ಬಿಜೆಪಿ ಜೊತೆ ಮೈತ್ರಿ ಬಳಿಕ ಜೆಡಿಎಸ್ ಪಕ್ಷದ ಶಾಸಕರು ನೈತಿಕವಾಗಿ ಕುಮಾರಸ್ವಾಮಿಯೊಂದಿಗಿಲ್ಲ: ಎಂ ಲಕ್ಷ್ಮಣ್, ಕೆಪಿಸಿಸಿ ವಕ್ತಾರ

ಶಿವಕುಮಾರ್ ಅವರನ್ನು ಯಾವ ಆಧಾರದ ಮೇಲೆ ಜೈಲಿಗೆ ಹಾಕಿಸುತ್ತಾರಂತೆ? ಅವರು ಯಾವುದೇ ಅಪರಾಧವೆಸಗಿಲ್ಲ ಮತ್ತು ಭ್ರಷ್ಟಾಚಾರ ನಡೆಸಿಲ್ಲ. ಅವರೊಬ್ಬ ಉದ್ಯಮಿ, ಶಿಕ್ಷಣ ಕೇಂದ್ರಗಳನ್ನು ನಡೆಸುತ್ತಿದ್ದಾರೆ ಮತ್ತು ರಿಯಲ್ಟರ್ ಕೂಡ ಹೌದು ಎಂದು ಲಕ್ಷ್ಮಣ್ ಹೇಳಿದರು. ಜೆಡಿಎಸ್ ಪಕ್ಷವನ್ನು ಕುಮಾರಸ್ವಾಮಿ ಫ್ಯಾಮಿಲಿ ಟ್ರಸ್ಟ್ ಮಾಡಿಕೊಂಡಿದ್ದಾರೆ, ಬಿಜೆಪಿ ಜೊತೆ ಮೈತ್ರಿ ಪಕ್ಷದ ಯಾವುದೇ ಶಾಸಕನಿಗೆ ಇಷ್ಟವಾಗಿಲ್ಲ ಎಂದು ಅವರು ಹೇಳಿದರು.

ಬಿಜೆಪಿ ಜೊತೆ ಮೈತ್ರಿ ಬಳಿಕ ಜೆಡಿಎಸ್ ಪಕ್ಷದ ಶಾಸಕರು ನೈತಿಕವಾಗಿ ಕುಮಾರಸ್ವಾಮಿಯೊಂದಿಗಿಲ್ಲ: ಎಂ ಲಕ್ಷ್ಮಣ್, ಕೆಪಿಸಿಸಿ ವಕ್ತಾರ
|

Updated on: Oct 10, 2023 | 3:10 PM

ಮೈಸೂರು: ನಗರದಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ (M Laxman), ಜೆಡಿಎಸ್ ಮತ್ತು ಬಿಜೆಪಿ ನಡುವೆ ಮೈತ್ರಿ ಏರ್ಪಟ್ಟ ನಂತರವೂ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಇನ್ನೂ ತಮ್ಮ ಹುದ್ದೆಯಲ್ಲಿ ಮುಂದುರಿದಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದರು. ಅಕ್ಟೋಬರ್ 16 ರವರೆಗೆ ಗಡುವು ಅವರು ಯಾಕೆ ಕೊಟ್ಟಿದ್ದಾರೆ, ಕೂಡಲೇ ಹೊರಬಂದು ತಮಗಿಷ್ಟವಾದ ಪಕ್ಷ ಸೇರುವಂತೆ ಸಲಹೆಯನ್ನೂ ಲಕ್ಷ್ಮಣ್ ನೀಡಿದರು. ಡಿಕೆ ಶಿವಕುಮಾರ್ (DK Shivakumar) ಬಗ್ಗೆ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮಾಡುತ್ತಿರುವ ಕಾಮೆಂಟ್ ಗಳಿಗೆ ಪ್ರತಿಕ್ರಿಯಿಸಿದ ಲಕ್ಷ್ಮಣ್, ಒಬ್ಬ ಒಕ್ಕಲಿಗ ನಾಯಕನ ಏಳಿಗೆಯನ್ನು ಸಹಿಸುವುದು ಕುಮಾರಸ್ವಾಮಿಗೆ ಆಗುತ್ತಿಲ್ಲ, ಇದನ್ನು ರಾಜ್ಯದ ಒಕ್ಕಲಿಗ ಸಮುದಾಯ ಗಮನಿಸಬೇಕು ಎಂದು ಹೇಳಿದರು. ಶಿವಕುಮಾರ್ ಅವರನ್ನು ಯಾವ ಆಧಾರದ ಮೇಲೆ ಜೈಲಿಗೆ ಹಾಕಿಸುತ್ತಾರಂತೆ? ಅವರು ಯಾವುದೇ ಅಪರಾಧವೆಸಗಿಲ್ಲ ಮತ್ತು ಭ್ರಷ್ಟಾಚಾರ ನಡೆಸಿಲ್ಲ. ಅವರೊಬ್ಬ ಉದ್ಯಮಿ, ಶಿಕ್ಷಣ ಕೇಂದ್ರಗಳನ್ನು ನಡೆಸುತ್ತಿದ್ದಾರೆ ಮತ್ತು ರಿಯಲ್ಟರ್ ಕೂಡ ಹೌದು ಎಂದು ಲಕ್ಷ್ಮಣ್ ಹೇಳಿದರು. ಜೆಡಿಎಸ್ ಪಕ್ಷವನ್ನು ಕುಮಾರಸ್ವಾಮಿ ಫ್ಯಾಮಿಲಿ ಟ್ರಸ್ಟ್ ಮಾಡಿಕೊಂಡಿದ್ದಾರೆ, ಬಿಜೆಪಿ ಜೊತೆ ಮೈತ್ರಿ ಪಕ್ಷದ ಯಾವುದೇ ಶಾಸಕನಿಗೆ ಇಷ್ಟವಾಗಿಲ್ಲ, ನೈತಿಕವಾಗಿ ಒಬ್ಬೇ ಒಬ್ಬ ಶಾಸಕ ಕುಮಾರಸ್ವಾಮಿ ಅವರೊಂದಿಗಿಲ್ಲ ಎಂದು ಲಕ್ಷ್ಮಣ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಗ್ಯಾಲಕ್ಸಿ ಹೊಸ ಸ್ಮಾರ್ಟ್​ಫೋನ್ ಭಾರತದ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ!
ಗ್ಯಾಲಕ್ಸಿ ಹೊಸ ಸ್ಮಾರ್ಟ್​ಫೋನ್ ಭಾರತದ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ!
ಇದು ಪ್ರಾರಂಭ ಅಷ್ಟೆ, ಪಿಕ್ಚರ್ ಇನ್ನೂ ಬಾಕಿ ಇದೆ ಎಂದ ಜಗದೀಶ್
ಇದು ಪ್ರಾರಂಭ ಅಷ್ಟೆ, ಪಿಕ್ಚರ್ ಇನ್ನೂ ಬಾಕಿ ಇದೆ ಎಂದ ಜಗದೀಶ್
ಗಾಂಧಿ ಜಯಂತಿ: ಮಕ್ಕಳೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಮೋದಿ
ಗಾಂಧಿ ಜಯಂತಿ: ಮಕ್ಕಳೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಮೋದಿ
ಬೆಂಗಳೂರು ಹನುಮಂತನಗರದಲ್ಲಿ ಲಾಂಗ್, ಬ್ಯಾಟ್ ಹಿಡಿದು ಪುಡಿ ರೌಡಿಗಳ ಅಟ್ಟಹಾಸ
ಬೆಂಗಳೂರು ಹನುಮಂತನಗರದಲ್ಲಿ ಲಾಂಗ್, ಬ್ಯಾಟ್ ಹಿಡಿದು ಪುಡಿ ರೌಡಿಗಳ ಅಟ್ಟಹಾಸ
ರಾಜ್​ಘಾಟ್​ನಲ್ಲಿ ರಾಷ್ಟ್ರಪಿತನಿಗೆ ಪುಷ್ಟನಮನ ಸಲ್ಲಿಸಿದ ಪ್ರಧಾನಿ ಮೋದಿ
ರಾಜ್​ಘಾಟ್​ನಲ್ಲಿ ರಾಷ್ಟ್ರಪಿತನಿಗೆ ಪುಷ್ಟನಮನ ಸಲ್ಲಿಸಿದ ಪ್ರಧಾನಿ ಮೋದಿ
ಪ್ರಯಾಣಿಕರ ಗಮನಕ್ಕೆ: ಬೆಳಗಾವಿ-ಮೀರಜ್ ನಡುವೆ ವಿಶೇಷ ರೈಲು ಸೇವೆ
ಪ್ರಯಾಣಿಕರ ಗಮನಕ್ಕೆ: ಬೆಳಗಾವಿ-ಮೀರಜ್ ನಡುವೆ ವಿಶೇಷ ರೈಲು ಸೇವೆ
ಕೇತುಗ್ರಸ್ತ ಸೂರ್ಯಗ್ರಹಣ ಪ್ರಭಾವ ಹೇಗಿರುತ್ತೆ ತಿಳಿಯಿರಿ
ಕೇತುಗ್ರಸ್ತ ಸೂರ್ಯಗ್ರಹಣ ಪ್ರಭಾವ ಹೇಗಿರುತ್ತೆ ತಿಳಿಯಿರಿ
Nithya Bhavishya: ಮಹಾಲಯ ಅಮವಾಸ್ಯೆ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಮಹಾಲಯ ಅಮವಾಸ್ಯೆ ದಿನದ ರಾಶಿ ಭವಿಷ್ಯ ತಿಳಿಯಿರಿ
ಪರೀಕ್ಷೆಯ ಹಿಂದಿನ ರಾತ್ರಿ ಬೆಂಗಳೂರು ಹಾಸ್ಟೆಲ್ ಹುಡುಗೀರ ಡ್ಯಾನ್ಸ್
ಪರೀಕ್ಷೆಯ ಹಿಂದಿನ ರಾತ್ರಿ ಬೆಂಗಳೂರು ಹಾಸ್ಟೆಲ್ ಹುಡುಗೀರ ಡ್ಯಾನ್ಸ್
ಮರೆಯಲಾಗದ ಉಡುಗೊರೆ; ಎದೆ ಮೇಲೆ ತಾಯಿಯ ಫೋಟೋ ಹಚ್ಚೆ ಹಾಕಿಸಿದ ಮಗ
ಮರೆಯಲಾಗದ ಉಡುಗೊರೆ; ಎದೆ ಮೇಲೆ ತಾಯಿಯ ಫೋಟೋ ಹಚ್ಚೆ ಹಾಕಿಸಿದ ಮಗ