AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವನು ಅಹಿಂಸಾ ಚೇತನ್ ಅಲ್ಲ, ಹಿಂಸಾ ಚೇತನ್’: ಗುಡುಗಿದ ಸಾರಾ ಗೋವಿಂದು

‘ಅವನು ಅಹಿಂಸಾ ಚೇತನ್ ಅಲ್ಲ, ಹಿಂಸಾ ಚೇತನ್’: ಗುಡುಗಿದ ಸಾರಾ ಗೋವಿಂದು

ಮದನ್​ ಕುಮಾರ್​
|

Updated on: May 05, 2026 | 8:58 PM

Share

ಡಾ. ರಾಜ್​ಕುಮಾರ್ ಸಮಾಧಿ ಬಗ್ಗೆ ನಟ ಚೇತನ್ ಅಹಿಂಸಾ ಅವರು ನೀಡಿದ ಹೇಳಿಕೆಯಿಂದ ಶುರುವಾದ ವಿವಾದ ಮುಂದುವರಿದಿದೆ. ಚೇತನ್ ವಿರುದ್ಧ ಕನ್ನಡಪರ ಸಂಘಟನೆಗಳು, ರಾಜ್​ಕುಮಾರ್ ಅಭಿಮಾನಿಗಳು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಸಾರಾ ಗೋವಿಂದು ಅವರು ಮಾತನಾಡಿದರು. ವಿಡಿಯೋ ಇಲ್ಲಿದೆ ನೋಡಿ.

ಡಾ. ರಾಜ್​ಕುಮಾರ್ ಸಮಾಧಿ ಬಗ್ಗೆ ನಟ ಚೇತನ್ ಅಹಿಂಸಾ (Chetan Ahimsa) ಅವರು ನೀಡಿದ ಹೇಳಿಕೆಯಿಂದ ಶುರುವಾದ ವಿವಾದ ಮುಂದುವರಿದಿದೆ. ಚೇತನ್ ವಿರುದ್ಧ ಕನ್ನಡಪರ ಸಂಘಟನೆಗಳು, ರಾಜ್​ಕುಮಾರ್ ಅಭಿಮಾನಿಗಳು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಸಾರಾ ಗೋವಿಂದು ಅವರು ಮಾತನಾಡಿದರು. ‘ಅವನು ಅಹಿಂಸಾ ಚೇತನ್ ಅಲ್ಲ, ಹಿಂಸಾ ಚೇತನ್. ಅವನು ನನ್ನ ಮೇಲೆ ಕೇಸ್ ಹಾಕಿದ್ದ. ಅದು ಎಫ್​ಐಆರ್ ಆಗಿದೆ. ಅವನ ಎಫ್​ಐಆರ್​ಗೆ ಹೆದರಿ ನಾವು ಯಾರೂ ಇಲ್ಲಿಗೆ ಬಂದಿಲ್ಲ. ಕನ್ನಡಪರ ಹೋರಾಟಗಾರರೆಲ್ಲ ಅವನ ವಿರುದ್ಧ ಮೊಕದ್ದಮೆ ಹೂಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಇಲ್ಲಿ ಕೇವಲ ರಾಜ್​ಕುಮಾರ್ ಅಭಿಮಾನಿಗಳ ಸಂಘ ಮಾತ್ರ ಸೇರಿಲ್ಲ. ರಕ್ಷಣಾ ವೇದಿಕೆ, ಕನ್ನಡ ಸೇನೆ, ಕನ್ನಡ ಜಾಗೃತಿ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಇಲ್ಲಿಗೆ ಬಂದು ನನಗೆ ಬೆಂಬಲ ನೀಡಿದ್ದಾರೆ. ರಾಜ್​ಕುಮಾರ್ ವಿಚಾರದಲ್ಲಿ ಈವರೆಗೂ ಯಾರೂ ಸೊಲ್ಲು ಎತ್ತಿರಲಿಲ್ಲ. ಆದರೆ ನಿರುದ್ಯೋಗಿ ಚೇತನ್ ಪ್ರಚಾರಕ್ಕಾಗಿ ಈ ಕೆಲಸ ಮಾಡಿದ್ದಾನೆ’ ಎಂದು ಸಾರಾ ಗೋವಿಂದು (Sa Ra Govindu) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us