Bollywood
ಭಾರತದ ಸಮೃದ್ಧ ಚಲನಚಿತ್ರೋದ್ಯಮಗಳಲ್ಲಿ ಬಾಲಿವುಡ್ ಕೂಡ ಒಂದು. ಈವರೆಗೆ ಹಲವು ಸೂಪರ್ ಹಿಟ್ ಚಿತ್ರಗಳು ಇಲ್ಲಿ ಸಿದ್ಧಗೊಳ್ಳುತ್ತವೆ. ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಆಗುತ್ತದೆ. 1930ರ ಸಂದರ್ಭದಲ್ಲಿ ಬಾಲಿವುಡ್ ಆರಂಭ ಆಯಿತು. ನಂತರ ಜಾಗತಿಕವಾಗಿ ಅತಿದೊಡ್ಡ ಮತ್ತು ಅತ್ಯಂತ ಪ್ರಭಾವಶಾಲಿ ಚಿತ್ರರಂಗವಾಗಿ ಬೆಳೆಯಿತು. ಬಾಲಿವುಡ್ನಲ್ಲಿ ಈವರೆಗೆ ಎಲ್ಲಾ ರೀತಿಯ ಸಿನಿಮಾಗಳು ಸಿದ್ಧಗೊಂಡಿವೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಐಶ್ವರ್ಯ ರೈ ಮತ್ತು ಅಮಿತಾಭ್ ಬಚ್ಚನ್ ಅವರಂತಹ ಅಪ್ರತಿಮ ನಟರು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಬಾಲಿವುಡ್ನಲ್ಲಿ ರೊಮ್ಯಾಂಟಿಕ್ ಡ್ರಾಮಾದಿಂದ ಹಿಡಿದು ಆ್ಯಕ್ಷನ್ ಪ್ಯಾಕ್ಡ್ ಬ್ಲಾಕ್ಬಸ್ಟರ್ಗಳವರೆಗೆ ವೈವಿಧ್ಯಮಯ ಶ್ರೇಣಿಯ ಚಲನಚಿತ್ರಗಳನ್ನು ನಿರ್ಮಾಣ ಮಾಡಲಾಗುತ್ತದೆ. ಬಾಲಿವುಡ್ನ ಪ್ರಭಾವವು ಮನರಂಜನೆಯನ್ನು ಮೀರಿ ವಿಸ್ತರಿಸಿದೆ.
ಇನ್ನೂ ಹೆಚ್ಚು ಓದಿ‘ಬಿಕಿನಿ, ಒಳಉಡುಪು ಧರಿಸಿ ಸಹೋದರನಿಗೆ ರಾಖಿ ಕಟ್ಟುತ್ತಾರಾ?’: ಕೃತಿ ಸನನ್ ವಿರುದ್ಧ ಕಂಗನಾ ಗರಂ
ಜಾಹೀರಾತಿನಲ್ಲಿ ಕೃತಿ ಸನನ್ ಅವರು ಧರಿಸಿದ ಬಟ್ಟೆ ಬಗ್ಗೆ ಟೀಕೆ ವ್ಯಕ್ತವಾಗಿದೆ. ಸಹೋದರನಿಗೆ ರಾಖಿ ಕಟ್ಟುವಾಗ ಗ್ಲಾಮರಸ್ ಬಟ್ಟೆ ಧರಿಸಿದ್ದಕ್ಕೆ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ನಟಿ ಕಂಗನಾ ರಣಾವತ್ ಕೂಡ ಈ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಅದಕ್ಕೆ ಕೃತಿ ಸನನ್ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕೌತುಕ ಮೂಡಿದೆ.
- Madan Kumar
- Updated on: Aug 24, 2026
- 10:27 pm
‘ಟಾಕ್ಸಿಕ್’ ಸಿನಿಮಾದ ಟಿಕೆಟ್ ಖರೀದಿಸಿದ ಬಾಲಿವುಡ್ ನಿರ್ದೇಶಕ ಸಿದ್ದಾರ್ಥ್ ಆನಂದ್
ಬಾಲಿವುಡ್ನ ಸ್ಟಾರ್ ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು ‘ಟಾಕ್ಸಿಕ್’ ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ. ಮೊದಲ ದಿನದ ಟಿಕೆಟ್ ಖರೀದಿ ಮಾಡಿರುವ ಅವರು ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಆದರೆ ಈ ಮೊದಲು ಅವರು ದಕ್ಷಿಣದ ಸಿನಿಮಾಗಳ ಬಗ್ಗೆ ವ್ಯಂಗ್ಯ ಮಾಡಿದ್ದನ್ನು ನೆಟ್ಟಿಗರು ನೆನಪಿಸಿದ್ದಾರೆ.
- Madan Kumar
- Updated on: Aug 24, 2026
- 6:35 pm
‘ಮಹಾಕಾಳಿ’ ಸಿನಿಮಾದ ಗ್ಲಿಂಪ್ಸ್ ಬಿಡುಗಡೆ; ಶುಕ್ರಾಚಾರ್ಯರ ಪಾತ್ರದಲ್ಲಿ ಅಕ್ಷಯ್ ಖನ್ನಾ
‘ಮಹಾಕಾಳಿ’ ಸಿನಿಮಾದಲ್ಲಿ ಭೂಮಿ ಶೆಟ್ಟಿ, ಅಕ್ಷಯ್ ಖನ್ನಾ, ಶ್ರಿಯಾ ರೆಡ್ಡಿ, ರೋಹಿತ್ ಸರಾಫ್, ಖುಷ್ಬೂ ಸುಂದರ್, ಸಮುದ್ರಖಣಿ, ರಾಕೇಶ್ ಬೇಡಿ, ಜಿತಿನ್ ಗುಲಾಟಿ, ರಜತ್ ಕಪೂರ್, ಮುರಳಿ ಶರ್ಮಾ, ನಾಸರ್, ಬಬ್ಲೂ ಪೃಥ್ವಿರಾಜ್ ಮುಂತಾದವರು ನಟಿಸಿದ್ದಾರೆ. ಈಗ ಬಿಡುಗಡೆ ಆಗಿರುವ ಟೀಸರ್ನಲ್ಲಿ ಅಕ್ಷಯ್ ಖನ್ನಾ ಪಾತ್ರ ಗಮನ ಸೆಳೆದಿದೆ.
- Madan Kumar
- Updated on: Aug 24, 2026
- 4:02 pm
ಬಿಡುಗಡೆಗೂ ಮೊದಲೇ ‘ಧುರಂಧರ್ 2’ ದಾಖಲೆ ಮುರಿದ ‘ಟಾಕ್ಸಿಕ್’ ಸಿನಿಮಾ
‘ಟಾಕ್ಸಿಕ್’ ಬಿಡುಗಡೆಯ ದಿನ ಬಾಕ್ಸ್ ಆಫೀಸ್ನಲ್ಲಿ ಸುನಾಮಿ ಸೃಷ್ಟಿ ಆಗಲಿದೆ. ಅಡ್ವಾನ್ಸ್ ಟಿಕೆಟ್ ಬುಕಿಂಗ್ನಲ್ಲೇ ಅದಕ್ಕೆ ಸೂಚನೆ ಸಿಕ್ಕಿದೆ. ‘ಧುರಂಧರ್ 2’ ಸಿನಿಮಾದ ದಾಖಲೆಯನ್ನು ‘ಟಾಕ್ಸಿಕ್’ ಸಿನಿಮಾ ಮುರಿದಿದೆ. ಈ ಸಿನಿಮಾವನ್ನು ಮೊದಲ ದಿನವೇ ನೋಡಿ ಸಂಭ್ರಮಿಸಲು ‘ರಾಕಿಂಗ್ ಸ್ಟಾರ್’ ಯಶ್ ಅಭಿಮಾನಿಗಳು ಉತ್ಸಕರಾಗಿದ್ದಾರೆ.
- Madan Kumar
- Updated on: Aug 23, 2026
- 3:14 pm
ಮಧುಬಾಲಾ ಪಾತ್ರಕ್ಕೆ ಧುರಂಧರ್ ನಟಿ ಸಾರಾ ಅರ್ಜುನ್ ತಯಾರಿ; ಯಾವಾಗಿಂದ ಶೂಟಿಂಗ್?
‘ಧುರಂಧರ್’ ಹಾಗೂ ‘ಧುರಂಧರ್ 2’ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ನಟಿ ಸಾರಾ ಅರ್ಜುನ್ ಅವರಿಗೆ ದೊಡ್ಡ ಆಫರ್ಗಳು ಬರುತ್ತಿವೆ. ಈಗ ಅವರು ಮಧುಬಾಲಾ ಜೀವನಾಧಾರಿತ ಸಿನಿಮಾಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣ ಮಾಡುತ್ತಿರುವ ಈ ಸಿನಿಮಾದ ಶೂಟಿಂಗ್ ಬಗ್ಗೆ ಲೇಟೆಸ್ಟ್ ಮಾಹಿತಿ ಇಲ್ಲಿದೆ..
- Madan Kumar
- Updated on: Aug 23, 2026
- 8:18 am
ಗೋವಿಂದ 2ನೇ ಮದುವೆ ವದಂತಿ ಸುಳ್ಳು: ಸುನೀತಾ ವಿರುದ್ಧ ನಟನ ಮ್ಯಾನೇಜರ್ ಗರಂ
ನಟ ಗೋವಿಂದ ಹಾಗೂ ಅವರ ಪತ್ನಿ ಸುನೀತಾ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಬಹಿರಂಗ ಆಗಿದೆ. ಈ ನಡುವೆ ಸುನೀತಾ ಅವರು ಗೋವಿಂದ ಮೇಲೆ ಸಾಕಷ್ಟು ಆರೋಪ ಮಾಡುತ್ತಿದ್ದಾರೆ. ಗೋವಿಂದ ಅವರು 2ನೇ ಮದುವೆಗೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎಂದು ಕೂಡ ಸುನೀತಾ ಹೇಳಿದ್ದಾರೆ.
- Madan Kumar
- Updated on: Aug 23, 2026
- 7:14 am
ಲಾಭದಲ್ಲಿ 10 ಪರ್ಸೆಂಟ್ ಪಾಲು, ಕಥೆ ಲೀಕ್ ಆರೋಪ; ವಂಗಾ ಬ್ರದರ್ಸ್ ವಿರುದ್ಧ ನಟಿ ದೀಪಿಕಾ ಗರಂ
'ಸ್ಪಿರಿಟ್' ಸಿನಿಮಾದಿಂದ ಹೊರಬಂದ ವಿಚಾರವಾಗಿ ನಟಿ ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸಹೋದರರ ನಡುವೆ ಶೀತಲ ಸಮರ ಶುರುವಾಗಿದೆ. ಪ್ರಣಯ್ ರೆಡ್ಡಿ ಅವರ ಆರೋಪಗಳಿಗೆ ದೀಪಿಕಾ ಸಾಮಾಜಿಕ ಜಾಲತಾಣದ ಪೋಸ್ಟ್ ಲೈಕ್ ಮಾಡುವ ಮೂಲಕ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
- Rajesh Duggumane
- Updated on: Aug 22, 2026
- 2:46 pm
3ನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಕರೀನಾ, ಸೈಫ್ ಅಲಿ ಖಾನ್? ವಿಡಿಯೋ ವೈರಲ್
ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ದಂಪತಿಗೆ ಈಗಾಗಲೇ ಇಬ್ಬರು ಗಂಡು ಮಕ್ಕಳಿದ್ದಾರೆ. ಈಗ ಅವರು ಮೂರನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರಾ ಎಂಬ ಅನುಮಾನ ಮೂಡಿದೆ. ಅದಕ್ಕೆ ಕಾರಣ ಆಗಿರುವುದು ಒಂದು ವಿಡಿಯೋ. ಕಮೆಂಟ್ ಮೂಲಕ ಫ್ಯಾನ್ಸ್ ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ.
- Madan Kumar
- Updated on: Aug 21, 2026
- 6:39 pm
‘ಡಾನ್ 3’ ವಿವಾದ, ರಣ್ವೀರ್ ಬಿಟ್ಟರು, ತಂದೆ ಬಿಡಲು ತಯಾರಿಲ್ಲ
Ranveer Singh: ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳ ಭರ್ಜರಿ ಯಶಸ್ಸಿನ ಬಳಿಕ ರಣ್ವೀರ್ ಸಿಂಗ್ ಅವರು ಹಠಾತ್ತನೆ ಫರ್ಹಾನ್ ಅಖ್ತರ್ ನಿರ್ದೇಶಿಸಿ, ನಿರ್ಮಾಣ ಮಾಡಲಿದ್ದ ‘ಡಾನ್ 3’ ಸಿನಿಮಾದಿಂದ ಹೊರ ಬಂದರು. ಇದರಿಂದ ಸಿಟ್ಟಾದ ಫರ್ಹಾನ್ ಅಖ್ತರ್ ಪ್ರಕರಣವನ್ನು ಸಿನಿಮಾ ಕಾರ್ಮಿಕರ ಸಂಘಕ್ಕೆ ತೆಗೆದುಕೊಂಡು ಹೋದರು. 45 ಕೋಟಿ ನಷ್ಟ ಪರಿಹಾರ ನೀಡಬೇಕೆಂದರು. ಇದೀಗ ರಣ್ವೀರ್ ಅವರ ತಂದೆ ಈ ವಿಷಯವಾಗಿ ಮಗನ ಪರವಾಗಿ ಹೋರಾಡುತ್ತಿದ್ದಾರೆ.
- Manjunatha C
- Updated on: Aug 21, 2026
- 2:23 pm
‘ಸ್ಪಿರಿಟ್’ ಸಿನಿಮಾದಿಂದ ದೀಪಿಕಾ ಪಡುಕೋಣೆ ಹೊರ ನಡೆದಿದ್ದಕ್ಕೆ ಕೊನೆಗೂ ಅಸಲಿ ಕಾರಣ ಬಯಲು
ಪ್ರಭಾಸ್ ಅಭಿನಯದ 'ಸ್ಪಿರಿಟ್' ಸಿನಿಮಾದಿಂದ ನಟಿ ದೀಪಿಕಾ ಪಡುಕೋಣೆ ಹೊರಬಿದ್ದಿದ್ದಾರೆ. ಅಧಿಕ ಸಂಭಾವನೆ ಮತ್ತು ಶೇಕಡಾ 10 ಲಾಭದ ಪಾಲಿನ ಬೇಡಿಕೆಯೇ ಇದಕ್ಕೆ ಮುಖ್ಯ ಕಾರಣ. ನಿರ್ದೇಶಕ ಸಂದೀಪ್ ವಂಗಾ ಈಗ ತೃಪ್ತಿ ದಿಮ್ರಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದು, ಹೊಸ ಜೋಡಿ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
- Rajesh Duggumane
- Updated on: Aug 21, 2026
- 7:36 am
ವಿಚ್ಛೇದನಕ್ಕೆ ಅರ್ಜಿ ಹಾಕಿ, ನಂತರ ವಾಪಸ್ ಪಡೆದ ಗೋವಿಂದ ಪತ್ನಿ ಸುನೀತಾ ಅಹುಜಾ
ಹೊಸ ನಟಿ ಕೋಮಲ್ ರಾಣಿ ಜೊತೆ ನಟ ಗೋವಿಂದ ಅವರು ಸುತ್ತಾಡುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಗೋವಿಂದ ಮತ್ತು ಅವರ ಪತ್ನಿ ಸುನೀತಾ ಅಹುಜಾ ನಡುವೆ ಜಗಳ ಶುರುವಾಗಿದೆ. ಸುನೀತಾ ಅವರು ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದರಾದರೂ, ಇದೀಗ ವಿಚ್ಛೇದನ ಅರ್ಜಿಯನ್ನು ಹಿಂಪಡೆದುಕೊಂಡಿದ್ದಾರೆ.
- Madan Kumar
- Updated on: Aug 20, 2026
- 3:37 pm
ತೆಲುಗು ಚಿತ್ರರಂಗದ ಬಗ್ಗೆ ವ್ಯಂಗ್ಯ ಮಾಡಿದ ಬಾಲಿವುಡ್ ನಿರ್ದೇಶಕ
Telugu Movie Industry: ತೆಲುಗು ಚಿತ್ರರಂಗದ ಈ ಅದ್ಭುತ ಪ್ರಗತಿ ಕೆಲವು ಬಾಲಿವುಡ್ ನಿರ್ದೇಶಕರ ಕಣ್ಣು ಕುಕ್ಕಿದೆ. ಅದರಲ್ಲೂ ಹಿಂದಿ ಬಾಹುಳ್ಯವಿರು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಈಗ ತೆಲುಗು ಸಿನೆಮಾದ ಪ್ರಭಾವ ಹೆಚ್ಚಾಗುತ್ತಿರುವುದು ಅವರ ಅಸಹನೆಗೆ ಕಾರಣವಾಗಿದೆ. ಇದರಿಂದಾಗಿ ಕೆಲವು ನಿರ್ದೇಶಕರು ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಪರೋಕ್ಷವಾಗಿ ವ್ಯಂಗ್ಯವಾಡುತ್ತಿರುತ್ತಾರೆ.
- Manjunatha C
- Updated on: Aug 20, 2026
- 2:03 pm