Bollywood
ಭಾರತದ ಸಮೃದ್ಧ ಚಲನಚಿತ್ರೋದ್ಯಮಗಳಲ್ಲಿ ಬಾಲಿವುಡ್ ಕೂಡ ಒಂದು. ಈವರೆಗೆ ಹಲವು ಸೂಪರ್ ಹಿಟ್ ಚಿತ್ರಗಳು ಇಲ್ಲಿ ಸಿದ್ಧಗೊಳ್ಳುತ್ತವೆ. ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಆಗುತ್ತದೆ. 1930ರ ಸಂದರ್ಭದಲ್ಲಿ ಬಾಲಿವುಡ್ ಆರಂಭ ಆಯಿತು. ನಂತರ ಜಾಗತಿಕವಾಗಿ ಅತಿದೊಡ್ಡ ಮತ್ತು ಅತ್ಯಂತ ಪ್ರಭಾವಶಾಲಿ ಚಿತ್ರರಂಗವಾಗಿ ಬೆಳೆಯಿತು. ಬಾಲಿವುಡ್ನಲ್ಲಿ ಈವರೆಗೆ ಎಲ್ಲಾ ರೀತಿಯ ಸಿನಿಮಾಗಳು ಸಿದ್ಧಗೊಂಡಿವೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಐಶ್ವರ್ಯ ರೈ ಮತ್ತು ಅಮಿತಾಭ್ ಬಚ್ಚನ್ ಅವರಂತಹ ಅಪ್ರತಿಮ ನಟರು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಬಾಲಿವುಡ್ನಲ್ಲಿ ರೊಮ್ಯಾಂಟಿಕ್ ಡ್ರಾಮಾದಿಂದ ಹಿಡಿದು ಆ್ಯಕ್ಷನ್ ಪ್ಯಾಕ್ಡ್ ಬ್ಲಾಕ್ಬಸ್ಟರ್ಗಳವರೆಗೆ ವೈವಿಧ್ಯಮಯ ಶ್ರೇಣಿಯ ಚಲನಚಿತ್ರಗಳನ್ನು ನಿರ್ಮಾಣ ಮಾಡಲಾಗುತ್ತದೆ. ಬಾಲಿವುಡ್ನ ಪ್ರಭಾವವು ಮನರಂಜನೆಯನ್ನು ಮೀರಿ ವಿಸ್ತರಿಸಿದೆ.
‘ಬ್ಯಾಟಲ್ ಆಫ್ ಗಲ್ವಾನ್’ ಶೀರ್ಷಿಕೆ ಬದಲು: ಸಲ್ಮಾನ್ ಖಾನ್ ಚಿತ್ರಕ್ಕೆ ಈಗ ‘ಮಾತೃಭೂಮಿ’ ಟೈಟಲ್
ಸಲ್ಮಾನ್ ಖಾನ್ ನಟನೆಯ ‘ಬ್ಯಾಟಲ್ ಆಫ್ ಗಲ್ವಾನ್’ ಚಿತ್ರದ ಶೀರ್ಷಿಕೆಯನ್ನು ಏಕಾಏಕಿ ಬದಲಾಯಿಸಲಾಗಿದೆ. ಈ ಚಿತ್ರಕ್ಕೆ ‘ಮಾತೃಭೂಮಿ’ ಎಂದು ಹೆಸರು ಇಡಲಾಗಿದೆ. ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಹೆಸರು ಬದಲಾವಣೆ ಮಾತ್ರವಲ್ಲದೇ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆಯೂ ಜನರಿಗೆ ಗೊಂದಲ ಹೆಚ್ಚಾಗಿದೆ.
- Madan Kumar
- Updated on: Mar 16, 2026
- 3:41 pm
ಹಣೆಗೆ ಗುಂಡಿಟ್ಟು ಸಾಯಿಸುತ್ತೇವೆ: ಗಾಯಕ ಬಾದ್ಶಾಗೆ ಬಿಷ್ಣೋಯ್ ಗ್ಯಾಂಗ್ನಿಂದ ಬೆದರಿಕೆ
ಅಸಭ್ಯ ಸಾಹಿತ್ಯದ ‘ಟಟೀರಿ’ ಹಾಡಿನ ಕಾರಣದಿಂದ ಗಾಯಕ ಬಾದ್ಶಾಗೆ ತೀವ್ರ ಸಂಕಷ್ಟ ಶುರುವಾಗಿದೆ. ಒಂದೆಡೆ ಅವರಿಗೆ ಬಂಧನದ ಭೀತಿ ಇದೆ. ಇನ್ನೊಂದೆಡೆ ಕೊಲೆ ಬೆದರಿಕೆ ಹಾಕಲಾಗಿದೆ. ಲಾರೆಯ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯರಿಂದ ಬಾದ್ಶಾಗೆ ಕೊಲೆ ಬೆದರಿಗೆ ಬಂದಿದೆ ಎನ್ನಲಾಗಿದೆ. ಆ ಬಗ್ಗೆ ಇಲ್ಲಿದೆ ವಿವರ..
- Madan Kumar
- Updated on: Mar 15, 2026
- 2:31 pm
‘ಲಗಾನ್’ ಶೂಟಿಂಗ್ ವೇಳೆ ಪ್ರತಿ ದಿನ ಗಾಯತ್ರಿ ಮಂತ್ರ ಕೇಳುತ್ತಿದ್ದ ಆಮಿರ್ ಖಾನ್
‘ಲಗಾನ್’ ಸಿನಿಮಾದ ಶೂಟಿಂಗ್ ಸಮಯವನ್ನು ನಟ ಆಮಿರ್ ಖಾನ್ ಅವರು ಈಗ ನೆನಪಿಸಿಕೊಂಡಿದ್ದಾರೆ. ಪ್ರತಿ ದಿನ ಚಿತ್ರೀಕರಣಕ್ಕೆ ಹೋಗುವಾಗ ಇಂಗ್ಲಿಷ್ ಹಾಡುಗಳ ಬದಲಿಗೆ ಗಾಯತ್ರಿ ಮಂತ್ರ ಕೇಳುತ್ತಿದ್ದರು. ಅದರಿಂದಾಗಿ ಕೆಲಸದ ಮೇಲೆ ಏಕಾಗ್ರತೆ ಬರುತ್ತಿತ್ತು ಎಂದು ಆಮಿರ್ ಖಾನ್ ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..
- Madan Kumar
- Updated on: Mar 15, 2026
- 2:38 pm
‘ಸತ್ಯ’, ‘ಕಂಪನಿ’ ಸಿನಿಮಾ ಸೇರಿಸಿ ‘ಧುರಂಧರ್’ ಮಾಡಿದ ಆದಿತ್ಯ ಧಾರ್: ವಿಷಯ ಬಯಲು
‘ಧುರಂಧರ್’ ಸಿನಿಮಾದ ಕಥೆ ಹೇಗೆ ಸಿದ್ಧವಾಯ್ತು ಎಂಬ ಬಗ್ಗೆ ರಾಮ್ ಗೋಪಾಲ್ ವರ್ಮಾ ಬಾಯಿಬಿಟ್ಟಿದ್ದಾರೆ. ನಿರ್ದೇಶಕ ಆದಿತ್ಯ ಧಾರ್ ತಮಗೆ ಹೇಳಿದ ವಿಷಯವನ್ನು ಈಗ ಆರ್ಜಿವಿ ಬಹಿರಂಗ ಪಡಿಸಿದ್ದಾರೆ. ಆರ್ಜಿವಿ ನಿರ್ದೇಶಿಸಿದ್ದ 2 ಸಿನಿಮಾಗಳನ್ನು ಸೇರಿಸಿ ‘ಧುರಂಧರ್’ ಮಾಡಲಾಯ್ತು ಎಂಬುದು ಗೊತ್ತಾಗಿದೆ.
- Madan Kumar
- Updated on: Mar 15, 2026
- 11:04 am
ಆರ್. ಮಾಧವನ್ ಹೆಸರಲ್ಲಿ ಮೋಸ: ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ ‘ಧುರಂಧರ್’ ನಟ
ಅಭಿಮಾನಿಗಳಿಗೆ ಮತ್ತು ಸೋಶಿಯಲ್ ಮೀಡಿಯಾ ಬಳಕೆದಾರರಿಗಾಗಿ ನಟ ಆರ್. ಮಾಧವನ್ ಎಚ್ಚರಿಕೆಯನ್ನು ನೀಡಿದ್ದಾರೆ. ತಮ್ಮ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಯ ಬಗ್ಗೆ ಅವರು ಪೋಸ್ಟ್ ಹಂಚಿಕೊಂಡು ಎಲ್ಲರನ್ನೂ ಎಚ್ಚರಿಸಿದ್ದಾರೆ. ನಕಲಿ ಖಾತೆ ಸೃಷ್ಟಿಸಿದ ವ್ಯಕ್ತಿ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
- Madan Kumar
- Updated on: Mar 15, 2026
- 7:20 am
ಆ ಒಂದು ವಿಷಯದ ಬಗ್ಗೆ ಕಂಪ್ಲೇಂಟ್ ಮಾಡಿದ ದೀಪಿಕಾ ಪಡುಕೋಣೆ
ನಟಿ ದೀಪಿಕಾ ಪಡುಕೋಣೆ ಮುಂಬೈನಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಮುಂಬೈನ ಕಳಪೆ AQI ಗುಣಮಟ್ಟವನ್ನು ಹಂಚಿಕೊಂಡ ಅವರು, ಬಿಎಂಸಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. "ಈ ನಗರ ಮತ್ತು ಇಲ್ಲಿನ ಜನರು ಉಸಿರುಗಟ್ಟುತ್ತಿದ್ದಾರೆ, ಇದು ಹೇಗೆ ಸರಿಯಾಗಬಹುದು?" ಎಂದು ಪ್ರಶ್ನಿಸಿದ್ದಾರೆ.
- Shreelaxmi H
- Updated on: Mar 14, 2026
- 7:41 am
ಹಮ್ಜಾ ಅಲಿ ಮಜಾರಿಯನ್ನು ಸಾಯಿಸೋದು ಈ ವ್ಯಕ್ತಿ? ಇದೆ ದೊಡ್ಡ ಟ್ವಿಸ್ಟ್
ಧುರಂಧರ್ 2 ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಅಡ್ವಾನ್ಸ್ ಬುಕಿಂಗ್ ಭರ್ಜರಿಯಾಗಿದೆ. ಇದರ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಚಿತ್ರದ ಕಥೆಯ ಬಗ್ಗೆ ಹಲವು ಥಿಯರಿಗಳು ಹರಿದಾಡುತ್ತಿವೆ. ಸಾರಾ ಅರ್ಜುನ್ (ಯಲಿನಾ ಜಮಾಲಿ) ರಣವೀರ್ ಸಿಂಗ್ (ಹಮ್ಜಾ ಅಲಿ) ಅವರನ್ನು ಹತ್ಯೆ ಮಾಡಲಿದ್ದಾರೆ ಎಂಬುದು ಪ್ರಮುಖ ಚರ್ಚೆ.
- Rajesh Duggumane
- Updated on: Mar 14, 2026
- 7:29 am
ಪೂರ್ಣ ಪ್ರಮಾಣದಲ್ಲಿ ‘ಧುರಂಧರ್ 2’ ಟಿಕೆಟ್ ಬುಕಿಂಗ್ ವಿಳಂಬ: ಹಲವು ಕಾರಣ
ಮಾರ್ಚ್ 19ರಂದು ‘ಧುರಂಧರ್ 2’ ಬಿಡುಗಡೆ ಆಗಲಿದೆ. ಮಾರ್ಚ್ 18ರ ಸಂಜೆ ಪೇಯ್ಡ್ ಪ್ರೀಮಿಯರ್ ನಡೆಯಲಿದೆ. ಮಾ.19ರ ಟಿಕೆಟ್ ಬುಕಿಂಗ್ ಆರಂಭ ಆಗುವುದು ಬಾಕಿ ಇದೆ. ಈ ವಿಳಂಬಕ್ಕೆ ಕೆಲವು ಕಾರಣಗಳಿವೆ ಎನ್ನಲಾಗಿದೆ. ಕೇವಲ ಪೇಯ್ಡ್ ಪ್ರೀವ್ಯೂ ಶೋಗಳಿಗೆ ಮಾತ್ರ ಬುಕಿಂಗ್ ಆರಂಭ ಆಗಿರುವುದರಿಂದ ಟಿಕೆಟ್ ಬೆಲೆ ಗಗನಕ್ಕೆ ಏರಿದೆ.
- Madan Kumar
- Updated on: Mar 13, 2026
- 9:03 pm
ಸಾಯಿ ಪಲ್ಲವಿ ಕೈತಪ್ಪಿದ ಮಧುಬಾಲಾ ಬಯೋಪಿಕ್ ಅವಕಾಶ: ಕಾರಣ ಏನು?
ನಟಿ ಸಾಯಿ ಪಲ್ಲವಿ ಅವರು ಯಾವ ಪಾತ್ರ ಕೊಟ್ಟರೂ ಅತ್ಯುತ್ತಮವಾಗಿ ನಿಭಾಯಿಸುತ್ತಾರೆ. ಅವರನ್ನು ಮಧುಬಾಲಾ ಬಯೋಪಿಕ್ಗೆ ಆಯ್ಕೆ ಮಾಡಬೇಕು ಎಂಬ ಮಾತುಕತೆ ನಡೆದಿತ್ತು ಎನ್ನಲಾಗಿದೆ. ಆದರೆ ಕಾರಣಾಂತರಗಳಿಂದ ಅವರನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ ಎಂಬ ಸುದ್ದಿ ಕೇಳಿಬಂದಿದೆ. ಆ ಕುರಿತು ಇಲ್ಲಿದೆ ವಿವರ..
- Madan Kumar
- Updated on: Mar 13, 2026
- 7:22 pm
ಅಡ್ವಾನ್ಸ್ ಬುಕಿಂಗ್ನಿಂದ 60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ‘ಧುರಂಧರ್ 2’; ಹೊಸ ದಾಖಲೆ
ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾ ಮಾರ್ಚ್ 19ಕ್ಕೆ ತೆರೆಗೆ ಬರಲಿದ್ದು, ಮಾರ್ಚ್ 18ರ ಪ್ರೀಮಿಯರ್ ಶೋಗಳ ಅಡ್ವಾನ್ಸ್ ಬುಕಿಂಗ್ ದಾಖಲೆ ಬರೆದಿದೆ. ವಿಶ್ವಾದ್ಯಂತ 60 ಕೋಟಿ ರೂ. ಹಾಗೂ ಭಾರತದಲ್ಲಿ 24.4 ಕೋಟಿ ರೂ. ಗಳಿಕೆ ಕಂಡಿದೆ. ಪವನ್ ಕಲ್ಯಾಣ್ 'ಒಜಿ' ದಾಖಲೆ ಮುರಿಯುವ ಸನಿಹದಲ್ಲಿದೆ.
- Rajesh Duggumane
- Updated on: Mar 13, 2026
- 1:10 pm
ಸಾವಿರ ಪರದೆಗಳಲ್ಲಿ ಶತದಿನೋತ್ಸವ ಆಚರಿಸಿಕೊಳ್ಳುತ್ತಿದೆ ‘ಧುರಂಧರ್’ ಸಿನಿಮಾ
ಕೋವಿಡ್ ನಂತರ 100 ದಿನ ಪೂರೈಸಿದ ಏಕೈಕ ಚಿತ್ರ 'ಧುರಂಧರ್' ಹೊಸ ದಾಖಲೆ ಬರೆದಿದೆ. ಥಿಯೇಟರ್ಗಳಲ್ಲಿ ಯಶಸ್ವಿ ಪ್ರದರ್ಶನ ಮುಂದುವರೆಸಿರುವ ಇದರ ಸೀಕ್ವೆಲ್ 'ಧುರಂಧರ್ 2' ಇದೇ ಮಾರ್ಚ್ 19ಕ್ಕೆ ತೆರೆ ಕಾಣಲಿದೆ. ಮೊದಲ ಭಾಗ ಒಟಿಟಿಯಲ್ಲಿದ್ದರೂ ಥಿಯೇಟರ್ಗಳಲ್ಲಿ ಶತದಿನೋತ್ಸವ ಆಚರಿಸಿ, ಸೀಕ್ವೆಲ್ ಜೊತೆಗೇ ಪ್ರದರ್ಶನಗೊಳ್ಳುತ್ತಿರುವುದು ಒಂದು ಅಪರೂಪದ ವಿದ್ಯಮಾನ.
- Rajesh Duggumane
- Updated on: Mar 13, 2026
- 11:56 am
66ನೇ ವರ್ಷಕ್ಕೆ ಪ್ರೆಗ್ನೆಂಟ್ ಆದ ನೀನಾ ಗುಪ್ತಾ? ಖುಷಿಯಾಗುತ್ತಿದೆ ಎಂದ ನಟಿ
ನೀನಾ ಗುಪ್ತಾ ಪ್ರೆಗ್ನೆಂಟ್ ಎಂಬ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಸೀರೆ ದಪ್ಪವಾಗಿದ್ದ ಕಾರಣ ಹೊಟ್ಟೆ ದಪ್ಪವಾಗಿ ಕಾಣಿಸಿದೆ ಹೊರತು, ಯಾವುದೇ ಖುಷಿ ಸುದ್ದಿ ಇಲ್ಲ ಎಂದಿದ್ದಾರೆ. ಈ ವಯಸ್ಸಿನಲ್ಲಿ ಇಂತಹ ವದಂತಿ ಕೇಳಿ ಖುಷಿಯಾಗಿದೆ ಎಂದು ತಮಾಷೆ ಮಾಡಿದ್ದಾರೆ. ವಿವಾಹವಿಲ್ಲದೆ ಮಗು ಸಾಕಿದ ಅವರ ಹಿಂದಿನ ಜೀವನ ಅನೇಕರಿಗೆ ಸ್ಫೂರ್ತಿ.
- Rajesh Duggumane
- Updated on: Mar 13, 2026
- 7:02 am