Bollywood
ಭಾರತದ ಸಮೃದ್ಧ ಚಲನಚಿತ್ರೋದ್ಯಮಗಳಲ್ಲಿ ಬಾಲಿವುಡ್ ಕೂಡ ಒಂದು. ಈವರೆಗೆ ಹಲವು ಸೂಪರ್ ಹಿಟ್ ಚಿತ್ರಗಳು ಇಲ್ಲಿ ಸಿದ್ಧಗೊಳ್ಳುತ್ತವೆ. ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಆಗುತ್ತದೆ. 1930ರ ಸಂದರ್ಭದಲ್ಲಿ ಬಾಲಿವುಡ್ ಆರಂಭ ಆಯಿತು. ನಂತರ ಜಾಗತಿಕವಾಗಿ ಅತಿದೊಡ್ಡ ಮತ್ತು ಅತ್ಯಂತ ಪ್ರಭಾವಶಾಲಿ ಚಿತ್ರರಂಗವಾಗಿ ಬೆಳೆಯಿತು. ಬಾಲಿವುಡ್ನಲ್ಲಿ ಈವರೆಗೆ ಎಲ್ಲಾ ರೀತಿಯ ಸಿನಿಮಾಗಳು ಸಿದ್ಧಗೊಂಡಿವೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಐಶ್ವರ್ಯ ರೈ ಮತ್ತು ಅಮಿತಾಭ್ ಬಚ್ಚನ್ ಅವರಂತಹ ಅಪ್ರತಿಮ ನಟರು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಬಾಲಿವುಡ್ನಲ್ಲಿ ರೊಮ್ಯಾಂಟಿಕ್ ಡ್ರಾಮಾದಿಂದ ಹಿಡಿದು ಆ್ಯಕ್ಷನ್ ಪ್ಯಾಕ್ಡ್ ಬ್ಲಾಕ್ಬಸ್ಟರ್ಗಳವರೆಗೆ ವೈವಿಧ್ಯಮಯ ಶ್ರೇಣಿಯ ಚಲನಚಿತ್ರಗಳನ್ನು ನಿರ್ಮಾಣ ಮಾಡಲಾಗುತ್ತದೆ. ಬಾಲಿವುಡ್ನ ಪ್ರಭಾವವು ಮನರಂಜನೆಯನ್ನು ಮೀರಿ ವಿಸ್ತರಿಸಿದೆ.
ಅಕ್ಷಯ್ ಕುಮಾರ್ ಮಗಳ ಬಳಿಯೇ ಬೆತ್ತಲೆ ಫೋಟೋ ಕಳುಹಿಸಲು ಬೇಡಿಕೆ ಇಟ್ಟ ಖದೀಮ; ಮುಂದೇನಾಯ್ತ?
ಅಕ್ಷಯ್ ಕುಮಾರ್ ಮಗಳು ನಿತಾರಾ ಆನ್ಲೈನ್ ಗೇಮ್ ಆಡುವಾಗ ಬೆತ್ತಲೆ ಫೋಟೋ ಕಳುಹಿಸುವಂತೆ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದಾನೆ. ಈ ಕುರಿತು ಕುಟುಂಬ ದೂರು ನೀಡಿದ ನಂತರ ಮಹಾರಾಷ್ಟ್ರ ಸೈಬರ್ ವಿಭಾಗ ಅಪರಾಧಿಯನ್ನು ಬಂಧಿಸಿದೆ. ಆನ್ಲೈನ್ನಲ್ಲಿ ಮಕ್ಕಳ ಸುರಕ್ಷತೆ ಮತ್ತು ಸೈಬರ್ ಅಪರಾಧಗಳ ವಿರುದ್ಧ ಪೊಲೀಸರ ಕ್ರಮದ ಅಗತ್ಯವನ್ನು ಈ ಘಟನೆ ಎತ್ತಿ ತೋರಿಸುತ್ತದೆ. ಸೈಬರ್ ಜಾಗೃತಿ ಅತಿ ಮುಖ್ಯ.
- Rajesh Duggumane
- Updated on: Apr 25, 2026
- 11:05 am
ಸಂಜಯ್ ದತ್ ಹೊಸ ಸಿನಿಮಾ; ‘ಖಳನಾಯಕ್ ರಿಟರ್ನ್ಸ್’ ಫಸ್ಟ್ ಲುಕ್ ಟೀಸರ್ ಬಿಡುಗಡೆ
‘ಧುರಂಧರ್ 2’ ಗೆಲ್ಲುತ್ತಿದ್ದಂತೆಯೇ ಸಂಜಯ್ ದತ್ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಈಗ ಅವರು ‘ಖಳನಾಯಕ್ ರಿಟರ್ನ್ಸ್’ ಸಿನಿಮಾ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಟೀಸರ್ ಮತ್ತು ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಸೃಷ್ಟಿ ಆಗಿದೆ.
- Madan Kumar
- Updated on: Apr 24, 2026
- 10:45 pm
ಗರ್ಭಿಣಿ ಆದ ನಂತರವೂ ಸಾಹಸ ದೃಶ್ಯಗಳ ಚಿತ್ರೀಕರಣ ಮಾಡಿದ ದೀಪಿಕಾ ಪಡುಕೋಣೆ
ಈ ವರ್ಷ ಡಿಸೆಂಬರ್ 24ರಂದು ‘ಕಿಂಗ್’ ಸಿನಿಮಾ ಬಿಡುಗಡೆ ಆಗಬೇಕಿದೆ. ಅದಕ್ಕಾಗಿ ಚಿತ್ರೀಕರಣ ಭರದಿಂದ ಸಾಗಿದೆ. ನಟಿ ದೀಪಿಕಾ ಪಡುಕೋಣೆ ಅವರು ಪ್ರೆಗ್ನೆಂಟ್ ಆಗಿದ್ದರೂ ಕೂಡ ಶೂಟಿಂಗ್ ನಿಲ್ಲಿಸಿಲ್ಲ. ಶಾರುಖ್ ಖಾನ್ ಜೊತೆ ಅವರು ಸಾಹಸ ದೃಶ್ಯಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
- Madan Kumar
- Updated on: Apr 24, 2026
- 6:44 pm
30 ವರ್ಷಗಳ ಬಳಿಕ ಕಿಸ್ ಮಾಡಲು ಕಾಜೋಲ್ ಒಪ್ಪಿಕೊಂಡಿದ್ದೇಕೆ? ಸಿಕ್ತು ಉತ್ತರ
ಖ್ಯಾತ ನಟಿ ಕಾಜೋಲ್ ಅವರು ಹಲವು ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸಿದರೂ ಕೂಡ ಕಿಸ್ಸಿಂಗ್ ಸೀನ್ ಒಪ್ಪಿಕೊಂಡಿರಲಿಲ್ಲ. ಆದರೆ 30 ವರ್ಷಗಳ ಬಳಿಕ ಅವರು ಆ ನಿಮಯವನ್ನು ಮುರಿದರು. ಅದಕ್ಕೆ ಕಾರಣ ಏನು ಎಂಬುದನ್ನು ಅವರೀಗ ಬಹಿರಂಗಪಡಿಸಿದ್ದಾರೆ. ಆ ಬಗ್ಗೆ ಇಲ್ಲದೆ ಮಾಹಿತಿ..
- Madan Kumar
- Updated on: Apr 24, 2026
- 3:58 pm
‘ರಾಜ ಶಿವಾಜಿ’ ಸಿನಿಮಾದ ಕಲಾವಿದರಿಗೆ ಸಿಕ್ಕಿದೆ ಭಾರೀ ಸಂಭಾವನೆ
ಮೇ 1 ರಂದು ತೆರೆಕಾಣಲಿರುವ ರಿತೇಶ್ ದೇಶಮುಖ್ ಅವರ 'ರಾಜ ಶಿವಾಜಿ' ಚಿತ್ರದ ತಾರಾಬಳಗ ಮತ್ತು ಅವರ ಸಂಭಾವನೆ ಬಗ್ಗೆ ಇಲ್ಲಿ ತಿಳಿಯಿರಿ. 100 ಕೋಟಿ ಬಜೆಟ್ನಲ್ಲಿ ನಿರ್ಮಿಸಿದ ಈ ಚಿತ್ರದಲ್ಲಿ ರಿತೇಶ್, ಸಂಜಯ್ ದತ್, ಅಭಿಷೇಕ್ ಬಚ್ಚನ್, ವಿದ್ಯಾ ಬಾಲನ್ ಸೇರಿದಂತೆ ಹಲವು ಬಾಲಿವುಡ್ ನಟರು ನಟಿಸಿದ್ದಾರೆ. ಪ್ರತಿಯೊಬ್ಬ ನಟನು ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬ ಸಂಪೂರ್ಣ ವಿವರ ಇಲ್ಲಿದೆ.
- Shreelaxmi H
- Updated on: Apr 24, 2026
- 11:06 am
‘ಧುರಂಧರ್’ ಗೆದ್ದಿದ್ದಕ್ಕೆ ನಟ ರಾಕೇಶ್ ಬೇಡಿಗೆ 1 ಕೋಟಿ ರೂಪಾಯಿ ಬೋನಸ್ ಕೊಟ್ಟ ನಿರ್ಮಾಪಕರು
‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿವೆ. ಈ ಸಿನಿಮಾದಲ್ಲಿ ನಟಿಸಿರುವ ಕಲಾವಿದರ ಜನಪ್ರಿಯತೆ ಹೆಚ್ಚಾಗಿದೆ. ಒಂದು ಮುಖ್ಯ ಪಾತ್ರ ಮಾಡಿರುವ ರಾಕೇಶ್ ಬೇಡಿ ಅವರಿಗೆ ಒಂದು ಕೋಟಿ ರೂಪಾಯಿ ಬೋಸನ್ ನೀಡಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
- Madan Kumar
- Updated on: Apr 23, 2026
- 9:19 pm
‘ನನಗೆ ಆ ರೀತಿ ಮೀಸೆ ಬರಲ್ಲ’: ನೇರವಾಗಿ ಒಪ್ಪಿಕೊಂಡು ಜನರ ಕ್ಷಮೆ ಕೇಳಿದ ಅಕ್ಷಯ್ ಕುಮಾರ್
ನಟ ಅಕ್ಷಯ್ ಕುಮಾರ್ ಅವರು ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾಗಾಗಿ ನಕಲಿ ಮೀಸೆ ಅಂಟಿಸಿಕೊಂಡು ಟ್ರೋಲ್ ಆಗಿದ್ದರು. ಆ ರೀತಿ ಮೀಸೆ ಅಂಟಿಸಿಕೊಳ್ಳುವುದು ತಮಗೆ ಅನಿವಾರ್ಯ ಎಂದು ಅವರು ಈಗ ಬಾಯಿಬಿಟ್ಟಿದ್ದಾರೆ. ಜನರಿಗೆ ಆ ಲುಕ್ ಇಷ್ಟ ಆಗದೇ ಇರುವುದಕ್ಕೆ ಅಕ್ಷಯ್ ಕುಮಾರ್ ಕ್ಷಮೆ ಕೇಳಿದ್ದಾರೆ.
- Madan Kumar
- Updated on: Apr 22, 2026
- 5:20 pm
ಕ್ಯಾಮೆರಾ ಎದುರಲ್ಲೇ ಬಯಲಾಯ್ತು ‘ಧುರಂಧರ್’ ಗಾಯಕಿಯ ಕಳ್ಳಾಟ; ಭಾರಿ ಟ್ರೋಲ್
ಲೈವ್ ಸಂಗೀತ ಕಾರ್ಯಕ್ರಮದಲ್ಲಿ ಗಾಯಕಿ ಜಾಸ್ಮಿನ್ ಸ್ಯಾಂಡ್ಲಸ್ ಅವರು ಕಳ್ಳಾಟ ಆಡಿದ್ದಾರೆ. ಕ್ಯಾಮೆರಾದಲ್ಲಿ ಅವರ ಈ ವರ್ತನೆ ಸೆರೆಯಾಗಿದೆ. ಲೈವ್ ಆಗಿ ಹಾಡುವ ಬದಲು ಲಿಪ್ ಸಿಂಕ್ ಮಾಡಿ ಜಾಸ್ಮಿನ್ ಸ್ಯಾಂಡ್ಲಸ್ ಅವರು ಸಿಕ್ಕಿ ಬಿದ್ದಿದ್ದಾರೆ. ಈ ವಿವಾದದ ಬಗ್ಗೆ ಅವರು ಸದ್ಯಕ್ಕೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.
- Madan Kumar
- Updated on: Apr 22, 2026
- 4:02 pm
‘ಜವಾನ್ 2’ ಚಿತ್ರಕ್ಕಾಗಿ ಮತ್ತೆ ಒಂದಾಗಲಿದ್ದಾರಾ ಶಾರುಖ್ ಖಾನ್ ಮತ್ತು ಅಟ್ಲಿ?
ನಿರ್ದೇಶಕ ಅಟ್ಲಿ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಇದೆ. ಅವರ ಜೊತೆ ಮತ್ತೆ ಕೆಲಸ ಮಾಡಲು ಶಾರುಖ್ ಖಾನ್ ಆಸಕ್ತಿ ತೋರಿಸಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಅಟ್ಲಿ ಮತ್ತು ಶಾರುಖ್ ಖಾನ್ ಅವರು ‘ಜವಾನ್ 2’ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದಾರೆ ಎಂದು ವರದಿ ಆಗಿದೆ.
- Madan Kumar
- Updated on: Apr 22, 2026
- 3:29 pm
ಆಮಿರ್ ಮಾತಿಗೆ ಮಣಿದ ರಣವೀರ್ ಸಿಂಗ್; 10 ಕೋಟಿ ಮರಳಿಸಿದ ‘ಧುರಂಧರ್’ ನಟ
ರಣವೀರ್ ಸಿಂಗ್ ‘ಡಾನ್ 3’ ಚಿತ್ರದಿಂದ ಹಿಂದೆ ಸರಿದಿದ್ದು, ಆಮಿರ್ ಖಾನ್ ಮಧ್ಯಸ್ಥಿಕೆಯಿಂದ 10 ಕೋಟಿ ರೂ. ಅಡ್ವಾನ್ಸ್ ಹಣವನ್ನು ನಿರ್ಮಾಪಕರಿಗೆ ವಾಪಸ್ ನೀಡಲು ಒಪ್ಪಿದ್ದಾರೆ. ಕಥೆಯ ವಿಷಯದಲ್ಲಿ ನಿರ್ದೇಶಕ ಫರ್ಹಾನ್ ಅಖ್ತರ್ ಜೊತೆಗಿನ ಭಿನ್ನಾಭಿಪ್ರಾಯ ಇದಕ್ಕೆ ಕಾರಣ. 40 ಕೋಟಿ ರೂ. ನಷ್ಟ ಭರಿಸುವಂತೆ ಫರ್ಹಾನ್ ಬೇಡಿಕೆಯಿಟ್ಟಿದ್ದರು. ರಣವೀರ್ ಸಹಕಾರದಿಂದ ‘ಡಾನ್ 3’ ನಿರ್ಮಾಣ ನಿಲ್ಲುವುದು ಬಹುತೇಕ ಖಚಿತ.
- Rajesh Duggumane
- Updated on: Apr 22, 2026
- 10:14 am
ವೇದಿಕೆಯ ಮೇಲೆ ಗಳಗಳನೆ ಅತ್ತ ಜೆನಿಲಿಯಾ ಡಿಸೋಜಾ; ಕಾರಣ ಏನು?
ನಟಿ ಜೆನಿಲಿಯಾ ಡಿಸೋಜಾ ‘ರಾಜ ಶಿವಾಜಿ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ವೇದಿಕೆ ಮೇಲೆ ಕಣ್ಣೀರಿಟ್ಟಿದ್ದಾರೆ. ಪತಿ ರಿತೇಶ್ ದೇಶ್ಮುಖ್ ತಮ್ಮ ಕನಸಿನ ಯೋಜನೆಯ ಬಗ್ಗೆ ಮಾತನಾಡುತ್ತಾ ಭಾವುಕರಾದಾಗ, ಜೆನಿಲಿಯಾ ಕೂಡಾ ಕಣ್ಣೀರು ತಡೆಯಲಾಗದೆ ಅತ್ತರು. ರಿತೇಶ್ ನಿರ್ದೇಶಿಸಿ, ನಟಿಸಿರುವ 'ರಾಜ ಶಿವಾಜಿ' ಮೇ 1ಕ್ಕೆ ತೆರೆ ಕಾಣಲಿದೆ.
- Rajesh Duggumane
- Updated on: Apr 22, 2026
- 7:13 am
ಸಂಕೇತ ಭಾಷೆಯಲ್ಲೂ ಬಿಡುಗಡೆ ಆಗಲಿದೆ ಆರ್ಎಸ್ಎಸ್ ಕುರಿತ ‘ಆಖ್ರಿ ಸವಾಲ್’ ಸಿನಿಮಾ
ಸಂಜಯ್ ದತ್ ನಟನೆಯ ‘ಆಖ್ರಿ ಸವಾಲ್’ ಸಿನಿಮಾ ಸಂಕೇತ ಭಾಷೆಯಲ್ಲೂ ಬಿಡುಗಡೆ ಆಗಲಿದೆ. ಶ್ರವಣ ದೋಷ ಇರುವ ಪ್ರೇಕ್ಷಕರಿಗೂ ಸಿನಿಮಾವನ್ನು ತಲುಪಿಸಬೇಕು ಎಂಬ ಉದ್ದೇಶದಿಂದ ಹೊಸ ಪ್ರಯತ್ನ ಮಾಡಲಾಗಿದೆ. ಈ ಸಿನಿಮಾದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಕುರಿತ ಕಥೆ ಇದೆ.
- Madan Kumar
- Updated on: Apr 21, 2026
- 10:50 pm