Karnataka Budget Session; ಅತ್ಯಾಚಾರದ ಸುಳ್ಳು ಆರೋಪ ಹೊರೆಸಿ ನನ್ನ ಬದುಕನ್ನೇ ಹಾಳು ಮಾಡಲಾಯಿತು: ಮುನಿರತ್ನ

Updated on: Mar 20, 2025 | 5:58 PM

ನೀವು ಯಾರ ಮೇಲೆ ಆಪಾದನೆ ಮಾಡುತ್ತಿದ್ದೀರಿ, ಅದನ್ನಾದರೂ ಹೇಳಿ ಅಂತ ಬಾಲಕೃಷ್ಣ ಹೇಳುತ್ತಾರೆ. ಮುನಿರತ್ನ ಮುಂದೆ ಕೂತಿದ್ದ ಸುನೀಲ ಕುಮಾರ್ ಸುಮ್ಮನಿರಿ ಅಂತ ಸನ್ನೆ ಮಾಡಿದರೂ ಆರ್ ಆರ್ ನಗರ ಶಾಸಕ ಸುಮ್ಮನಾಗಲ್ಲ. ನೀವು ಹೇಳುತ್ತಿರುವ ಪ್ರಕರಣ ನ್ಯಾಯಾಲಯಲ್ಲಿದೆ, ಮಾತಾಡುವುದು ಸರಿಯಲ್ಲ ಎಂದು ಖಾದರ್ ಮತ್ತು ಬಾಲಕೃಷ್ಣ ಹೇಳುತ್ತಾರೆ.

ಬೆಂಗಳೂರು, ಮಾರ್ಚ್ 20: ಹನಿ ಟ್ರ್ಯಾಪಿಂಗ್ ವಿಷಯದಲ್ಲಿ ಇಂದು ಸದನದಲ್ಲಿ ಚರ್ಚೆ ನಡೆಯುತ್ತಿದ್ದಾಗ ರೊಚ್ಚಿಗೆದ್ದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು, ರೋಷಾವೇಷದಿಂದ ಕೂಗಾಡಿದರು. ಐದು ವರ್ಷದ ಹಿಂದೆ ತನ್ನನ್ನು ಸುಳ್ಳು ಅತ್ಯಾಚಾರದ ಅರೋಪದಲ್ಲಿ ಸಿಕ್ಕಿಸಿ ಬದುಕನ್ನೇ ಹಾಳು ಮಾಡಲಾಯಿತು ಅಂತ ಹೇಳುತ್ತಾ ಮುಂದೆ ಏನೇನೋ ಹೇಳುತ್ತಾರೆ. ಅದರೆ ಸ್ಪೀಕರ್ ಯುಟಿ ಖಾದರ್, ಶಾಸಕರಾದ ಹೆಚ್ ಸಿ ಬಾಲಕೃಷ್ಣ ಮತ್ತು ಮಂಜುನಾಥ್ ಒಟ್ಟಿಗೆ ಮಾತಾಡುತ್ತಿದ್ದರಿಂದ ಮುನಿರತ್ನ ಹೇಳೋದು ಕೇಳಿಸಲ್ಲ. ನೀವು ಕೂತ್ಕೊಳ್ಳಿ ಅಂತ ಸ್ಪೀಕರ್ ಹೇಳಿದರೂ, ಹೆಚ್ ಡಿ ರೇವಣ್ಣನನ್ನು ಬದುಕನ್ನು ಹಾಳು ಮಾಡಿದರು, ಅವರ ಮಗನನ್ನ ಜೈಲಿಗೆ ಹಾಕಿಸಿದರು ಎಂದ ಮುನಿರತ್ನ ಹೇಳುವುದು ಕೇಳಿಸುತ್ತದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಶಿವಕುಮಾರ್ ಮುಖವಾಡ ಧರಿಸಿದ್ದ ವ್ಯಕ್ತಿಗೆ ಕೈಮುಗಿದು ಸ್ವಾಮಿ ನನ್ನನ್ನು ಜೈಲಿಗೆ ಕಳಿಸ್ಬೇಡಿ ಎಂದ ಶಾಸಕ ಮುನಿರತ್ನ

Published on: Mar 20, 2025 05:49 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More