Maha Shivratri
ಮಹಾಶಿವರಾತ್ರಿ ಹಿಂದೂಗಳ ಪವಿತ್ರವಾದ ಹಬ್ಬಗಳಲ್ಲಿ ಒಂದು. ಇದು ಬಹಳ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ದೇಶದಾದ್ಯಂತ ಶಿವನನ್ನು ಆರಾಧಿಸುವವರು ಮಹಾ ಶಿವರಾತ್ರಿಯನ್ನು ಅತ್ಯಂತ ಶ್ರದ್ಧಾ- ಭಕ್ತಿಯಿಂದ ಆಚರಿಸುತ್ತಾರೆ. ಶಿವರಾತ್ರಿಯ ಹಿಂದಿನ ದಿನ ರಾತ್ರಿಯಿಂದಲೇ ಭಜನೆ, ಜಾಗರಣೆ, ಉಪವಾಸಗಳನ್ನು ಮಾಡಲಾಗುತ್ತದೆ. ಶಿವರಾತ್ರಿಯಂದು ಶಿವ ಪೂಜೆಯನ್ನು ಮಾಡುವ ಮೂಲಕ, ಶಿವನಿಗೆ ಪ್ರಿಯವಾದ ತುಳಸಿ, ಬಿಲ್ವಪತ್ರೆಯನ್ನು ಅರ್ಪಿಸುವ ಮೂಲಕ, ತಂಬಿಟ್ಟಿನ ನೈವೇದ್ಯ ಮಾಡುವ ಮೂಲಕ ಈ ಹಬ್ಬವನ್ನು ಆಚರಿಸಲಾಗುತ್ತದೆ. ಬೇರೆಲ್ಲ ಹಬ್ಬಗಳಲ್ಲಿ ಹಗಲಿನ ವೇಳೆ ದೇವರಿಗೆ ಪೂಜೆ ಮಾಡಿದರೆ ಶಿವರಾತ್ರಿಯಲ್ಲಿ ಶಿವನಿಗೆ ರಾತ್ರಿ ಪೂಜೆ ಮಾಡುವುದೇ ದೊಡ್ಡ ವಿಶೇಷ. ಶಿವರಾತ್ರಿಯ ಮಹತ್ವದ ಬಗ್ಗೆ ಹಲವು ದಂತಕತೆಗಳಿವೆ. ಶಿವನು ಪಾರ್ವತಿಯನ್ನು ಮದುವೆಯಾದ ದಿನ ಶಿವರಾತ್ರಿಯೆಂದು ಕೆಲವು ಕತೆಗಳು ಹೇಳುತ್ತವೆ. ದೇವತೆಗಳು ಮತ್ತು ಅಸುರರ ನಡುವೆ ಸಮುದ್ರ ಮಂಥನ ನಡೆದಾಗ ಉದ್ಭವವಾದ ವಿಷವನ್ನು ಶಿವ ಕುಡಿದು ನೀಲಕಂಠನಾದ ದಿನ ಶಿವರಾತ್ರಿಯೆಂದು ಇನ್ನು ಕೆಲವು ಕತೆಗಳು ಹೇಳುತ್ತವೆ. ಶಿವನ ಜಟೆಯಿಂದ ಗಂಗೆ ಭೂಮಿಗೆ ಬಂದಿದ್ದು ಇದೇ ದಿನ ಎಂಬುದು ಇನ್ನೊಂದು ಕತೆ. ಶಿವನು ಲಿಂಗ ರೂಪ ತಾಳಿ ನಿಶ್ಚಲನಾದ ದಿನವೇ ಶಿವರಾತ್ರಿ ಎಂಬುದು ಬಹುತೇಕರ ನಂಬಿಕೆ.
ಕರ್ನಾಟಕದಾದ್ಯಂತ ಎಲ್ಲೆಲ್ಲೂ ಶಿವರಾತ್ರಿ ಜಾಗರಣೆ, ಪರವಶರಾದ ಭಕ್ತರು
ಕರ್ನಾಟಕದಾದ್ಯಂತ ಮಹಾಶಿವರಾತ್ರಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಬೆಂಗಳೂರು, ಮೈಸೂರು, ಮಂಗಳೂರಿನ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕಗಳು ನಡೆದವು. ಇಶಾ ಫೌಂಡೇಶನ್ನಲ್ಲಿ ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿದರು. ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಸಾನಿಧ್ಯದಲ್ಲಿ ರುದ್ರಪೂಜೆ ಮತ್ತು ಐತಿಹಾಸಿಕ ಜ್ಯೋತಿರ್ಲಿಂಗ ಅವಶೇಷಗಳ ದರ್ಶನ ಲಭಿಸಿತು.
- Ganapathi Sharma
- Updated on: Feb 16, 2026
- 8:08 am
ಚಿಕ್ಕಬಳ್ಳಾಪುರ: ಮಹಾಶಿವರಾತ್ರಿ ಸಂಭ್ರಮದ ಮಧ್ಯೆ ಈಶಾ ಫೌಂಡೇಷನ್ ಬಳಿ ಬೆಂಕಿ
ಚಿಕ್ಕಬಳ್ಳಾಪುರದ ಈಶಾ ಫೌಂಡೇಷನ್ನಲ್ಲಿ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿದ್ದು, ಲಕ್ಷಾಂತರ ಜನ ಸೇರಿದ್ದಾರೆ. ಹೀಗಾಗಿ ಎಲ್ಲೆಡೆ ಟ್ರಾಫಿಕ್ ಜಾಮ್ ಕೂಡ ಉಂಟಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಇದರ ಮಧ್ಯೆ ಈಶಾ ಫೌಂಡೇಷನ್ ಬಳಿಯ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.
- Bheemappa Patil
- Updated on: Feb 15, 2026
- 8:46 pm
ಇಶಾ ಫೌಂಡೇಷನ್ನಲ್ಲಿ ಅದ್ದೂರಿ ಶಿವರಾತ್ರಿ ಸಂಭ್ರಮ; ನೇರ ಪ್ರಸಾರ ಇಲ್ಲಿದೆ
ಕೊಯಮತ್ತೂರಿನ ಇಶಾ ಫೌಂಡೇಶನ್ನಲ್ಲಿ ಅದ್ದೂರಿ ಮಹಾ ಶಿವರಾತ್ರಿ ಆಚರಣೆ ನಡೆಯುತ್ತಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದಾರೆ. ಇಂದು ಸಂಜೆ 6 ರಿಂದ ನಾಳೆ ಬೆಳಿಗ್ಗೆ 6 ರವರೆಗೆ ಧ್ಯಾನ, ಮಂತ್ರ ಪಠಣ, ಯೋಗೇಶ್ವರಲಿಂಗ ಮಹಾ ಅಭಿಷೇಕ ಮತ್ತು ಸಂಗೀತ ಕಾರ್ಯಕ್ರಮಗಳು ನೇರ ಪ್ರಸಾರದಲ್ಲಿ ಲಭ್ಯವಿವೆ. ಈ ಆಧ್ಯಾತ್ಮಿಕ ಸಂಭ್ರಮವನ್ನು ವೀಕ್ಷಿಸಿ.
- Akshatha Vorkady
- Updated on: Feb 15, 2026
- 6:19 pm
ಆಳಂದ ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಬದಲಾವಣೆ: ಪೂಜೆ ಬಳಿಕ ಹಿಂದೂಗಳು ಸ್ಫೋಟಕ ಆರೋಪ
ಜ್ಞಾನವ್ಯಾಪಿ ಮಸೀದಿ ಮಾದರಿಯಲ್ಲೇ ವಿವಾದಿತ ಕೇಂದ್ರವಾಗಿರುವ ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೇ ಮಶಾಕ್ ದರ್ಗಾ ಇದೀಗ ದೇಶದ ಗಮನ ಸೆಳೆದಿದೆ. ಏಕೆಂದರೆ ದರ್ಗಾದಲ್ಲಿನ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಮಹಾಶಿವರಾತ್ರಿ ಅಂಗವಾಗಿ ಹಿಂದೂ ಮುಖಂಡರು ಖಾಕಿ ಭದ್ರತೆಯಲ್ಲಿ ತೆರಳಿ ಪೂಜೆ ಸಲ್ಲಿಸಿದ್ದಾರೆ. ಆದರೆ ಶಿವಲಿಂಗದ ಆಕಾರವೇ ಬದಲಾಗಿದೆ ಎಂದು ಆರೋಪಿಸಲಾಗಿದೆ.
- Dattatraya Patil
- Updated on: Feb 15, 2026
- 5:54 pm
ಮಹಾಶಿವರಾತ್ರಿ ಸಂಭ್ರಮದ ಮಧ್ಯೆ ಶಿವಲಿಂಗ ಮೂರ್ತಿ ಭಗ್ನ: ರೊಚ್ಚಿಗೆದ್ದ ಗ್ರಾಮಸ್ಥರು
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟಾಲೂರು ಗ್ರಾಮದ ರಾಮಲಿಂಗೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ದಿನದಂದೇ ಶಿವಲಿಂಗ, ಪಾಣಿಪೀಠ ಹಾಗೂ ನಂದಿ ವಿಗ್ರಹ ಭಗ್ನಗೊಳಿಸಲಾಗಿದೆ. ತುಂಗಭದ್ರಾ ನದಿ ದಡದಲ್ಲಿರುವ ಚಾಲುಕ್ಯರ ಕಾಲದ ಈ ದೇವಾಲಯದಲ್ಲಿನ ಕೃತ್ಯಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.
- Sanjeev Pandre
- Updated on: Feb 15, 2026
- 5:06 pm
Mahashivratri Fasting: ಈ 5 ವರ್ಗದ ಜನರು ಹಬ್ಬದ ದಿನದಂದು ಉಪವಾಸ ಮಾಡಲೇಬೇಡಿ
ಉಪವಾಸ ಆಧ್ಯಾತ್ಮಿಕ ವಿಧಾನವಾದರೂ, ಆರೋಗ್ಯಕ್ಕಿಂತ ದೊಡ್ಡದಲ್ಲ. ಮಹಾಶಿವರಾತ್ರಿ ಉಪವಾಸ ಆಚರಿಸುವಾಗ, ಮಧುಮೇಹಿಗಳು, ಗರ್ಭಿಣಿಯರು, ಮಕ್ಕಳು, ವೃದ್ಧರು, ಮೂತ್ರಪಿಂಡ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಕಠಿಣ ಉಪವಾಸದಿಂದ ದೂರವಿರುವುದು ಸೂಕ್ತ. ದೇಹದ ಆರೋಗ್ಯವೇ ದೇವರು ಮೆಚ್ಚುವ ಭಕ್ತಿ. ಪೂರ್ತಿಯಾಗಿ ಉಪವಾಸ ಮಾಡಲು ಸಾಧ್ಯವಾಗದವರು ಫಲಾಹಾರ ಉಪವಾಸ ಆಚರಿಸಬಹುದು. ಯಾವುದೇ ನಿರ್ಧಾರಕ್ಕೂ ಮುನ್ನ ವೈದ್ಯರ ಸಲಹೆ ಪಡೆಯುವುದು ಉತ್ತಮ.
- Akshatha Vorkady
- Updated on: Feb 15, 2026
- 3:32 pm
ಶಿವ ಶಂಭೋ ಸ್ವಯಂಭೋ: ಶಿವರಾತ್ರಿಗೆ ಹೊಂಬಾಳೆ ಫಿಲ್ಮ್ಸ್ ಹೊಸ ಹಾಡು
‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯು ‘ಶಿವ ಶಂಭೋ ಸ್ವಯಂಭೋ’ ಹಾಡನ್ನು ರಿಲೀಸ್ ಮಾಡಿದೆ. ಈ ಹೊಸ ಭಕ್ತಿಗೀತೆಯಲ್ಲಿ ಭಕ್ತಿ ಮತ್ತು ಎಐ ತಂತ್ರಜ್ಞಾನದ ಸಂಗಮ ಆಗಿರುವುದು ವಿಶೇಷ. ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ‘ಶಿವ ಶಂಭೋ ಸ್ವಯಂಭೋ’ ಗೀತೆ ಬಿಡುಗಡೆ ಆಗಿದೆ. ಹೇಗಿದೆ ನೋಡಿ..
- Madan Kumar
- Updated on: Feb 15, 2026
- 1:01 pm
Maha Shivratri Shloka: ಜೀವನದ ಸಂಕಷ್ಟವೆಲ್ಲಾ ದೂರವಾಗಲು ಶಿವರಾತ್ರಿಯ ಶುಭ ಸಂದರ್ಭದಲ್ಲಿ ಈ ಮಂತ್ರಗಳನ್ನು ಪಠಿಸಿ
ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಮಹಾ ಶಿವರಾತ್ರಿಯೂ ಒಂದು. ಮಹಾಶಿವರಾತ್ರಿ ಕೇವಲ ಧಾರ್ಮಿಕ ಹಬ್ಬವಲ್ಲ, ಇದು ಆತ್ಮಶುದ್ಧಿ ಮತ್ತು ಆಧ್ಯಾತ್ಮಿಕ ಜಾಗೃತಿಗಾಗಿ ಇರುವ ಒಂದು ಶುಭ ಸಂದರ್ಭವೂ ಹೌದು. ಈ ಶುಭ ದಿನದಂದು ಶಿವನಿಗೆ ಅರ್ಪಿತವಾದ ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿನ ಸಂಕಷ್ಟವೆಲ್ಲಾ ದೂರವಾಗಿ ಸಕಾರಾತ್ಮಕತೆ ತುಂಬುತ್ತದಂತೆ. ಹಾಗಿದ್ರೆ ಶಿವರಾತ್ರಿಯ ಈ ಶುಭ ಸಂದರ್ಭದಲ್ಲಿ ಯಾವ ಶಿವಮಂತ್ರವನ್ನು ಪಠಿಸಬೇಕು ಎಂಬುದನ್ನು ತಿಳಿಯೋಣ ಬನ್ನಿ.
- Malashree anchan
- Updated on: Feb 15, 2026
- 7:54 am
ರಜನಿಕಾಂತ್ ಫೋಟೋಗೆ ಹಾಲಿನ ಅಭಿಷೇಕ ಮಾಡಿ ಶಿವರಾತ್ರಿ ಆಚರಿಸಿದ ಅಭಿಮಾನಿ
ಮಧುರೈ ಮೂಲದ ಅಭಿಮಾನಿಯೊಬ್ಬ ಈ ರೀತಿಯಲ್ಲಿ ಶಿವರಾತ್ರಿ ಹಬ್ಬವನ್ನು ಆಚರಿಸಿದ್ದಾನೆ. ಆತನ ಮನೆಯೊಳಗೆ ರಜನಿಕಾಂತ್ ಅವರ ದೇವಸ್ಥಾನವನ್ನು ನಿರ್ಮಾಣ ಮಾಡಿಕೊಳ್ಳಲಾಗಿದೆ. ಶಿವರಾತ್ರಿ ಪ್ರಯುಕ್ತ ರಜನಿ ಫೋಟೋಗೆ ವಿಶೇಷ ಪೂಜೆ ಮಾಡಿದ ವಿಡಿಯೋ ವೈರಲ್ ಆಗಿದೆ. ಆ ಬಗ್ಗೆ ಇಲ್ಲಿದೆ ಪೂರ್ತಿ ವಿವರ..
- Madan Kumar
- Updated on: Feb 15, 2026
- 7:25 am
ಗಂಗಾ ನದಿಯ ಥೀಮ್ನಲ್ಲಿ ಮಹಾಶಿವರಾತ್ರಿಗೆ ಸಜ್ಜಾಗಿದೆ ಇಶಾ ಫೌಂಡೇಷನ್
ತಮಿಳುನಾಡಿನ ಇಶಾ ಫೌಂಡೇಷನ್ನಲ್ಲಿ ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದಲ್ಲಿ ಫೆ. 15ರಂದು 32ನೇ ಮಹಾ ಶಿವರಾತ್ರಿ ಹಬ್ಬ ಆಚರಿಸಲಾಗುತ್ತಿದೆ. ಈ ಬಾರಿ ಪವಿತ್ರ ನದಿಯಾದ ಗಂಗೆಯ ಥೀಮ್ನಲ್ಲಿ ಶಿವರಾತ್ರಿ ಉತ್ಸವಕ್ಕೆ ಸಕಲ ಸಿದ್ಧತೆಗಳಾಗಿವೆ. ಶಿವರಾತ್ರಿ ಉತ್ಸವವನ್ನು ನಾಳೆ ಇಶಾ ಯೋಗ ಕೇಂದ್ರದಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು.
- Sushma Chakre
- Updated on: Feb 14, 2026
- 9:32 pm
Maha Shivratri Recipes: ಶಿವರಾತ್ರಿಯಂದು ಮಹಾದೇವನನ್ನು ಮೆಚ್ಚಿಸಲು ಈ ನೈವೇದ್ಯಗಳನ್ನು ಅರ್ಪಿಸಿ
ಮಹಾಶಿವರಾತ್ರಿ ಶಿವಭಕ್ತರಿಗೆ ಪ್ರಿಯವಾದ ಹಬ್ಬವಾಗಿದೆ. ಪ್ರತಿವರ್ಷ ಈ ಹಬ್ಬವನ್ನು ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಈ ದಿನ ಶಿವ ಪೂಜೆಯೊಂದಿಗೆ, ಭಕ್ತರು ಜಾಗರಣೆ, ಉಪವಾಸ ಮಾಡುತ್ತಾರೆ, ಶಿವನ ಕಥೆಗಳನ್ನೂ ಕೇಳುತ್ತಾರೆ. ಇನ್ನೂ ಈ ದಿನ ಮಹಾದೇವನನ್ನು ಮೆಚ್ಚಿಸಲು ನೈವೇದ್ಯವನ್ನೂ ಅರ್ಪಿಸಲಾಗುತ್ತದೆ. ಶಿವನಿಗೆ ಪ್ರಿಯವಾದ ಈ ಕೆಲವು ನೈವೇದ್ಯಗಳನ್ನು ಶಿವನಿಗೆ ಅರ್ಪಿಸುವ ಮೂಲಕ ನೀವೂ ದೇವರ ಕೃಪೆಗೆ ಪಾತ್ರರಾಗಿ.
- Malashree anchan
- Updated on: Feb 14, 2026
- 6:19 pm
ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಗುರುದೇವ ಶ್ರೀ ಶ್ರೀ ರವಿ ಶಂಕರರೊಂದಿಗೆ ಮಹಾಶಿವರಾತ್ರಿ ಮಹೋತ್ಸವ
ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಮಹಾಶಿವರಾತ್ರಿ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ. ಗುರುದೇವ ಶ್ರೀ ಶ್ರೀ ರವಿ ಶಂಕರರ ಸಾನ್ನಿಧ್ಯದಲ್ಲಿ ರುದ್ರಪೂಜೆ, ಭಜನೆ ಮತ್ತು ಮಧ್ಯರಾತ್ರಿಯ ಧ್ಯಾನ ಕಾರ್ಯಕ್ರಮಗಳು ಜರುಗಲಿವೆ. ಲಕ್ಷಾಂತರ ಭಕ್ತರು ಭಾಗವಹಿಸುವ ಈ ಆಚರಣೆ ಅಂತರಂಗದ ಶಾಂತಿ, ಸಮೂಹ ಪ್ರಾರ್ಥನೆ ಮತ್ತು ಆಧ್ಯಾತ್ಮಿಕ ಪುನಶ್ಚೇತನವನ್ನು ಪ್ರತಿಬಿಂಬಿಸಲಿದೆ.
- Akshatha Vorkady
- Updated on: Feb 14, 2026
- 4:01 pm