AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ದಿನದ ಹಿಂದೆ ಜುಲೈ ಕಂತು ಬಿಡುಗಡೆಯಾಗಿದೆ; ಗೃಹಲಕ್ಷ್ಮೀ ಹಣ ರಿಲೀಸ್‌ ಆದ ಬಗ್ಗೆ ಹೆಬ್ಬಾಳ್ಕರ್‌ ಮಾತು

3 ದಿನದ ಹಿಂದೆ ಜುಲೈ ಕಂತು ಬಿಡುಗಡೆಯಾಗಿದೆ; ಗೃಹಲಕ್ಷ್ಮೀ ಹಣ ರಿಲೀಸ್‌ ಆದ ಬಗ್ಗೆ ಹೆಬ್ಬಾಳ್ಕರ್‌ ಮಾತು

ಮಾಲಾಶ್ರೀ ಅಂಚನ್​
|

Updated on:Sep 23, 2025 | 5:46 PM

Share

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ಮಹಿಳಾ ದಸರಾಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅಧಿಕೃತ ಚಾಲನೆಯನ್ನು ನೀಡಿದ್ದಾರೆ. ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅವರು ಗೃಹಲಕ್ಷ್ಮೀ 23 ಕಂತಿನ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಬ್ಬಕ್ಕೆ ಅನುಕೂಲವಾಗಲಿ ಅಂತ ಈಗಾಗಲೇ ಜುಲೈ ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಮೈಸೂರು, ಸೆಪ್ಟೆಂಬರ್‌ 23: ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮಹಿಳಾ ದಸರಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಒಂದು ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಉದ್ಘಾಟನೆ ಮಾಡಿದ್ದಾರೆ. ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಗೃಹಲಕ್ಷ್ಮೀ (Gruhalakshmi Scheme) 23 ಕಂತಿನ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಒಂದು ಕೋಟಿ ಇಪ್ಪತ್ತನಾಲ್ಕು ಲಕ್ಷ ಜನರಿಗೆ 22 ಕಂತಿನ ಹಣವನ್ನು ಈಗಾಗಲೇ ಬಿಡುಗಡೆ ಮಾಡಿದ್ದೇವೆ. ಈಗ ಜುಲೈ ತಿಂಗಳ 23 ಕಂತನ್ನು ಬಿಡುಗಡೆ ಮಾಡಿದ್ದಾವೆ. ದಸರಾ ಹಬ್ಬಕ್ಕೆ ಅನುಕೂಲವಾಗಲಿ ಅಂತ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಗೃಹಲಕ್ಷ್ಮೀ ಹಣ ಜಮಾ ಮಾಡಲಾಗಿದೆ ಎಂದು ಹೇಳಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Published on: Sep 23, 2025 05:45 PM