AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಶುಸಂಗೋಪನೆ ಸಚಿವರ ಕ್ಷೇತ್ರದಲ್ಲಿ ಬಣ ರಾಜಕೀಯ: ಚರಂಡಿಗೆ ಹಾಲು ಸುರಿದು ಚಿಟ್ಟೇನಹಳ್ಳಿ ಗ್ರಾಮಸ್ಥರ ಆಕ್ರೋಶ

ಪಶುಸಂಗೋಪನೆ ಸಚಿವರ ಕ್ಷೇತ್ರದಲ್ಲಿ ಬಣ ರಾಜಕೀಯ: ಚರಂಡಿಗೆ ಹಾಲು ಸುರಿದು ಚಿಟ್ಟೇನಹಳ್ಳಿ ಗ್ರಾಮಸ್ಥರ ಆಕ್ರೋಶ

ದಿಲೀಪ್​, ಚೌಡಹಳ್ಳಿ
| Edited By: Rakesh Nayak Manchi|

Updated on:Sep 04, 2023 | 10:00 PM

Share

ಹಾಲು ಖರೀದಿ ವಿಚಾರದಲ್ಲೂ ಬಣ ರಾಜಕೀಯ ಮಾಡಿದರೆ ಹೈನುಗಾರಿಕೆ ಮಾಡುವವರು ಏನು ಮಾಡುವುದು ಮಾರಾಯ್ರೆ? ಪಶುಸಂಗೋಪನೆ ಸಚಿವರ ಕ್ಷೇತ್ರದಲ್ಲೇ ಬಣರಾಜಕೀಯಕ್ಕೆ ಚಿಟ್ಟೇನಹಳ್ಳಿಯ ಡೇರಿಯಲ್ಲಿ ಹಾಲು ಖರೀದಿಸದ ಹಿನ್ನೆಲೆ ಗ್ರಾಮಸ್ಥರು ಚರಂಡಿಗೆ ಹಾಲನ್ನು ಸುರಿದ ಘಟನೆ ನಡೆದಿದೆ. ಸಚಿವ ಕೆ.ವೆಂಕಟೇಶ್ ಕುಮ್ಮಕ್ಕಿನಿಂದ ಹಾಲು ಪಡೆಯದ ಆರೋಪ ಕೇಳಿಬಂದಿದೆ.

ಮೈಸೂರು, ಸೆ.4: ಪಶುಸಂಗೋಪನೆ ಸಚಿವ​ ಕೆ.ವೆಂಕಟೇಶ್ (K.Venkatesh) ಅವರ ತವರು ಕ್ಷೇತ್ರ ಪಿರಿಯಪಟ್ಟಣ ತಾಲೂಕಿನಲ್ಲಿ ಬಣ ರಾಜಕೀಯಕ್ಕೆ ಚಿಟ್ಟೇನಹಳ್ಳಿ ಗ್ರಾಮದ ಹೈನುಗಾರರು ಪರದಾಟ ನಡೆಸುವಂತಾಗಿದೆ. ಚಿಟ್ಟೇನಹಳ್ಳಿಯಲ್ಲಿರುವ ಡೇರಿಯಲ್ಲಿ ಕಾರ್ಯದರ್ಶಿ ಹಾಲು ಪಡೆಯದೆ ಮತ್ತೊಂದು ಬಿಎಂಸಿ ಕೇಂದ್ರಕ್ಕೆ ಹಾಲು ಹಾಕುವಂತೆ ತಾಕೀತು ಮಾಡಿದ್ದಾರೆ. ಇದರಿಂದ ದಿಕ್ಕು ತೋದಚೆ ಡೇರಿಗೆ ತಂದ ಹಾಲನ್ನು ಗ್ರಾಮಸ್ಥರು ಚರಂಡಿಗೆ ಸುರಿದು ಆಕ್ರೋಶ ಹೊರಹಾಕಿದ್ದಾರೆ. ಸಚಿವ ಕೆ.ವೆಂಕಟೇಶ್ ಕುಮ್ಮಕ್ಕಿನಿಂದ ಕಾರ್ಯದರ್ಶಿ ಹಾಲು ಪಡೆಯುತ್ತಿಲ್ಲ ಎಂದು ಆರೋಪಿಸಲಾಗಿದೆ. ಒಂದೇ ಡೇರಿಯಲ್ಲಿ ಹಾಲು ಹಾಕಿಸಿಕೊಳ್ಳಬೇಕು ಎಂದು ರೈತರ ಆಗ್ರಹಿಸಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Sep 04, 2023 09:55 PM

Follow Us
Dileep CP
Dileep CP

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಅದನ್ನು ಹೊರತು ಪಡಿಸಿದರೆ ಒಂದಷ್ಟು ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More