ಬೆಂಗಳೂರು: ಸಚಿವ ಸಂಪುಟ ಸಭೆಗೆ ಮಳೆಯಲ್ಲಿ ಬಂದ ಸಚಿವರಿಗೆ ಅಧಿಕಾರಿಗಳು ಛತ್ರಿ ಹಿಡಿಯಬೇಕಾಯಿತು!

ಕೆಲ ಸಚಿವರು ಬೇಗ ಬಂದು ಮೀಟಿಂಗ್ ಹಾಲ್ ಸೇರಿಬಿಟ್ಟಿದ್ದರು ಕೆಲವರು ತಡವಾಗಿ ಬಂದರು. ವಿಡಿಯೋದಲ್ಲಿ ತಡವಾಗಿ ಆಗಮಿಸಿದವರಲ್ಲಿ ಮೊದಲಿಗೆ ವಸತಿ ಖಾತೆ ಸಚಿವ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ಬರೋದನ್ನು ನೋಡಬಹುದು.

ಬೆಂಗಳೂರು: ಸಚಿವ ಸಂಪುಟ ಸಭೆಗೆ ಮಳೆಯಲ್ಲಿ ಬಂದ ಸಚಿವರಿಗೆ ಅಧಿಕಾರಿಗಳು ಛತ್ರಿ ಹಿಡಿಯಬೇಕಾಯಿತು!
|

Updated on: Aug 19, 2023 | 6:23 PM

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು ವಿಧಾನ ಸೌಧದಲ್ಲಿ ಸಚಿವ ಸಂಪುಟ ಸಭೆಯೊಂದನ್ನು ನಡೆಸಿದರು. ಅವರು ತಮ್ಮ ಸಿಬ್ಬಂದಿಯ ಮೂಲಕ ಎಲ್ಲ ಸಚಿವರಿಗೆ ಮೀಟಿಂಗ್ ಗೆ ಹಾಜರಾಗುವಂತೆ ಸಂದೇಶ ಕಳಿಸುವಾಗ ಪ್ರಾಯಶಃ ಮಳೆ ಇರಲಿಲ್ಲ, ಆದರೆ ಶುರುವಾಗುವ ಹೊತ್ತಿಗೆ ನಗರದಲ್ಲಿ ಜೋರು ಮಳೆ. ಕೆಲ ಸಚಿವರು ಬೇಗ ಬಂದು ಮೀಟಿಂಗ್ ಹಾಲ್ ಸೇರಿಬಿಟ್ಟಿದ್ದರು ಕೆಲವರು ತಡವಾಗಿ ಬಂದರು. ವಿಡಿಯೋದಲ್ಲಿ ತಡವಾಗಿ ಆಗಮಿಸಿದವರಲ್ಲಿ ಮೊದಲಿಗೆ ವಸತಿ ಖಾತೆ ಸಚಿವ ಬಿ ಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ಬರೋದನ್ನು ನೋಡಬಹುದು. ದ್ವಾರದ ಎಡಭಾಗದಲ್ಲಿ ಕೆಮೆರಾಗಳೊಂದಿಗೆ ನಿಂತಿದ್ದ ಮಾಧ್ಯಮ ಪ್ರತಿನಿಧಿಗಳತ್ತ ಮುಗುಳ್ನಗೆ ಬೀರಿ ಕೈ ಬೀಸುತ್ತಾ ಅವರು ಒಳಗೆ ಹೋಗುತ್ತಾರೆ. ನಂತರ ಆಗಮಿಸಿದ್ದು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಚಿವ ಬಿ ನಾಗೇಂದ್ರ (B Nagendra). ಸಿದ್ದರಾಮಯ್ಯ ಸಂಪುಟದಲ್ಲಿ ಕಿರಿ ವಯಸ್ಸಿನ ಮಂತ್ರಿಯಾಗಿರುವ ನಾಗೇಂದ್ರ ಸುದ್ದಿಗಾರರೊಂದಿಗೆ ಮಾತಾಡುವಷ್ಟು ವ್ಯವಧಾನ ಪ್ರದರ್ಶಿಸಿದರು. ಕೊನೆ ಆಗಮಿಸಿದ್ದು ಹಿರಿಯ ಮತ್ತು ಗಂಭೀರ ಸ್ವಭಾವದ ಗೃಹ ಸಚಿವ ಜಿ ಪರಮೇಶ್ವರ (G Parameshwara). ಅವರಿಗೂ ಪತ್ರಕರ್ತರು ಒಂದು ಪ್ರಶ್ನೆ ಕೇಳಿದಾಗ ಸಚಿವರು ಗೊತ್ತಿಲ್ಲವೆಂಬಂತೆ ಕೈಯಾಡಿಸಿ ಒಳಗೆ ಹೋದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ