ದೊಡ್ಡಮಳೂರು ಗ್ರಾಮದಲ್ಲಿ ನಿಖಿಲ್ ಕುಮಾರಸ್ವಾಮಿ ಚುನಾವಣಾ ಪ್ರಚಾರ, ಮತಯಾಚನೆ
ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಎಲ್ಲರೂ ತಿಂಡಿ ತಿನ್ನುವಾಗ ಬಿಜೆಪಿ ಮುಖಂಡರೊಬ್ಬರು ತಮ್ಮ ಪಕ್ಷದ ಶಾಲನ್ನು ನಿಖಿಲ್ ಹೆಗಲ ಮೇಲೆ ಹೊದಿಸಿದರು. ಗುಂಪಿನಲ್ಲಿ ಕೆಲ ಬಿಜೆಪಿ ಮುಖಂಡರೂ ಇದ್ದರು.
ಚನ್ನಪಟ್ಟಣ: ಸಿಪಿ ಯೋಗೇಶ್ವರ್ ಕೋಟೆಹೊಲ ಗ್ರಾಮದಲ್ಲಿ ಪ್ರಚಾರಕ್ಕೆ ತೆರಳಿದರೆ ಅವರ ಪ್ರತಿಸ್ಪರ್ಧಿ ನಿಖಿಲ್ ಕುಮಾರಸ್ವಾಮಿ ದೊಡ್ಡಮಳೂರು ಗ್ರಾಮದಲ್ಲಿ ಪ್ರಚಾರಕ್ಕಾಗಿ ಪ್ರತ್ಯಕ್ಷರಾದರು. ಗ್ರಾಮದ ಜೆಡಿಎಸ್ ಮುಖಂಡರೊಬ್ಬರ ಮನೆಯಲ್ಲಿ ತಿಂಡಿಗೆ ಏರ್ಪಾಟು ಮಾಡಲಾಗಿತ್ತು. ಮನೆಯ ಮಹಿಳೆಯರು ನಿಖಿಲ್ಗೆ ಆರತಿ ಬೆಳಗಿ ಮನೆಯಲ್ಲಿ ಬರಮಾಡಿಕೊಳ್ಳುವುದನ್ನು ಕಾಣಬಹುದು. ಪ್ರಾಯಶಃ ಮನೆಯಲ್ಲೇ ತಿಂಡಿ ತಿಂದು ಬಂದಿದ್ದ ನಿಖಿಲ್ ಒಂದು ಇಡ್ಲಿಯನ್ನು ಮಾತ್ರ ತಟ್ಟೆಗೆ ಹಾಕಿಸಿಕೊಂಡರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಒಂದೆಡೆ ನಿಖಿಲ್ ಮತ್ತೊಂದೆಡೆ ಕುಮಾರಸ್ವಾಮಿ ಹಾಗೂ ಯದುವೀರ್; ಎನ್ಡಿಎ ಭರ್ಜರಿ ಮತಬೇಟೆ
Follow Us
Latest Videos

