ದರ್ಶನ್ ಹೊರಗೆ ಬಂದ್ರೆ ನಮಗೆ ಖುಷಿ; ತಪ್ಪು ಮಾಡಿದ್ದರೆ ಕಾನೂನು ಕ್ರಮ ಆಗಲಿ: ಗುರು ಕಿರಣ್

| Updated By: ಮದನ್​ ಕುಮಾರ್​

Updated on: Sep 20, 2024 | 6:45 PM

ನಟ ದರ್ಶನ್​ ಕೇಸ್​ ಬಗ್ಗೆ ಈಗಾಗಲೇ ಚಿತ್ರರಂಗದ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಈಗ ಸಂಗೀತ ನಿರ್ದೇಶಕ ಗುರು ಕಿರಣ್​ ಕೂಡ ಮಾತನಾಡಿದ್ದಾರೆ. ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು. ‘ದರ್ಶನ್​ ಪ್ರಕರಣ ವೈಯಕ್ತಿಕ. ಅದಕ್ಕೂ ಸಿನಿಮಾ ರಂಗಕ್ಕೂ ಸಂಬಂಧ ಇಲ್ಲ’ ಎಂದು ಗುರು ಕಿರಣ್​ ಹೇಳಿದ್ದಾರೆ.

ಚಿತ್ರರಂಗದಲ್ಲಿ ದರ್ಶನ್​ ಮತ್ತು ಗುರು ಕಿರಣ್​ ಜೊತೆಯಾಗಿ ಕೆಲಸ ಮಾಡಿದವರು. ಆ ಹಿನ್ನೆಲೆಯಲ್ಲಿ ಗುರು ಕಿರಣ್​ ಅವರು ದರ್ಶನ್​ ಕುರಿತು ಪ್ರತಿಕ್ರಿಯಿಸಿದ್ದಾರೆ. ‘ಸ್ನೇಹಿತನಾಗಿ ದರ್ಶನ್​ ಹೊರಗೆ ಬರಬೇಕು ಅಂತ ನಾವು ಹೇಳುತ್ತೇವೆ. ಆದರೆ ಕಾನೂನಿಗೆ ಅದರದ್ದೇ ಆದ ಪ್ರಕ್ರಿಯೆ ಇದೆ. ಪೊಲೀಸ್​ನವರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ. ದರ್ಶನ್ ತಪ್ಪು ಮಾಡಿದ್ದರೆ ಕಾನೂನು ಕ್ರಮ ಆಗಲಿ’ ಎಂದಿದ್ದಾರೆ ಗುರು ಕಿರಣ್​.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:44 pm, Fri, 20 September 24

Follow us on