![Maha Shivratri](https://images.tv9kannada.com/wp-content/uploads/2024/02/national-lifestyle-health-world-viral-news-in-tv9-kannada-2024-02-29t183611.267.jpg)
Maha Shivratri
ಮಹಾಶಿವರಾತ್ರಿ ಹಿಂದೂಗಳ ಪವಿತ್ರವಾದ ಹಬ್ಬಗಳಲ್ಲಿ ಒಂದು. ಇದು ಬಹಳ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ದೇಶದಾದ್ಯಂತ ಶಿವನನ್ನು ಆರಾಧಿಸುವವರು ಮಹಾ ಶಿವರಾತ್ರಿಯನ್ನು ಅತ್ಯಂತ ಶ್ರದ್ಧಾ- ಭಕ್ತಿಯಿಂದ ಆಚರಿಸುತ್ತಾರೆ. ಶಿವರಾತ್ರಿಯ ಹಿಂದಿನ ದಿನ ರಾತ್ರಿಯಿಂದಲೇ ಭಜನೆ, ಜಾಗರಣೆ, ಉಪವಾಸಗಳನ್ನು ಮಾಡಲಾಗುತ್ತದೆ. ಶಿವರಾತ್ರಿಯಂದು ಶಿವ ಪೂಜೆಯನ್ನು ಮಾಡುವ ಮೂಲಕ, ಶಿವನಿಗೆ ಪ್ರಿಯವಾದ ತುಳಸಿ, ಬಿಲ್ವಪತ್ರೆಯನ್ನು ಅರ್ಪಿಸುವ ಮೂಲಕ, ತಂಬಿಟ್ಟಿನ ನೈವೇದ್ಯ ಮಾಡುವ ಮೂಲಕ ಈ ಹಬ್ಬವನ್ನು ಆಚರಿಸಲಾಗುತ್ತದೆ. ಬೇರೆಲ್ಲ ಹಬ್ಬಗಳಲ್ಲಿ ಹಗಲಿನ ವೇಳೆ ದೇವರಿಗೆ ಪೂಜೆ ಮಾಡಿದರೆ ಶಿವರಾತ್ರಿಯಲ್ಲಿ ಶಿವನಿಗೆ ರಾತ್ರಿ ಪೂಜೆ ಮಾಡುವುದೇ ದೊಡ್ಡ ವಿಶೇಷ. ಶಿವರಾತ್ರಿಯ ಮಹತ್ವದ ಬಗ್ಗೆ ಹಲವು ದಂತಕತೆಗಳಿವೆ. ಶಿವನು ಪಾರ್ವತಿಯನ್ನು ಮದುವೆಯಾದ ದಿನ ಶಿವರಾತ್ರಿಯೆಂದು ಕೆಲವು ಕತೆಗಳು ಹೇಳುತ್ತವೆ. ದೇವತೆಗಳು ಮತ್ತು ಅಸುರರ ನಡುವೆ ಸಮುದ್ರ ಮಂಥನ ನಡೆದಾಗ ಉದ್ಭವವಾದ ವಿಷವನ್ನು ಶಿವ ಕುಡಿದು ನೀಲಕಂಠನಾದ ದಿನ ಶಿವರಾತ್ರಿಯೆಂದು ಇನ್ನು ಕೆಲವು ಕತೆಗಳು ಹೇಳುತ್ತವೆ. ಶಿವನ ಜಟೆಯಿಂದ ಗಂಗೆ ಭೂಮಿಗೆ ಬಂದಿದ್ದು ಇದೇ ದಿನ ಎಂಬುದು ಇನ್ನೊಂದು ಕತೆ. ಶಿವನು ಲಿಂಗ ರೂಪ ತಾಳಿ ನಿಶ್ಚಲನಾದ ದಿನವೇ ಶಿವರಾತ್ರಿ ಎಂಬುದು ಬಹುತೇಕರ ನಂಬಿಕೆ.
ಮಹಾ ಶಿವರಾತ್ರಿ: ಹರಿಹರದ ಮಲೆಬೆನ್ನೂರಿನಲ್ಲಿ 108 ಶಿವಲಿಂಗಗಳ ಶಾಂತಿ ಯಾತ್ರೆ
108 ಶಿವಲಿಂಗಗಳನ್ನು ಹೊತ್ತ ವಾಹನಗಳು ಗ್ರಾಮಗಳಲ್ಲಿ ಸಂಚರ ಮಾಡಿವೆ. ಹೆಲಿಕಾಪ್ಟರ್ ಮೂಲಕ 108 ಶಿವಲಿಂಗಗಳಿಗೆ ಭಕ್ತರು ಹೂವಿನ ಮಳೆ ಸುರಿಸಿದ್ದಾರೆ. ಅಲ್ಲದೆ ಅಗಸದಿಂದ ಈಶ್ವರನ ಸಂದೇಶ ಕರಪತ್ರ ವಿತರಣೆ ಮಾಡಲಾಗಿದೆ. ನೂರಾರು ವಾಹನಗಳು ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು. ದೇಶದ ಎಲ್ಲಾ ಕಡೆಗಳಲ್ಲಿ ಇರುವ 108 ಶಿವಲಿಂಗಗಳ ಮಾದರಿಗಳನ್ನು ಮಾಡಲಾಗಿದೆ.
- Basavaraj Doddamani
- Updated on: Mar 8, 2024
- 10:09 pm
ಮಹಾ ಶಿವರಾತ್ರಿ: ಚಿಕ್ಕೋಡಿಯಲ್ಲಿ ಹಣ್ಣುಗಳಿಂದಲೇ ಶಿವನಿಗೆ ವಿಶೇಷ ಅಲಂಕಾರ, ವಿಡಿಯೋ ನೋಡಿ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಮಹಾದೇವ ಮಂದಿರದಲ್ಲಿ ಸಂಭ್ರಮದಿಂದ ಶಿವರಾತ್ರಿ ಆಚರಣೆ ಮಾಡಲಾಗಿದೆ. ಶಿವನ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಅದರಲ್ಲಿಯೂ ಹಣ್ಣುಗಳಿಂದಲೇ ಶಿವನ ಮೂರ್ತಿಯ ವಿಶೇಷ ಅಲಂಕಾರ ಮಾಡಲಾಗಿದ್ದು, ಭಕ್ತರ ಕಣ್ಮನ ಸೆಳೆಯಿತು. ಬೆಳಗ್ಗೆಯಿಂದಲೂ ನೂರಾರು ಭಕ್ತರು ಶಿವನ ದರ್ಶನ ಪಡೆದು ದರ್ಶನ ಪಡೆದುಕೊಂಡರು.
- Sahadev Mane
- Updated on: Mar 8, 2024
- 9:46 pm
ಹೆಗ್ಗೋಠಾರದಲ್ಲಿ ಆಚರಿಸಲಾಯ್ತು ವಿಶೇಷ ಶಿವರಾತ್ರಿ ಉತ್ಸವ; 40 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ತೆರಳಿ ಕಪಿಲಾ ತೀರ್ಥ ತಂದ ಭಕ್ತಗಣ
ಇಂದು ಶಿವರಾತ್ರಿ, ಎಲ್ಲೆಡೆ ಶಿವನಿಗೆ ನಾನಾ ರೀತಿಯ ಪೂಜೆ-ಪುನಸ್ಕಾರಗಳು ನಡೆಯುತ್ತವೆ. ಹಲವೆಡೆ ವಿಶಿಷ್ಟ ರೀತಿಯಲ್ಲಿ ಶಿವರಾತ್ರಿ ಆಚರಿಸಕಾಗುತ್ತದೆ. ಅದೇ ರೀತಿ ಗಡಿ ನಾಡು ಚಾಮರಾಜನಗರದಲ್ಲೂ ವಿಶೇಷವಾಗಿ ಶಿವರಾತ್ರಿ ಆಚರಿಸಲಾಯ್ತು. ಈ ಕುರಿತಾದ ಒಂದು ಸ್ಟೋರಿ ಇಲ್ಲಿದೆ.
- Suraj Prasad SN
- Updated on: Mar 8, 2024
- 9:45 pm
Mahashivratri 2024: ಚಂದ್ರನ ಬೆಳಕಿನಲ್ಲಿ ಶಿವನಿಗೆ ಅಭಿಷೇಕ ಮಾಡಿ ಪಾಪಗಳೆಲ್ಲ ದೂರ
Mahashivratri 2024: ಮಾಘ ಮಾಸ ಕೃಷ್ಣ ಪಕ್ಷದ ಚತುದ೯ಶಿಯಂದು ಆಚರಿಸುವ ಶಿವರಾತ್ರಿಯು ಶಿವ ಭಕ್ತರ ಪಾಲಿಗೆ ಶುಭಕರವಾದ ಶುಭದಿನ. ಶಿವರಾತ್ರಿಯಂದು ಹೆಚ್ಚಾಗಿ ಎಲ್ಲಾ ಕಡೆಗಳಲ್ಲಿಯೂ ಶಂಕರನಿಗೆ ಪ್ರಿಯವಾದ ಬಿಲ್ವ ಪತ್ರೆಯನ್ನು ಅರ್ಪಿಸಿ ತುಳಸಿಯಿಂದ ಅಲಂಕಾರ ಮಾಡಿ ಚಂದ್ರನ ಬೆಳಕಿನಲ್ಲಿ ಶಿವನಿಗೆ ಅಭಿಷೇಕ ಮಾಡಿ ತಮ್ಮ ಪಾಪಗಳೆಲ್ಲ ದೂರವಾಗಲಿ ಎಂದು ಭಕ್ತಿಯಿಂದ ಪೂಜಿಸುತ್ತಾರೆ. ಇಂತಹ ಶಿವರಾತ್ರಿ ಹಬ್ಬದ ಮಹತ್ವ, ವಿಶೇಷತೆ ಕುರಿತು ಇಲ್ಲಿದೆ ಮಾಹಿತಿ
- Web contact
- Updated on: Mar 8, 2024
- 9:11 pm
Mahashivratri 2024: ಶಿವ ಮತ್ತು ವಿಷ್ಣು ಬಾವ, ಬಾಮೈದರಾದದ್ದು ಹೇಗೆ? ಇದರ ಹಿಂದಿರುವ ಕಥೆಯೇನು?
ಪಾರ್ವತಿ ಶಿವನನ್ನು ಮದುವೆಯಾಗಲು ಮುಖ್ಯವಾಗಿ ನಾರದರು ಮತ್ತು ವಿಷ್ಣು ದೇವ ಕಾರಣ ಎಂದು ನಂಬಲಾಗುತ್ತದೆ. ಕೆಲವು ದಂತಕಥೆಗಳಲ್ಲಿ ಪಾರ್ವತಿಯು ಭಗವಾನ್ ವಿಷ್ಣುವನ್ನು ಅಣ್ಣನಾಗಿ ಸ್ವೀಕರಿಸಿದ್ದಳು ಎನ್ನಲಾಗುತ್ತದೆ. ಹಾಗಾದರೆ ಈ ಕಥೆ ಏನು? ದೇವಿ ಪಾರ್ವತಿ ಮತ್ತು ಭಗವಾನ್ ವಿಷ್ಣು ಹೇಗೆ ಅಣ್ಣ -ತಂಗಿಯಾದರು, ಶಿವ ಮತ್ತು ವಿಷ್ಣು ಬಾವ, ಬಾಮೈದರಾಗಲು ಕಾರಣವೇನು? ಇಲ್ಲಿದೆ ಸ್ವಾರಸ್ಯಕರ ಕಥೆ.
- Preethi Bhat Gunavante
- Updated on: Mar 8, 2024
- 6:26 pm
ಶಿವರಾತ್ರಿ ಹಬ್ಬದ ಪ್ರಯುಕ್ತ ‘ಕಣ್ಣಪ್ಪ’ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ
ವಿಷ್ಣು ಮಂಚು ಅಭಿನಯದ ಬಹುನಿರೀಕ್ಷಿತ ‘ಕಣ್ಣಪ್ಪ: ದಿ ಗ್ರೇಟ್ ಎಪಿಕ್ ಇಂಡಿಯನ್ ಟೇಲ್’ ಸಿನಿಮಾದಿಂದ ಹೊಸ ಪೋಸ್ಟರ್ ಬಿಡುಗಡೆ ಆಗಿದೆ. ಇದು ಶಿವಭಕ್ತನ ಕಹಾನಿ ಇರುವ ಸಿನಿಮಾ. ಹಾಗಾಗಿ ಕಣ್ಣಪ್ಪ ಚಿತ್ರತಂಡದಿಂದ ಶಿವರಾತ್ರಿಗೆ ಸರ್ಪ್ರೈಸ್ ರೀತಿಯಲ್ಲಿ ಈ ಪೋಸ್ಟರ್ ಅನಾವರಣ ಮಾಡಲಾಗಿದೆ. ಈ ಸಿನಿಮಾ ಮೂಡಿಬರುತ್ತಿರುವ ರೀತಿಗೆ ನಟ ವಿಷ್ಣು ಮಂಚು ಅವರು ಥ್ರಿಲ್ ಆಗಿದ್ದಾರೆ.
- Madan Kumar
- Updated on: Mar 8, 2024
- 5:49 pm
ಶಿವರಾತ್ರಿ ಹಬ್ಬದಂದು ಸಿಂಪಲ್ ಸುನಿ, ರಕ್ಷಿತ್ ಶೆಟ್ಟಿಗೆ ಎರಡನೇ ಹುಟ್ಟು ದಿನ
ನಿರ್ದೇಶಕ ಸಿಂಪಲ್ ಸುನಿ ಮತ್ತು ನಟ ರಕ್ಷಿತ್ ಶೆಟ್ಟಿ ಅವರಿಗೆ ಶಿವರಾತ್ರಿ ಹಬ್ಬದ ದಿನ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಸಿನಿಮಾ ನೆನಪಾಗಿದೆ. ಈ ಸಿನಿಮಾ ತೆರೆಕಂಡು ಇಂದಿಗೆ (ಮಾರ್ಚ್ 8) 11 ವರ್ಷಗಳು ತುಂಬಿವೆ. ಈ ಖುಷಿಯಲ್ಲಿ ಆ ದಿನಗಳ ನೆನಪನ್ನು ಸುನಿ ಮತ್ತು ರಕ್ಷಿತ್ ಶೆಟ್ಟಿ ಅವರು ಮೆಲುಕು ಹಾಕಿದ್ದಾರೆ. ಅಭಿಮಾನಿಗಳು ಕೂಡ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಸಿನಿಮಾದ ನೆನಪುಗಳನ್ನು ಹಂಚಿಕೊಂಡಿದ್ದಾರೆ.
- Madan Kumar
- Updated on: Mar 8, 2024
- 3:07 pm
ಮಹಾಶಿವರಾತ್ರಿಯಂದೇ ಆನೇಕಲ್ನಲ್ಲಿ ಸಪ್ತಪದಿ ತುಳಿದ ಅಸ್ಸಾಂ ಮೂಲದ ಪ್ರೇಮಿಗಳು
ಇಂದು ಎಲ್ಲೆಡೆ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ಈ ಶುಭ ದಿನದಂದು ಅಸ್ಸಾಂ ಮೂಲದ ಪ್ರೇಮಿಗಳು ಒಂದಾಗಿದ್ದಾರೆ. ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಮರಸೂರಿನ ಓಂಕಾರೇಶ್ವರ ಸ್ವಾಮಿ ದೇವಾಲಯದಲ್ಲಿ ಅಸ್ಸಾಂ ಮೂಲದ ಚಂಜಿತ್ ಮಹತಿ(23), ಪಾಂಪಿ ಭೇಂಗ್ರಾ(21) ಅವರು ಸರಳವಾಗಿ ವಿವಾಹವಾಗಿದ್ದಾರೆ.
- Ramu Ram
- Updated on: Mar 8, 2024
- 3:09 pm
ಪ್ರತಿ ವರ್ಷ ನಿಗೂಢವಾಗಿ ಬೆಳೆಯುತ್ತಲೇ ಇದೆ ಮಾತಂಗೇಶ್ವರ ಮಹಾದೇವ ದೇವಸ್ಥಾನದ ಶಿವಲಿಂಗ
Matangeshwar Mahadev Temple: ಇಂದು ಮಹಾ ಶಿವರಾತ್ರಿ. ಶಿವರಾತ್ರಿ ಹಬ್ಬದಂದು ದೇಶಾದ್ಯಂತ ಇರುವ ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ. ಭಕ್ತರು ಇಂದು ಉಪವಾಸ, ಭಜನೆ, ಜಾಗರಣೆಯ ಮೂಲಕ ಶಿವನನ್ನು ಸ್ತುತಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿ ಇರುವ ಅತ್ಯಂತ ವಿಚಿತ್ರವಾದ ಮತ್ತು ವಿಶೇಷವಾದ ಶಿವನ ದೇವಸ್ಥಾನದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಇಲ್ಲಿನ ಶಿವಲಿಂಗ ಪ್ರತಿ ವರ್ಷ ಉದ್ದವಾಗುತ್ತದೆ ಎಂಬುದು ನಿಗೂಢವಾದ ಸಂಗತಿ.
- Sushma Chakre
- Updated on: Mar 8, 2024
- 2:23 pm
Mahashivratri 2024: ಶಿವ ಪಾರ್ವತಿಯನ್ನು ಭೇಟಿ ಮಾಡಲು ಬಂದಾಗ ಆತನಿಗೆ ನಿರಾಸೆಯಾಗುವುದೇಕೆ?
ಕಾರಿಂಜ ಕ್ಷೇತ್ರ ಬಂಟ್ವಾಳ: ಶಿವರಾತ್ರಿ ಇಲ್ಲಿನ ಪ್ರಧಾನ ಉತ್ಸವ. ಇದು ನಾಲ್ಕು ದಿನಗಳ ಕಾಲ ನಡೆಯುತ್ತದೆ. ಜಾತ್ರೆ ವೇಳೆ ಗುಡ್ಡದ ಮೇಲಿನಿಂದ ಶಿವನ ವಿಗ್ರಹವನ್ನು ಪಾರ್ವತಿ ದೇವಸ್ಥಾನಕ್ಕೆ ತರುವ ಮೂಲಕ ಶಿವ- ಪಾರ್ವತಿಯರ ಭೇಟಿ ನಡೆಯುತ್ತದೆ. ಹಾಗಾದರೆ ಈ ದೇವಾಲಯದ ಇತಿಹಾಸವೇನು? ಯಾಕಾಗಿ ಶಿವ ಹೆಂಡತಿಯನ್ನು ಭೇಟಿ ಮಾಡಲು ಬರುತ್ತಾನೆ? ಇಲ್ಲಿದೆ ಸಂಪೂರ್ಣ ಮಾಹಿತಿ.
- Preethi Bhat Gunavante
- Updated on: Mar 8, 2024
- 1:03 pm