ಡಾ ಸುಧಾಕರ್ ವರಿಷ್ಠರ ಬಳಿ ವಿಜಯೇಂದ್ರ ವಿರುದ್ಧ ದೂರು ಒಯ್ದಿದ್ದರೆ ತಪ್ಪೇನೂ ಇಲ್ಲ: ಪಿ ರಾಜೀವ್, ಶಾಸಕ
ಡಾ ಸುಧಾಕರ್ ವರಿಷ್ಠರಿಗೆ ದೂರು ಸಲ್ಲಿಸುವುದರಲ್ಲಿ ಯಾವುದೇ ತಪ್ಪಿಲ್ಲ, ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದಾದರೂ ನಿಯಮದ ಉಲ್ಲಂಘನೆಯಾದರೆ ದೂರು ಸಲ್ಲಿಸಲು ಅವಕಾಶವಿದೆ ಮತ್ತು ಅದಕ್ಕೆಂದೇ ಅಪೀಲ್ಸ್ ಅಥಾರಿಟಿಯೊಂದನ್ನು ರಚಿಸಲಾಗಿರುತ್ತದೆ, ಗಮನಿಸಬೇಕಾದ ಸಂಗತಿಯೆಂದರೆ, ಜಿಲ್ಲೆಯೊಂದರ ಅಧ್ಯಕ್ಷನ ಚುನಾವಣೆ ನಡೆಯುವಾಗ ಅಲ್ಲಿನ ಚುನಾವಣಾಧಿಕಾರಿ ಬೇರೆ ಜಿಲ್ಲೆಯವರಾಗಿರುತ್ತಾರೆ ಎಂದು ರಾಜೀವ್ ಹೇಳಿದರು.
ಬೆಂಗಳೂರು: ಸಂಸದ ಡಾ ಕೆ ಸುಧಾಕರ್ ಅವರು ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಪಿ ರಾಜೀವ್ ಅವರು, ಸಂಸದರ ಅರೋಪಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ, ಅವರು ಮಾಡಿರುವ ಆರೋಪಗಳು ಚುನಾವಣೆ ಹಿನ್ನೆಲೆಯಲ್ಲಿ ಬಂದಿರುವುದರಿಂದ ಪಕ್ಷದ ರಾಜ್ಯ ಚುನಾವಣಾಧಿಕಾರಿಗಳು ಗಮನಿಸಿರುತ್ತಾರೆ ಮತ್ತು ಅವರ ಅಭಿಪ್ರಾಯವನ್ನೂ ಪಡೆದಿರುತ್ತಾರೆ, ಅಧಿಕೃತವಾದ ಮಾಹಿತಿ ಇನ್ನೂ ಕಾರ್ಯಾಲಯ ತಲುಪಿಲ್ಲ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಿಜಯೇಂದ್ರರನ್ನು ಬದಲಾಯಿಸದಿದ್ದರೆ ಪಕ್ಷ ಅವನತಿ ತಲುಪೋದು ಗ್ಯಾರಂಟಿ: ಡಾ ಕೆ ಸುಧಾಕರ್, ಸಂಸದ