AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಜ್ರಿವಾಲ್ ಮತ್ತು ಸೊರೇನ್ ಜೊತೆ ನಾಗೇಂದ್ರ ತನ್ನನ್ನು ಹೋಲಿಸಿಕೊಂಡಿದ್ದು ಹಾಸ್ಯಾಸ್ಪದ: ಜನಾರ್ಧನ ರೆಡ್ಡಿ

ಕೇಜ್ರಿವಾಲ್ ಮತ್ತು ಸೊರೇನ್ ಜೊತೆ ನಾಗೇಂದ್ರ ತನ್ನನ್ನು ಹೋಲಿಸಿಕೊಂಡಿದ್ದು ಹಾಸ್ಯಾಸ್ಪದ: ಜನಾರ್ಧನ ರೆಡ್ಡಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 17, 2024 | 4:26 PM

ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ 2011ರಲ್ಲಿ ತನ್ನನ್ನು ಸಿಬಿಐ ಬಂಧಿಸಿದ ಹಾಗೆ ನಾಗೇಂದ್ರ ಅವರನ್ನೂ ಬಂಧಿಸಿ ಎರಡು ವರ್ಷ ಜೈಲಿನಲ್ಲಿಡಲಾಗಿತ್ತು. ಈಗ ಪುನಃ ಬಂಧನಕ್ಕೊಳಗಾದ ನಾಗೇಂದ್ರಗೆ ಕೇವಲ ಮೂರು ತಿಂಗಳಲ್ಲಿ ಜಾಮೀನು ಸಿಕ್ಕಿದೆ, ನಾಗೇಂದ್ರ ವಿವೇಚನೆಯಿಂದ ಮಾತಾಡಲಿ ಎಂದು ಜನಾರ್ಧನ ರೆಡ್ಡಿ ಹೇಳಿದರು.

ಬಳ್ಳಾರಿ: ಗಾಲಿ ಜನಾರ್ಧನ ರೆಡ್ಡಿ ಮತ್ತು ಬಿ ನಾಗೇಂದ್ರ ಇಬ್ಬರೂ ಬಳ್ಳಾರಿಯಲ್ಲಿದ್ದಾರೆ! ಪರಸ್ಪರ ದೋಷಾರೋಪಣೆ ನಿರೀಕ್ಷಿತವೇ. ನಾಗೇಂದ್ರರ ಹಾಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ರೆಡ್ಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಿಜೆಪಿಯೇತರ ಸರ್ಕಾರಗಳನ್ನು ಉರುಳಿಸುವಲ್ಲಿ ಗಮನವಿಟ್ಟಿದೆ, ಬಿಜೆಪಿಯೇತರ ಸರ್ಕಾರದ ಮುಖ್ಯಮಂತ್ರಿಗಳನ್ನು ಬಂಧಿಸಿದ ಹಾಗೆ ತನ್ನನ್ನು ಸಹ ಬಂಧಿಸಲಾಗಿತ್ತು ಎಂದು ನಾಗೇಂದ್ರ ಹೇಳಿದ್ದಾರೆ. ಅವರು ತಮ್ಮನ್ನು ಅರವಿಂದ್ ಕೇಜ್ರಿವಾಲ್ ಮತ್ತು ಹೇಮಂತ್ ಸೊರೇನ್ ಜೊತೆ ಹೋಲಿಸಿಕೊಂಡಿದ್ದು ಹಾಸ್ಯಾಸ್ಪದ ಎಂದು ಜನಾರ್ಧನ ರೆಡ್ಡಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಜನಾರ್ಧನ ರೆಡ್ಡಿ ವಿರುದ್ಧ ಕಾಮೆಂಟ್ ಮಾಡಲ್ಲವೆಂದು ಹೇಳಿ ದೊಡ್ಡತನ ಪ್ರದರ್ಶಿಸಿದ ಬಿ ಶ್ರೀರಾಮುಲು