ಯದುವೀರ್ ದಂಪತಿಗೆ ಹುಟ್ಟಿರುವ ಎರಡನೇ ಮಗುವಿನ ಹೆಸರು ಯುಗಾಧ್ಯಕ್ಷ್ ಕೃಷ್ಣರಾಜ್ ಒಡೆಯರ್

ಅರುಣ್​ ಕುಮಾರ್​ ಬೆಳ್ಳಿ

Updated on: Feb 26, 2025 | 10:27 AM

ನಾಡಿನ ಸಮಸ್ತ ಕನ್ನಡಗರಿಗೆ ಯದುವೀರ್ ಕೃಷ್ಣದತ್ತ ಒಡೆಯರ್ ಮಹಾಶಿವರಾತ್ರಿಯ ಶುಭಾಷಯಗಳನ್ನು ತಿಳಿಸುವ ಮೊದಲು ಮೈಸೂರಿನಲ್ಲಿರುವ ತ್ರಿನೇಶ್ವರ ದೇವಸ್ಥಾನಕ್ಕೆ ಕುಟುಂಬಸಮೇತ ತೆರಳಿ ಪೂಜೆ ಸಲ್ಲಿಸಿದರು. ಇವತ್ತು ಸಾಯಂಕಾಲ ಅರಮನೆ ಆವರಣದಲ್ಲಿ ಪರಶಿವನ ಪೂಜೆ ನಡೆಯಲಿದೆ ಮತ್ತು ಮಧ್ಯಾಹ್ನದ ಸಮಯದಲ್ಲಿ ನಗರದಲ್ಲಿರುವ ದೇವಸ್ಥಾನಗಳು ತನ್ನನ್ನು ಆಹ್ವಾನಿಸಿದರೆ ಹೋಗಿ ಪೂಜೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಯದುವೀರ್ ಹೇಳಿದರು.

ಮೈಸೂರು: ಹಿಂದಿನ ಮೈಸೂರು ಒಡೆಯರ್ ಸಂಸ್ಥಾನದ ಪ್ರತಿನಿಧಿಯಾಗಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಎರಡನೇ ಮಗುವಾಗಿರುವ ಮತ್ತು ಮಗುವಿನ ನಾಮಕರಣ ಸಮಾರಂಭವೂ ನಡೆದಿರುವ ಸಂಗತಿ ಬಹಳಷ್ಟು ಕನ್ನಡಿಗರಿಗೆ ಗೊತ್ತಿರಲಾರದು. ಖುದ್ದು ಯದುವೀರ್ ಅವರೇ ಮಗುವಿನ ನಾಮಕರಣದ ನಡೆದ ಸಂಗತಿಯನ್ನು ಮಹಾಶಿವರಾತ್ರಿಯ ಶುಭದಿನವಾಗಿರುವ ಇಂದು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದರು. ಮಗುವಿಗೆ ಯುಗಾಧ್ಯಕ್ಷ್ ಕೃಷ್ಣರಾಜ್ ಒಡೆಯರ್ ಅಂತ ಹೆಸರಿಡಲಾಗಿದೆ ಎಂದು ಮೈಸೂರಿನ ಸಂಸದರೂ ಆಗಿರುವ ಯದುವೀರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಮಹಾಶಿವರಾತ್ರಿ: ಬೆಂಗಳೂರಿನ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ 

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.