶಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮಾಡಲಾಗುತ್ತಿದೆ.
- Madan Kumar
- Updated on: Apr 15, 2025
- 8:16 pm
ಮಗನನ್ನು ಫ್ಯಾಷನ್ ಶೋಗೆ ಕರೆದುಕೊಂಡು ಹೋಗಿ ಟ್ರೋಲ್ ಆದ ಹಾರ್ದಿಕ್ ಮಾಜಿ ಪತ್ನಿ ನತಾಶಾ
ಹಾರ್ದಿಕ್ ಪಾಂಡ್ಯ ಅವರಿಂದ ವಿಚ್ಛೇದನದ ನಂತರ, ನಟಾಶಾ ಸ್ಟಾಂಕೋವಿಕ್ ಮಾಡೆಲಿಂಗ್ಗೆ ಮರಳಿದ್ದಾರೆ. ಇತ್ತೀಚೆಗೆ ಫ್ಯಾಷನ್ ಶೋನಲ್ಲಿ ತಮ್ಮ ಮಗ ಅಗಸ್ತ್ಯನೊಂದಿಗೆ ಪಾಲ್ಗೊಂಡಿದ್ದಕ್ಕಾಗಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಚಿಕ್ಕ ಮಗುವನ್ನು ಅಂತಹ ಸ್ಥಳಕ್ಕೆ ಕರೆತಂದಿದ್ದಕ್ಕಾಗಿ ನೆಟ್ಟಿಗರು ಅವರನ್ನು ಟೀಕಿಸಿದ್ದಾರೆ. ಅಗಸ್ತ್ಯನ ಬೇಸರದ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
- Shreelaxmi H
- Updated on: Apr 15, 2025
- 8:28 am